ಆ ಸಾಮಗ್ರಿ ಜತೆ ಅಕ್ರಂ ತನ್ನ ಕಂಪನಿಗೆ ಹೋಗಿ ಉಳಿದ ಒಂದು ಚಲನ್ಅನ್ನು ಫೈಲ್ ಮಾಡಬೇಕಿತ್ತು. ಈತ ಏನು ಮಾಡಲಾರಂಭಿಸಿದನೆಂದರೆ, ಬ್ಯಾಂಕಿನ ಸಿಬ್ಬಂದಿಯೊಬ್ಬನಿಗೆ ವಾರಾಂತ್ಯದಲ್ಲಿ ಮೋಜು-ಮಸ್ತಿ ಮಾಡಿಸಿ ಬುಟ್ಟಿಗೆ ಹಾಕಿಕೊಂಡ. ಹಾಗಾಗಿ ಆ ಸಿಬ್ಬಂದಿ ಅಕ್ರಮ್ನನ್ನು ತನ್ನ ಚೇಂಬರ್ನಲ್ಲೇ ಕೂರಿಸಿಕೊಂಡು, ಆತನ ಕೈಗೇ ಸೀಲ್ ಕೊಟ್ಟು, ‘ಚಲನ್ ಮೇಲೆ ನೀವೇ ಒತ್ತಿಕೊಳ್ಳಿ’ ಎಂದು ಸಲಿಗೆ ತೋರತೊಡಗಿದ. ನಾಲ್ಕು ಸೆಟ್ಗಳ 16 ಚಲನ್ ಮತ್ತು ನಾಲ್ಕು ಎಂದಿಟ್ಟುಕೊಳ್ಳಿ, ಅಕ್ರಮ್ ಎಲ್ಲ ಚಲನ್ಗಳ ಮೇಲೆ ಸೀಲ್ ಒತ್ತಿಕೊಂಡ. ಆದರೆ ಬ್ಯಾಂಕ್ಗೆ ಮೂರೇ ಸೆಟ್ಕೊಟ್ಟ. ಒಂದು ಚೆಕ್ ಸಮೇತ ಒಂದು ಸೆಟ್ ಚಲನ್ಗಳನ್ನು ಜೇಬಿಗಿಳಿಸಿಕೊಂಡ.
ಅದರಲ್ಲಿ ಒಂದು ಚಲನ್ ಅನ್ನು ಕಸ್ಟಮ್ಸ್ ಇಲಾಖೆಗೆ ಕೊಟ್ಟು ಸಾಮಗ್ರಿ ತೆಗೆದುಕೊಂಡು ಹೋದ. ಎಲ್ಲ ಸೆಟ್ಗಳ ಒಂದೊಂದು ಚಲನ್ಗಳನ್ನು ಕಂಪನಿಯಲ್ಲಿ ಫೈಲ್ ಮಾಡಿದ. ತಾನು ಉಳಿಸಿಕೊಂಡ ಒಂದು ಚೆಕ್ ಮೇಲೆ, ಪೇ ಟು ಕಸ್ಟಮ್ಸ್ (ಕೋಡ್ ನಂ.xxxx) ಎಂದು ಟೈಪ್ ಮಾಡಲಾದ ಮುಂದೆ ’and’ ಎಂದು ಬರೆದು ತಾನು ಸೃಷ್ಟಿಸಿಕೊಂಡ ನಕಲಿ ಕಂಪನಿಯ ಹೆಸರು ಮತ್ತು ತನ್ನ ಅಕೌಂಟ್ ನಂಬರ್ ದಾಖಲಿಸುತ್ತಿದ್ದ. ಹಸ್ತಾಕ್ಷರದ ತಿದ್ದುಪಡಿ ತಡೆಯಲು ಆಗ ಗೋದ್ರೇಜ್ ಚೆಕ್ ರೈಟರ್ ಟೈಪಿಂಗ್ ಮೆಷಿನ್ನಲ್ಲಿ ಚೆಕ್ ಬರೆಯಲಾಗುತ್ತಿತ್ತು.
