ಜೈನಧರ್ಮದ ದೃಷ್ಟಿಯಿಂದ ದೀಪಾವಳಿಯನ್ನು ಆಚರಿಸುವ ಹಿನ್ನೆಲೆ ಅತಿ ವಿಶೇಷವಾಗಿದೆ.
ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ಆಚರಣೆಗಳು ತನ್ನದೇ ಆದ ಧಾರ್ಮಿಕ ಹಿನ್ನಲೆಗಳಿಂದ ಮಾನವ ಜೀವನದಲ್ಲಿ ಅವಿಭಾಜ್ಯ ಅಂಗಗಳಾಗಿ ಹಬ್ಬಗಳು ಇವೆ. ಸಮಾನ್ಯವಾಗಿ ವರ್ಷದ ಎಲ್ಲ ತಿಂಗಳುಗಳಲ್ಲಿ ಒಂದಿಲ್ಲ ಒಂದು ರೀತಿಯಿಂದ ಯಾವುದೂ ನಿಮಿತ್ತಗಳಿಂದ ನೂತನ ಪರಂಪರೆಯಿಂದ ಹಬ್ಬಗಳು ಆಗಮಿಸುವುದುಂಟು. ಹಬ್ಬಗಳನ್ನು ಕೇವಲ ಪೂಜೆ ನಲಿವು – ಸಂತೋಷ ಸಂಭ್ರಮಗಳಿಗೆ ಮೀಸಲಾಗದೆ. ಅದಕ್ಕಿಂತ ಮುಂದೆ ನಮ್ಮ ಚಿಂತನೆ, ವಿಚಾರಗಳಿಂದ ನಾವು ಈ ಶ್ರೇಷ್ಠ ಮನುಷ್ಯಭವದಲ್ಲಿ ಜನ್ಮ-ಮರಣಗಳಿಂದ ಮುಕ್ತನಾಗಿ ನಿತ್ಯ ಸ್ವರೂಪವನ್ನು ಪಡೆಯುವುದೇ ಎಲ್ಲ ಧರ್ಮಗಳ ಧ್ಯೇಯವಾಗಿದೆ.
ಇಂಥ ಹಬ್ಬಗಳಲ್ಲಿ ದೀಪಾವಳಿ ಹಬ್ಬವು ಅತಿ ಪ್ರಮುಖವಾಗಿದ್ದು. ಇದರಷ್ಟು ಸಡಗರ-ಸಂಭ್ರಮ-ವಿಜೃಂಭಣೆ ಇನ್ನುಳಿದ ಯಾವ ಹಬ್ಬಗಳಿಗೂ ಇಲ್ಲ.
ಎಲ್ಲಿ ನೋಡಿದರು ದೀಪಗಳ ಸಾಲು-ಸಾಲುಗಳು ವಿವಿಧ ಬಣ್ಣದ ಲೈಟುಗಳು. ಆಕಾಶ ಬುಟ್ಟಿಗಳು. ನಕ್ಷತ್ರದ ದೀಪಗಳು, ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ವಿಶೇಷ ಭೋಜನಗಳು ಪಟಾಕಿ, ಸಿಡಿ ಮದ್ದುಗಳನ್ನು ಹಚ್ಚುತ್ತಾರೆ. ಇದರಿಂದ ವಾಯು ಮಾಲಿನ್ಯ, ಶಬ್ದಮಲಿನ್ಯ, ಪರಿಸರನಾಶ, ವಾತಾವರಣ ಕಲ್ಮಶ ಹಾಗೂ ಅನಂತ ಜೀವರಾಶಿಗಳ ಮಾರಣ ಹೋಮವಾಗುತ್ತದೆ.
