Wednesday, July 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಉತ್ತರ ಕನ್ನಡ

ಜ್ಯೋತಿಷ್ಯದ ಸಮಗ್ರ ಅಧ್ಯಯನ ಅತ್ಯಗತ್ಯ: ರಾಘವೇಶ್ವರ ಶ್ರೀ

September 8, 2024
in ಉತ್ತರ ಕನ್ನಡ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಜ್ಯೋತಿಷ್ಯಕ್ಕೆ ಹಲವು ಆಯಾಮಗಳಿವೆ. ಖಗೋಳವನ್ನು ವಿಶ್ಲೇಷಿಸುವ ವಿವಿಧ ವಿಧಗಳನ್ನು ನಮ್ಮ ಪೂರ್ವಜರು ಕಂಡುಕೊಂಡಿದ್ದರು. ಅಂಥ ಅಪೂರ್ವ ವಿಜ್ಞಾನವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವುದು ಅಗತ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಸ್ವಾಮೀಜಿ ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 46ನೇ ದಿನವಾದ ಬುಧವಾರ ಉಪ್ಪಿನಂಗಡಿ ಮಂಡಲದ ಬೆಳ್ಳಾರೆ, ಪಂಜ, ಚೊಕ್ಕಾಡಿ, ಪುತ್ತೂರು, ದರ್ಬೆ, ಬೆಟ್ಟಂಪಾಡಿ ವಲಯಗಳ ಭಕ್ತರ ಸರ್ವಸೇವೆ ಸ್ವೀಕರಿಸಿ, ಕಾಲ ಸರಣಿಯ ಪ್ರವಚನ ಮುಂದುವರಿಸಿದರು.
ಭಾರತೀಯ ಕಾಲಗಣನೆಯ ಅಂಶಗಳಾದ ತಿಥಿ, ವಾರ, ನಕ್ಷತ್ರ, ಯೋಗ, ಕರಣ ಹೀಗೆ ಪ್ರತಿಯೊಂದೂ ನಮ್ಮ ಜೀವನಕ್ಕೆ ಹತ್ತಿರವಾದವುಗಳು. ಪಂಚಾಂಗದ ತಿಥಿ ನಮ್ಮ ಸಂಪತ್ತು, ವಾರ ಆಯಸ್ಸು, ನಕ್ಷತ್ರ ನಮ್ಮ ಶುದ್ಧತೆಯನ್ನು, ಯೋಗ ಆರೋಗ್ಯವನ್ನು ಹಾಗೂ ಕರಣ ಕಾರ್ಯಸಿದ್ಧಿಯನ್ನು ತಿಳಿಸುತ್ತದೆ ಎಂದು ವಿಶ್ಲೇಷಿಸಿದರು.

ತತ್ಕಾಲ ಲಗ್ನ, ಲಗ್ನಾಂಶ, ಚಂದ್ರಾಧಿಷ್ಟಿತ ರಾಶಿ, ಸ್ಥಿತ್ಯಾರೂಢ, ಸ್ಪøಷ್ಟಾಂಗ, ಅಕ್ಷರಾರೂಢ, ಕವಡೆ, ಶಿಶುಹಸ್ತ ಹೀಗೆ ಅನೇಕ ವಿಧಾನಗಳಿಂದ ಭವಿಷ್ಯವನ್ನು ತಿಳಿದುಕೊಳ್ಳಬಹುದು ಎಂದು ವಿವರಿಸಿದರು. ಕೇವಲ ಪಂಚಾಂಗದ ಪರಿಜ್ಞಾನದಿಂದಲೇ ಹಲವು ಅಂಶಗಳನ್ನು ಹೇಳಲು ಸಾಧ್ಯವಿದೆ. ಯಾವುದೇ ವ್ಯಕ್ತಿಯ ಪೂರ್ವಜನ್ಮದ ಕರ್ಮಗಳು ಆ ವ್ಯಕ್ತಿಯನ್ನು ನಿರ್ದಿಷ್ಟ ಕಾಲಘಟ್ಟದಲ್ಲಿ ನಮ್ಮೆಡೆಗೆ ಆತನನ್ನು ಕರೆತರುತ್ತದೆ ಎಂದು ಹೇಳಿದರು.
ಭಾರತೀಯರಾಗಿ ಪಂಚಾಂಗದ ಐದು ಅಂಶಗಳ ಕನಿಷ್ಠ ಪರಿಜ್ಞಾನ ಎಲ್ಲರಿಗೂ ಬೇಕು. ತಿಥಿಯ ನಿತ್ಯಾನುಸಂಧಾನ ಇದ್ದರೆ ಐಶ್ವರ್ಯ ಪ್ರಾಪ್ತವಾಗುತ್ತದೆ. ಆಯಸ್ಸು, ಪಾಪ ಪರಿಹಾರ, ಆರೋಗ್ಯ ಮತ್ತು ಕಾರ್ಯಸಿದ್ಧಿ ಇವು ಕ್ರಮವಾಗಿ ವಾರ, ನಕ್ಷತ್ರ, ಯೋಗ, ಕರಣಗಳ ಕಾಲಾನುಸಂಧಾನ ಮಾತ್ರದಿಂದಲೇ ಕಾಲ ನಮ್ಮನ್ನು ಅನುಗ್ರಹಿಸುತ್ತಾನೆ. ಈ ಅಂಶಗಳು ಜೀವನಕ್ಕೆ ಮುಖ್ಯ ಎಂದು ವಿವರಿಸಿದರು.