ಟೈಪ್ ಆದ ಅಕ್ಷರ ಚಿಕ್ಕಚಿಕ್ಕ ರಂಧ್ರಗಳಾಗುತ್ತಿದ್ದರಿಂದ ತಿದ್ದಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಚಾಲಾಕಿ ಅಕ್ರಮ್ ಮನೆಯಲ್ಲಿ ತಾನೊಂದು ಟೈಪಿಂಗ್ ಮೆಷಿನ್ ಇರಿಸಿಕೊಂಡು, ಆ ಚೆಕ್ನಲ್ಲಿನ ತನ್ನ ಖಾತೆ ನಂಬರ್ ದಾಖಲಿಸುತ್ತಿದ್ದ. ದೊಡ್ಡ ಮೊತ್ತದ ಚೆಕ್ ಎಗರಿಸುತ್ತಿದ್ದ. ಚೆಕ್ನ ಅಕೌಂಟ್ ಬರೆದ ಜಾಗದಲ್ಲಿ ಖಾಲಿ ಸ್ಥಳ ಬಿಟ್ಟಿದ್ದೇ ಕಂಪನಿಗೆ ಮುಳುವಾಯಿತು. ಹೀಗೆ ಆ ಚೆಕ್ನಲ್ಲಿ ಸ್ವಲ್ಪ ಭಾಗ ಕಸ್ಟಮ್ಸ್ಗೆ ಸೇರುತ್ತಿದ್ದರೆ, ದೊಡ್ಡ ಪಾಲು ಈತನ ಖಾತೆಗೆ ಜಮೆಯಾಗುತ್ತಿತ್ತು. ಈತನ ಈ ಅಕ್ರಮಗಳು 1986ರಿಂದ 1990ರವರೆಗೆ ನಿರಾತಂಕವಾಗಿ ನಡೆದವು. ಈತನ ನಕಲಿ ಕಂಪನಿಯ ಖಾತೆಗೆ ಲಕ್ಷ ಲಕ್ಷ ಸೇರಿ ಒಟ್ಟು 3 ಕೋಟಿ 95ಲಕ್ಷ ರೂ. ಹರಿದುಬಂದಿತ್ತು!
ನಾನಾಗ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಸ್ಐ ಆಗಿದ್ದೆ. ಆ ಚೀಫ್ ಮ್ಯಾನೇಜರ್ ನನ್ನ ಬಳಿ ಬಂದು ದೂರು ದಾಖಲಿಸಿದರು. ಆ ಕಂಪನಿಯ ಮಾಲೀಕರ ಮಗನಿಗೆ ಆಗ ಕೇಂದ್ರ ಗುಪ್ತಚರ ದಳ (ಐಬಿ)ದ ಮುಖ್ಯಸ್ಥರ ಮಗಳನ್ನು ಮದುವೆ ಮಾಡಿಕೊಡಲಾಗಿತ್ತು. ಹಾಗಾಗಿ ಪೊಲೀಸ್ ಆಯುಕ್ತರಾಗಿದ್ದ ಆರ್. ರಾಮಲಿಂಗಂ ಮೇಲೆ ಒತ್ತಡವಿತ್ತು. ಪ್ರಕರಣವನ್ನು ಅವರು ನನಗೆ ವಹಿಸಿದರು. ಮೊದಮೊದಲು ಈ ಚಲನ್, ಚೆಕ್, ಇಂಡೆಂಟ್, ಕಸ್ಟಮ್ಸ್ ಡ್ಯೂಟಿ ಇತ್ಯಾದಿಯ ತಲೆಬುಡ ಅರ್ಥವಾಗಲಿಲ್ಲ. ಈ ವಂಚನೆಯ ಒಳಸುಳಿ ಅರಿಯಲು ಸ್ವಲ್ಪ ‘ವಾಣಿಜ್ಯ ಅಧ್ಯಯನ’ ನಡೆಸಬೇಕಾಯಿತು. ಮನೆಗೆ ಹೋದರೆ ಬೀಗ ಹಾಕಿತ್ತು. ಪರಾರಿಯಾದ ಕೆಲವೇ ಗಂಟೆಗಳಲ್ಲಿ ಆತ ಪತ್ನಿ ಜತೆ ದುಬೈ ತಲುಪಿದ್ದ.
ಆತ ಪ್ರತಿ ರಾತ್ರಿ 8 ಗಂಟೆ ಸುಮಾರಿಗೆ ದುಬೈನಿಂದ ತಂದೆಗೆ ಫೋನ್ ಮಾಡುತ್ತಿದ್ದ. ಆತನ ತಂದೆಯನ್ನು ಕಮಿಷನರ್ ಕಚೇರಿಗೆ ಕರೆ ತಂದು, ಅಲ್ಲಿಂದ ದುಬೈಗೆ ಫೋನ್ ಮಾಡಿಸಿದೆ. ‘ನಾನು ಮೈಸೂರಿನಿಂದ ಫೋನ್ ಮಾಡುತ್ತಿದ್ದೇನೆ, ಪೊಲೀಸರು ನಿನ್ನನ್ನು ಹುಡುಕುತ್ತಿದ್ದಾರೆ. ಬೇಗ ಬಂದು ಶರಣಾಗು.’ ಎಂದು ಅವರು ವಿನಂತಿಸಿದರು. ತಕ್ಷಣ ಅಕ್ರಮ್ ಫೋನ್ ಕಟ್ ಹತ್ತು ನಿಮಿಷಗಳ ಬಳಿಕ ಅದೇ ನಂಬರ್ಗೆ ಕರೆ ಮಾಡಿ ‘ಅಪ್ಪಾ ನೀನೀಗ ಮೈಸೂರಿನಲ್ಲಿಲ್ಲ. ಬೆಂಗಳೂರು ಪೊಲೀಸ್ ಕಮಿಷನರ್ ಆಫೀಸ್ನಲ್ಲಿದ್ದೀಯಾ, ನಾನು ಇಲ್ಲಿ ಸುರಕ್ಷಿತವಾಗಿದ್ದೇನೆ ನೀನೇನೂ ಹೆದರಬೇಡ.’ ಎಂ ಬಿಟ್ಟ! ಆತನ ನೆಟ್ವರ್ಕ್ ಕಂಡು ನಮಗೆಲ್ಲ ಶಾಕ್. ‘ನೀನು ಶರಣಾಗದಿದ್ದರೆ ನನ್ನನ್ನು ಅರೆಸ್ಟ್ ಮಾಡ್ತಾರಂತೆ.’ ಎಂದು ಅಪ್ಪ ಹೇಳಿದಾಗ ಅಕ್ರಮ್ ಥಂಡಾ ಹೊಡೆದ. ತಕ್ಷಣ ವಾಪಸಾಗುವುದಾಗಿ ಮಾತು ಕೊಟ್ಟ.