ಸಣ್ಣ ಸಣ್ಣ ಸೂಕ್ಷ್ಮ ಕ್ರಿಮಿ, ಕೀಟಗಳು ಸತ್ತು ಹೋಗುತ್ತವೆ. ಭಾರಿ ಪ್ರಮಾಣದಲ್ಲಿ ಹಿಂಸೆಯಾಗುತ್ತದೆ. ಹಣವು ಪೋಲಾಗುತ್ತದೆ. ಆಕಸ್ಮಿಕವಾಗಿ ಅನೇಕ ದುರ್ಘಟನೆಗಳು ಅನಾಹುತಗಳು ನಡೆದು ಹೋಗುತ್ತದೆ. ಕಣ್ಣು, ಕೈ-ಕಾಲುಗಳಿಗೆ ಗಾಯಗಳಾಗುತ್ತವೆ. ಅಪಾರ ಪ್ರಾಣ ಹಾನಿಯಾಗುತ್ತದೆ. ಗ್ರಾಮಿಣ ಪ್ರದೇಶಗಳಲ್ಲಿ ಗೋವುಗಳನ್ನು ಬೆದರಿಸುವ ಆಟವನ್ನುವಾಡುತ್ತಾರೆ. ಇದರಿಂದ ತುಂಬ ಅನಾಹುತ ಹಾಗೂ ಅವುಗಳಿಗೆ ಹಿಂಸೆಯಾಗುತ್ತದೆ.
ಆದರೆ ಜೈನರು ಆಚರಿಸುವ ದೀಪಾವಳಿ ಅಹಿಂಸೆಯಿಂದ ಕೂಡಿದ್ದು ಆತ್ಮ ಕಲ್ಯಾಣವನ್ನು ಸಾಧಿಸಿ ಮುಕ್ತಿಯನ್ನು ಪಡೆಯುವ ಉದ್ದೇಶವಾಗಿದೆ. ಜೈನರ ೨೪ ಜನ ತೀರ್ಥಂಕಾರದಲ್ಲಿ ಕೊನೆಯ ತೀರ್ಥಂಕರರು ಭ. ಮಹಾವೀರರು ಆಶ್ವಿಜ ಅಮವಾಸ್ಯೆಯ ಪ್ರಭಾತ ಕಾಲದಲ್ಲಿ ಕರ್ಮಗಳನ್ನು ನಾಶ ಮಾಡಿ ಈಗಿನ ಜಾರ್ಖಂಡ್ನಲ್ಲಿರುವ ಪಾವಾಪುರಿಯಲ್ಲಿ ನಿರ್ವಾಣವಾದರು. ಈ ವಿಷಯವನ್ನು ಇಂದ್ರನು ತಿಳಿದು ಮೋಕ್ಷ ಕಲ್ಯಾಣ ಉತ್ಸವವನ್ನು ಆಚರಿಸಲು ತನ್ನ ಪರಿವಾರ ಸಹಿತ ಸಂಭ್ರಮದಿಂದ ಬರುವನು. ದೇವ-ದೇವತೆಗಳೂ ಅಸಂಖ್ಯೆ ಜನರೂ ನಾನಾ ಪ್ರಕರಾದ ದೀಪಗಳನ್ನು ಬೆಳಗುತ್ತ ಭಗವಾನರ ದರ್ಶನಕ್ಕೆ ಬರುವರು. ಪೂಜೆ ಮಾಡುವರು. ಇದನ್ನು ಜೈನರು ಮೋಕ್ಷ ಲಕ್ಷ್ಮೀ ಯೆಂದು ಆಚರಿಸುತ್ತೇವೆ.
ಭ.ಮಹಾವೀರರ ಪ್ರಮುಖ ಶಿಷ್ಯನಾದ ಗೌತಮ ಗಣಧರರಿಗೆ ಅಂದು ಸಂಜೆ ಕೇವಲ ಜ್ಞಾನವು ಪ್ರಾಪ್ತವಾಯಿತು. ಇದನ್ನು ಜೈನರು ಶ್ರದ್ಧಾ ಭಕ್ತಿಯಿಂದ ಜ್ಞಾನಲಕ್ಷ್ಮೀ ಪೂಜೆಯನ್ನು ಮಾಡುವರು. ಅದುದರಿಂದ ಈ ಸಂದರ್ಭದಲ್ಲಿ ಬಸದಿಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಮೋಕ್ಷಲಕ್ಷ್ಮೀ, ಜ್ಞಾನಲಕ್ಷ್ಮೀ ಪೂಜೆ ಮಾಡಲಾಗುವುದು.