ಗ್ರಹಸ್ಥಿತಿಯ ನೆರವು ಇಲ್ಲದೆಯೂ ಜ್ಯೋತಿಷ್ಯದಲ್ಲಿ ಹಲವು ವಿಷಯಗಳನ್ನು ತಿಳಿದುಕೊಳ್ಳಬಹುದು. ಕಾಲ-ದೇಶ ತಿಳಿದುಕೊಂಡರೆ ಬಹುತೇಕ ಅಂಶಗಳು ತಿಳಿಯುತ್ತವೆ. ಯಾವುದೇ ಪ್ರಶ್ನೆ ಅಥವಾ ವಿಷಯಕ್ಕೆ ದೈವಾನುಗ್ರಹ ಇದೆಯೇ ಎಂದು ತಿಳಿದುಕೊಳ್ಳುವುದು ಪ್ರಾಥಮಿಕ ಹಂತ. ಗುರು ಅನುಕೂಲ/ ಪ್ರತಿಕೂಲ ಸ್ಥಿತಿಯಲ್ಲಿದೆಯೇ ಎಂದು ತಿಳಿದುಕೊಳ್ಳುವ ಮೂಲಕ ಇದನ್ನು ಕಂಡುಹಿಡಿಯಬಹುದು. ಗ್ರಹಗತಿಯನ್ನು ನಿಖರವಾಗಿ ಅಧ್ಯಯನ ಮಾಡಬೇಕು.

ಪ್ರಶ್ನೆ ಕೇಳುವ ವ್ಯಕ್ತಿ ಯಾವ ದಿಕ್ಕಿನಲ್ಲಿ ನಿಂತಿದ್ದಾನೆ ಎನ್ನುವುದರ ಆಧಾರದಲ್ಲಿ ಭವಿಷ್ಯ ಹೇಳಬಹುದು. ದಿಕ್ಕಿನಲ್ಲಿ ನಿಂತು ಪ್ರಶ್ನೆ ಕೇಳಿದರೆ ಪುರುಷರಿಗೆ ಶುಭ, ಮಹಿಳೆಯರಿಗ ಅಶುಭ. ವಿದಿಕ್ಕಿನಲ್ಲಿ ಕೇಳಿದರೆ ಪುರುಷರಿಗೆ ಅಶುಭ ಹಾಗೂ ಸ್ತ್ರೀಯರಿಗೆ ಶುಭ ಎಂದು ತಿಳಿಸಿದರು.

ಆರು ವಲಯಗಳ ಶಿಷ್ಯಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, “ಮಠ ನಮಗೆಲ್ಲ ಆಶ್ರಯ ವೃಕ್ಷವಿದ್ದಂತೆ. ಅದು ಹೂವು ಮತ್ತು ಫಲವನ್ನೂ ನೀಡುವಂಥದ್ದು. ಮಠವೆನ್ನುವುದು ಎಲ್ಲ ಶಿಷ್ಯಭಕ್ತರನ್ನು ಸಂಸಾರ ತಾಪದಿಂದ ಕಾಪಾಡುವಂಥದ್ದು. ಸೇವೆಗೆ ಅದ್ಭುತ ಫಲ ಇದೆ. ಮಠ ಸಮಾಜದ ಪಾಪವನ್ನು ಪರಿಹರಿಸಿ ಪವಿತ್ರಗೊಳಿಸುತ್ತದೆ. ನಾವು ಒಂದು ಸಮರ್ಪಣೆ ಮಾಡುವಾಗ ಅದು ಸಂಪತ್ತಾಗಿರುತ್ತದೆ. ಆದರೆ ಮಠದಿಂದ ಅದು ಮರಳಿ ಸಮಾಜಕ್ಕೆ ಹೋಗುವಾಗ ಪ್ರಸಾದವಾಗುತ್ತದೆ. ಅದಕ್ಕೆ ಅದ್ಭುತ ಶಕ್ತಿ ಇರುತ್ತದೆ. ಶ್ರೀಮಠವೆಂಬ ಅನಘ್ರ್ಯರತ್ನವನ್ನು ಕಾಪಾಡಿಕೊಳ್ಳಲು ಸಮಸ್ತ ಶಿಷ್ಯಭಕ್ತರು ಬದ್ಧರಾಗಬೇಕು” ಎಂದು ಹೇಳಿದರು.

