ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಯಾರ್ಡ್ ನವೀಕರಣ ಕಾಮಗಾರಿಗಳ ಹಿನ್ನಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಘೋಷಿಸಲಾಗಿದೆ.
ಪ್ರಮುಖವಾಗಿ ಶಿವಮೊಗ್ಗ-ತಾಳಗುಪ್ಪಗೆ ಆಗಮಿಸುವ ಹಾಗೂ ತೆರಳುವ ಒಟ್ಟು ಏಳು ರೈಲುಗಳ ಸಂಚಾರದಲ್ಲಿ ನಿಗದಿತ ದಿನಗಳಂದು ಬದಲಾವಣೆ ಮಾಡಲಾಗಿದ್ದು, ಈ ಕುರಿತ ಮಾಹಿತಿ ಹೀಗಿದೆ.
Also Read>> ಭಾರತ–ಅಫ್ಘಾನಿಸ್ತಾನ 1ನೇ ಏಕದಿನ: ಗುರ್ಬಾಜ್ ಸಿಡಿಲಾಟದ ಶತಕಕ್ಕೂ ನಡುವೆ ಭಾರತಕ್ಕೆ ಮೇಲುಗೈ
ಈ ರೈಲುಗಳ ಸಂಚಾರ ಆಗಸ್ಟ್ 4ರಂದು ರದ್ದು
- 16581 ಸಂಖ್ಯೆಯ ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್’ಪ್ರೆಸ್
- 16582 ಸಂಖ್ಯೆಯ ಶಿವಮೊಗ್ಗ ಟೌನ್-ಯಶವಂತಪುರ ಎಕ್ಸ್’ಪ್ರೆಸ್
ಈ ರೈಲುಗಳು ಭಾಗಷಃ ರದ್ದು
- 20652 ಸಂಖ್ಯೆಯ ತಾಳಗುಪ್ಪ-ಕೆಎಸ್ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲು 01.08.2026 ರಿಂದ 03.08.2026ರವರೆಗೆ ಅರಸೀಕೆರೆ-ಕೆಎಸ್’ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದೆ.
- 12090 ಸಂಖ್ಯೆಯ ಶಿವಮೊಗ್ಗ ಟೌನ್-ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲು 01.08.2026 ರಿಂದ 03.08.2026ರವರೆಗೆ ಅರಸೀಕೆರೆ-ಕೆಎಸ್’ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದೆ.
- 12089 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು-ಶಿವಮೊಗ್ಗ ಟೌನ್ ಎಕ್ಸ್’ಪ್ರೆಸ್ ರೈಲು 01.08.2026 ರಿಂದ 03.08.2026ರವರೆಗೆ ಕೆಎಸ್’ಆರ್ ಬೆಂಗಳೂರು-ಅರಸೀಕೆರೆ ನಡುವೆ ಭಾಗಶಃ ರದ್ದಾಗಲಿದೆ.
ಈ ರೈಲುಗಳ ಮಾರ್ಗ ಬದಲಾವಣೆ
16228 ಸಂಖ್ಯೆಯ ತಾಳಗುಪ್ಪ-ಮೈಸೂರು ಎಕ್ಸ್’ಪ್ರೆಸ್ ರೈಲು 2026ರ ಆಗಸ್ಟ್ 3ರಂದು ಅರಸೀಕೆರೆ-ಹಾಸನ-ಕೃಷ್ಣರಾಜನಗರ-ಮೈಸೂರು ಮಾರ್ಗದಲ್ಲಿ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಅಲ್ಲದೇ, ಈ ರೈಲು ಅಂದು ತಿಪಟೂರು, ತುಮಕೂರು, ಯಶವಂತಪುರ, ಮಲ್ಲೇಶ್ವರಂ, ಕೆಎಸ್’ಆರ್ ಬೆಂಗಳೂರು, ಕೃಷ್ಣದೇವರಾಯ ಹಾಲ್ಟ್, ನಾಯಂಡಹಳ್ಳಿ, ಕೆಂಗೇರಿ, ಬಿಡದಿ, ರಾಮನಗರಂ, ಚನ್ನಪಟ್ಟಣ, ಮದ್ದೂರು, ಹನಕೆರೆ, ಮಂಡ್ಯ, ಎಲಿಯೂರು, ಪಾಂಡವಪುರ, ನಾಗನಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
16227 ಸಂಖ್ಯೆಯ ಮೈಸೂರು-ತಾಳಗುಪ್ಪ ಎಕ್ಸ್’ಪ್ರೆಸ್ ರೈಲು 2026ರ ಆಗಸ್ಟ್ 3ರಂದು ಮೈಸೂರು-ಕೃಷ್ಣರಾಜನಗರ-ಹಾಸನ-ಅರಸೀಕೆರೆ ಮಾರ್ಗದಲ್ಲಿ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಅಲ್ಲದೇ, ರೈಲಿಗೆ ಅಂದು ಮದ್ದೂರು, ಚನ್ನಪಟ್ಟಣ, ರಾಮನಗರಂ, ಬಿಡದಿ, ಹೆಜ್ಜಾಲ, ಕೆಂಗೇರಿ, ಜ್ಞಾನಭಾರತಿ, ನಾಯಂಡಹಳ್ಳಿ, ಕೆಎಸ್’ಆರ್ ಬೆಂಗಳೂರು, ಮಲ್ಲೇಶ್ವರಂ, ಯಶವಂತಪುರ, ತುಮಕೂರು, ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ರೈಲ್ವೆ ಇಲಾಖೆ ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಮುನ್ನ ವೇಳಾಪಟ್ಟಿ ಪರಿಶೀಲಿಸಿ ಸಹಕರಿಸುವಂತೆ ಮನವಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