ಜೈನರ ದೀಪಾವಳಿಯು ಧಾರ್ಮಿಕ ಹಿನ್ನಲೆಯ ಸವರೂಪವಾಗಿದ್ದು ಜೈನ ದರ್ಶನವು ತಾಗ್ಯ, ತಪಸ್ಸು ಹಾಗೂ ಜ್ಞಾಸಾಧನೆಯ ಮಹತ್ವವನ್ನು ಪ್ರತಿ ಪಾದಿಸುತ್ತದೆ. ಅದುದರಿಂದ ಜೈನರಿಗೆ ದೀಪಾಳಿಯು ಅಧ್ಯಾತ್ಮಿಕ ಉನ್ನತಿಗಾಗಿ ಆಚರಿಸುವ ಹಬ್ಬವಾಗಿದೆ. ಆದರೆ ಇತ್ತೀಚೆಗೆ ಈ ನಿಜಸ್ವರೂಪವು ಮರೆಯಾಗಿ ಮುಕ್ತಿ ಲಕ್ಷ್ಮೀ ಜ್ಞಾನಲಕ್ಷ್ಮೀ, ಅಧ್ಯಾತ್ಮಿಕ ಲಕ್ಷ್ಮೀ ಸ್ಥಾನವನ್ನು ಇಂದು ಧನಲಕ್ಷ್ಮೀ ಆಕ್ರಮಿಸಿ ಕೊಂಡಂತೆ ತೋರುತ್ತದೆ.
ಈ ರೀತಿಯ ಬದಲಾವಣೆಗೆ ಸಾಮಾನ್ಯ ಮನುಷ್ಯರಲ್ಲಿ ಸಂಪತ್ತು ಧನದ ಬಗೆಗೆ ಇರುವ ಮೋಹವೇ ಕಾರಣವಾಗಿರಬೇಕು. ಇದರಿಂದ ರಾಗ-ದ್ವೇಷ-ಸ್ವಾರ್ಥಗಳೇ ಉಂಟಾಗುತ್ತವೆ. ಮನಸ್ಸಿನ ಶಾಂತಿಯನ್ನು ನಷ್ಟಗೊಳಿಸುತ್ತದೆ. ಆದುದರಿಂದ ಸಮಭಾವದಿಂದ, ಚಿಂತನೆ, ವಿವೇಕಗಳಿಂದ ಯಾವುದು ಒಳಿತು ಕೆಡುಕಗಳನ್ನು ವಿಚಾರ ಮಾಢಿ ನಾವುಗಳನ್ನು ನಮ್ಮ ಹಬ್ಬಗಳ ಆಚರಣೆಯನ್ನು ಮಾಡಬೇಕೆಂದು ಆಶಿಸುತ್ತೇವೆ.
ಜೈನರ ದೀಪಾವಳಿಯು ಧಾರ್ಮಿಕ ಹಿನ್ನಲೆಯ ಸವರೂಪವಾಗಿದ್ದು ಜೈನ ದರ್ಶನವು ತಾಗ್ಯ, ತಪಸ್ಸು ಹಾಗೂ ಜ್ಞಾಸಾಧನೆಯ ಮಹತ್ವವನ್ನು ಪ್ರತಿ ಪಾದಿಸುತ್ತದೆ. ಅದುದರಿಂದ ಜೈನರಿಗೆ ದೀಪಾಳಿಯು ಅಧ್ಯಾತ್ಮಿಕ ಉನ್ನತಿಗಾಗಿ ಆಚರಿಸುವ ಹಬ್ಬವಾಗಿದೆ. ಆದರೆ ಇತ್ತೀಚೆಗೆ ಈ ನಿಜಸ್ವರೂಪವು ಮರೆಯಾಗಿ ಮುಕ್ತಿ ಲಕ್ಷ್ಮೀ ಜ್ಞಾನಲಕ್ಷ್ಮೀ, ಅಧ್ಯಾತ್ಮಿಕ ಲಕ್ಷ್ಮೀ ಸ್ಥಾನವನ್ನು ಇಂದು ಧನಲಕ್ಷ್ಮೀ ಆಕ್ರಮಿಸಿ ಕೊಂಡಂತೆ ತೋರುತ್ತದೆ.
ಲೇಖಕರು:ಆರ್. ಪಾರ್ಶ್ವನಾಥ ಜೈನ್
ಚಿಂತಕರು
ಮೊ: 9964125280














