ಗದಾಯುದ್ಧದಲ್ಲಿ ತೊಡೆ ಮುರಿಸಿಕೊಂಡು ಬಿದ್ದ ದುರ್ಯೋಧನನ ತಲೆಗೆ ಭೀಮ ಹೊಡೆಯಲು ಹೋದಾಗ ಅವನನ್ನು ತಡೆದಿದ್ದು ಹಿರಿಯ ಧರ್ಮರಾಜನೇ ಹೊರತೂ, ಧರ್ಮ ಸೂಕ್ಷ್ಮವನ್ನರಿತಿದ್ದ ಧರ್ಮರಾಯನೇ ಹೊರತೂ ಕಿರಿಯ ನಕುಲನೋ ಸಹದೇವನೋ ಅಲ್ಲ.
ಅದೇ ರೀತಿ ರಾಜ್ಯದ ಹಿಂದಿನ ನಾಯಕನೊಬ್ಬ ತಾನು ಮಾಡಿದ ತಪ್ಪಿಗೆ ಖೆಡ್ಡಾಕ್ಕೆ ಬಿದ್ದಿದ್ದಾನೆ. ಅವನೇನೂ ತೊಡೆ ಮುರಿಸಿಕೊಂಡು ಬಿದ್ದಿಲ್ಲ. ಕಾಡಿಗೆ ಹೋಗಲೂ ಇಲ್ಲ. ಸಾಯಲೂ ಇಲ್ಲ. ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲು ಆತ ಸಿದ್ಧನಾಗುವಂತೆ ನಮ್ಮ ವ್ಯವಸ್ಥೆ ಅವನನ್ನು ಸಜ್ಜುಗೊಳಿಸುತ್ತಿದೆ ಅಷ್ಟೇ. ಇಷ್ಟಕ್ಕೇ ನಮ್ಮ ರಾಜ್ಯದ ನಾಯಕರು ಅವನ ಬಗ್ಗೆ ಅನುಕಂಪದ ಮಾತುಗಳನ್ನು ಆಡುವುದು ರಾಷ್ಟ್ರದ ಉನ್ನತ ಧ್ಯೇಯವೊಂದಕ್ಕೆ ಎಸಗುವ ಅವಮಾನದಂತೆಯೇ ಸರಿ. ಏಕೆ? ಅದೇಕೆ ನಮ್ಮ ರಾಜ್ಯದ ನಾಯಕರಲ್ಲಿ ಶ್ಯಾಮ್ ಪ್ರಸಾದರ, ದೀನದಯಾಳರ, ಸುಭಾಷ್ಚಂದ್ರರ ಹೌತಾತ್ಮ್ಯದ ಬಗ್ಗೆ ಮಾತನಾಡುತ್ತಲ್ಲ? ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡ ದೇಶದ ಅತಿಹಳೆಯ ಪಕ್ಷದ ದುರುದ್ದೇಶದ ಮೇಲೆ ಬೆಳಕು ಬೀರುತ್ತಿಲ್ಲ? ಏಕೆ ರಾಜ್ಯದ ಜನತೆಗೆ ಇಂಥ ವಿಷ್ಯ ತಿಳಿಸೋಕೆ ಮೋದೀಜಿನೇ ಬರಬೇಕಾ?
ಅವರ ಅತ್ಯವಮಾನಕರ ಹಾಗೂ ಶಂಕಾಸ್ಫದ ಸಾವಿನ ಬಗ್ಗೆ ಸಾಮಯಿಕವಾಗಿ ಉಲ್ಲೇಖಿಸುತ್ತಾ, ತಪ್ಪು ಮಾಡಿ ಜೈಲಿಗೆ ಹೋಗಲು ತಯಾರಿ ಮಾಡಿಕೊಳ್ಳುತ್ತಿರುವವರ ಪರವಾಗಿ ಪ್ರತಿಭಟಿಸ್ತಿರೋ ಅಭಿಮಾನಿಗಳಿಗೆ ಖಡಕ್ಕಾದ ಸಂದೇಶವನ್ನು ನಮ್ಮ ರಾಜ್ಯ ನಾಯಕರದೇಕೆ ನೀಡಬಾರದು? ಓಕೆ ಅವರಿಗದು ಸಾಧ್ಯವಾಗದಿದ್ರೇ ಸುಮ್ಮನಾದರೂ ಕೂರಲಿ. ಮಹಾಭಾರತದಲ್ಲಿ ದುಷ್ಟಶಿಕ್ಷಣವಾಗದಿರುತ್ತಿದ್ದರೆ, ಇಂದು ನಾವು ರಾವಣನನ್ನೂ, ದುರ್ಯೋಧನನನ್ನೂ ಪೂಜಿಸುತ್ತಿರುತ್ತಿದ್ದೆವು. ಇದು ಧರ್ಮ ಸೂಕ್ಷ್ಮವೂ ಹೌದು, ರಾಷ್ಟ್ರ ಸೂಕ್ಷ್ಮವೂ ಹೌದು. ಇದನ್ನು ಜನಸಾಮಾನ್ಯರು ಹಾಗೂ ಮಾಧ್ಯಮದವರು ಹೆಚ್ಚೆಚ್ಚು ಪರಿಭಾವಿಸುವಂತೆ ಆಗಬೇಕು.
ಲೇಖನ: ನಚಿಕೇತ, ಶಿವಮೊಗ್ಗ
Discussion about this post