ಕಂಪನಿಯ ಚೀಫ್ ಮ್ಯಾನೇಜರ್ ಮತ್ತು ನನ್ನ ನಂಬಿಕಸ್ತ ರೈಟರ್ ಆಗಿದ್ದ ಸಿಂಗ್ ಜತೆ ಮರುದಿನವೇ ಮುಂಬಯಿಯ ಇಂಟರ್ನ್ಯಾಷನಲ್ ಏರ್ಪೋರ್ಟ್ಗೆ ಹೋದೆ. ಆತ ಎಮಿರೇಟ್ಸ್ ವಿಮಾನದಲ್ಲಿ ದುಬೈನಿಂದ ಬರಲಿದ್ದಾನೆ ಎಂಬ ಮಾಹಿತಿ ಲಭ್ಯವಾಯಿತು. ನಾವು ಅತನಿಗಾಗಿ ಹೊಂಚು ಹಾಕುತ್ತಿದ್ದೆವು. ಅಷ್ಟರಲ್ಲಿ ಬೆಂಗಳೂರಿನ ಸಾಂಬಮೂರ್ತಿ ಎಂಬ ಪ್ರಖ್ಯಾತ ವಕೀಲರು ಅಕ್ರಮ್ಗೆ ನೆರವು ನೀಡಲು ಅಲ್ಲಿ ಹಾಜರಿದ್ದದು ಕಂಡು ಬಂತು. ಹಾಗಾಗಿ ವಿಮಾನ ಇಳಿಯುತ್ತಿದ್ದಂತೆ ನಾವು ‘ಜೆಟ್ ಬ್ರಿಜ್’ ಮೂಲಕ ಹೋಗಿ ಅಕ್ರಮ್ಗೆ ಕೈಕೋಳ ಬಿಗಿದೆವು. ಪೊಲೀಸ್ ಜಿಪ್ಸಿಯಲ್ಲಿ ಒಳಮಾರ್ಗದಿಂದ ಡೊಮೆಸ್ಟಿಕ್ ಏರ್ಪೋರ್ಟ್ಗೆ ಕರೆದುಕೊಂಡು ವಕೀಲರ ದಿಕ್ಕು ತಪ್ಪಿಸಿದೆವು.
ಆತನನ್ನು ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿ 15 ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡೆ. ವಂಚನೆಯ ದುಡ್ಡಿನಲ್ಲಿ ಆತ ನಡೆಸುತ್ತಿದ್ದ ಶೋಕಿ ಜೀವನದ ವರ್ಣನೆ ಕೇಳಿ ನಾವು ಬೆರಗಾಗಿ ಹೋದೆವು. ಈ ಬಗ್ಗೆ ಮುಂದೆ ವಿವರಿಸುತ್ತೇನೆ. ಇಷ್ಟೇ ಅಲ್ಲ. ಈ ಪ್ರಕರಣ ಮುಗಿದ ಎಷ್ಟೋ ವರ್ಷಗಳ ಬಳಿಕ ಸಿಬಿಐ ಅಧಿಕಾರಿಗಳು ನನ್ನೆದುರು ಬಂದು ಕೂತಿದ್ದೂ ಕುತೂಹಲಕಾರಿ. ಈ ಪ್ರಕರಣದಿಂದ ನನ್ನ ವೃತ್ತಿ ಬದುಕೇ ಸರ್ವನಾಶವಾಗುವಂತ ಸನ್ನಿವೇಶವೂ ಸೃಷ್ಟಿಯಾಗಿತ್ತು!
ಹವಾಯಿ ಚಪ್ಪಲಿ ಹಾಕಿಕೊಂಡು, ಹರಿದ ಶರ್ಟ್ ಆಫೀಸ್ಗೆ ಬರುತ್ತಿದ್ದ. ಡ್ಯೂಟಿ ಮುಗಿಯುತ್ತಿದ್ದಂತೆ ಸೂಟುಬೂಟು ಧರಿಸಿ ಐಶಾರಾಮಿ ಕಾರಿನಲ್ಲಿ ಫೈವ್ಸ್ಟಾರ್ ಹೋಟೆಲ್ನತ್ತ ಹೆಜ್ಜೆ ಹಾಕುತ್ತಿದ್ದ! ಮೇಲ್ನೋಟಕ್ಕೆ ಪ್ರಾಮಾಣಿಕ ನೌಕರ. ಆದರೆ…
Discussion about this post