ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಾರ್ಚ್ 13ರ ನಾಳೆ ಪ್ರತಿಭಟನಾ ಮೆರವಣಿಗೆ ನಡೆಯಲಿರುವುದರಿಂದ, ಬೇರೆ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಶಿವಮೊಗ್ಗ ನಗರಕ್ಕೆ ಬರುವ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ದೃಷ್ಠಿಯಿಂದ ಈ ಕೆಳಕಂಡಂತೆ ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ. ಸಾರ್ವಜನಿಕರು ಮಾರ್ಗ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಕೈಗೊಳ್ಳಲು ಈ ಮೂಲಕ ತಿಳಿಸಲಾಗಿದೆ.
ಭದ್ರಾವತಿಯ ಕಡೆಯಿಂದ ಬರುವ ವಾಹನಗಳಿಗೆ
ಎಂ.ಆರ್.ಎಸ್ ವೃತ್ತ – ಸಂದೇಶ್ ಮೋಟಾರ್ಸ್ ವೃತ್ತ – ನ್ಯೂ ಮಂಡ್ಲಿ ವೃತ್ತ – ಇಲಿಯಾಜ್ ನಗರ – ಬುದ್ದಾ ನಗರ
ತೀರ್ಥಹಳ್ಳಿಯ ಕಡೆಯಿಂದ ಬರುವ ವಾಹನಗಳಿಗೆ
ನ್ಯೂ ಮಂಡ್ಲಿ ವೃತ್ತ – ಇಲಿಯಾಜ್ ನಗರ – ಬುದ್ದಾ ನಗರ
ಸಾಗರದ ಕಡೆಯಿಂದ ಬರುವ ವಾಹನಗಳಿಗೆ
ಆಲ್ಕೊಳ ಸರ್ಕಲ್ – ಗೋಪಾಳ – ಇಲಿಯಾಜ್ ನಗರ – ಬುದ್ದಾ ನಗರ
ಶಿಕಾರಿಪುರದ ಕಡೆಯಿಂದ ಬರುವ ವಾಹನಗಳಿಗೆ
ಉಷಾ ನರ್ಸಿಂಗ್ ಹೋಂ ವೃತ್ತ – ವಿನೋಬನಗರ ಪೊಲೀಸ್ ಚೌಕಿ – ಆಲ್ಕೊಳ ವೃತ್ತ, ಗೋಪಾಳ – ಇಲಿಯಾಜ್ ನಗರ – ಬುದ್ದಾ ನಗರ
ಚಿತ್ರದುರ್ಗದ ಕಡೆಯಿಂದ ಬರುವ ವಾಹನಗಳಿಗೆ
ವಿದ್ಯಾನಗರ – ಎಂ.ಆರ್.ಎಸ್ ವೃತ್ತ – ಸಂದೇಶ್ ಮೋಟಾರ್ಸ್ ವೃತ್ತ – ನ್ಯೂ ಮಂಡ್ಲಿ ವೃತ್ತ, ಇಲಿಯಾಜ್ ನಗರ, ಬುದ್ದಾ ನಗರ
ಹೊನ್ನಾಳಿ ಕಡೆಯಿಂದ ಬರುವ ವಾಹನಗಳಿಗೆ
ಶಂಕರಮಠ ವೃತ್ತ – ವಿದ್ಯಾನಗರ – ಎಂ.ಆರ್.ಎಸ್ವೃತ್ತ – ಸಂದೇಶ್ ಮೋಟಾರ್ಸ್ ವೃತ್ತ – ನ್ಯೂ ಮಂಡ್ಲಿ ವೃತ್ತ, ಇಲಿಯಾಜ್ ನಗರ – ಬುದ್ದಾ ನಗರ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post