http://kalpa.news/wp-content/uploads/2024/04/VID-20240426-WA0008.mp4

ತಿಥಿ ಅಂದರೆ ಸೂರ್ಯ-ಚಂದ್ರರ ಅಂತರ. ಅಮಾವಾಸ್ಯೆ ದಿನ ಸೂರ್ಯ ಚಂದ್ರರು ಜತೆಗಿರುತ್ತಾರೆ. ಹನ್ನೆರಡು ಡಿಗ್ರಿ ಅಂತರವನ್ನು ತಿಥಿ ಎಂದು ಕರೆಯುತ್ತೇವೆ. ಶುಕ್ಲ ಪಕ್ಷದಲ್ಲಿ ಸೂರ್ಯಚಂದ್ರರು ದೂರವಾಗುತ್ತಾ ಹೋದರೆ ಕೃಷ್ಣಪಕ್ಷದಲ್ಲಿ ಹತ್ತಿರುವಾಗುತ್ತಾ ಹೋಗುತ್ತಾರೆ. ಇದು ಸಂಪೂರ್ಣ ಖಗೋಳ ಶಾಸ್ತ್ರ ಆಧರಿತ. ಚಂದ್ರ ಯಾವ ನಕ್ಷತ್ರಪುಂಜದ ನೇರದಲ್ಲಿ ಇದ್ದಾನೆ ಎನ್ನುವುದು ಆಯಾ ದಿನದ ನಕ್ಷತ್ರವನ್ನು ಸೂಚಿಸುತ್ತದೆ. ಹೀಗೆ ಪ್ರತಿಯೊಂದಕ್ಕೂ ವೈಜ್ಞಾನಿಕ ಆಧಾರವಿದೆ ಎಂದು ವಿಶ್ಲೇಷಿಸಿದರು.

ಇಂದು ಅಪರೂಪದ ಮಳೆತಜ್ಞರೊಬ್ಬರ ಸಾಧನೆಗಳ ಅನಾವರಣ ನಡೆದಿದೆ. ಅವರ ಪ್ರಕೃತಿ ವೀಕ್ಷಣೆಯ ಪರಿ ಅನನ್ಯ. ಸೂಕ್ಷ್ಮ ವಿಷಯವನ್ನು ಗಮನಿಸುವುದು ಅಗತ್ಯ. ಪ್ರಕೃತಿ ನಮ್ಮ ಮುಂದೆ ತೆರೆದಿಡುವ ಸತ್ಯವನ್ನು ನೋಡುವ ಕಣ್ಣುಗಳು ನಮ್ಮದಾಗಬೇಕು ಎಂದರು. 18 ಸಾವಿರ ದಿನಗಳ ಮಳೆಯ ಅಂಕಿ ಅಂಶಗಳನ್ನು ಸಂಗ್ರಹಿಸಿ ಇಟ್ಟಿರುವ ಸತ್ಯನಾರಾಯಣ ಪ್ರಸಾದ್ ಅವರ ಸಾಧನೆ ಅಮೋಘ. ಇಂಥ ಅನಾವರಣ ಅತ್ಯಂತ ಅರ್ಥಪೂರ್ಣ ಎಂದು ಹೇಳಿದರು.

18 ಸಾವಿರ ದಿನಗಳಿಂದ ಮಳೆ ಅಂಕಿ ಅಂಶಗಳ ದಾಖಲಾತಿ ಮಾಡುತ್ತಾ ಬಂದಿರುವ ಮಳೆತಜ್ಞ ಸತ್ಯನಾರಾಯಣ ಪ್ರಸಾದ್ ಅವರ ಸಾಧನೆಯ ಅನಾವರಣವನ್ನು ಸಮಾಜದ ಹಿರಿಯರಾದ ಆನೇಕಾರ್ ಗಣಪಯ್ಯ ಅನಾವರಣಗೊಳಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಯುವ ಪ್ರಧಾನ ಕೇಶವಪ್ರಕಾಶ್ ಎಂ, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ್ ಕುದುಪುಲ, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ವಿವಿವಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಸುಬ್ರಾಯ ಅಗ್ನಿಹೋತ್ರಿ, ಮತ್ತಿತರರು ಉಪಸ್ಥಿತರಿದ್ದರು. ಲೋಹಿತ್ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Tags: GokarnaKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaUttara Kannadaಗೋಕರ್ಣ
Previous Post

Committee on Public Undertakings Visits Pavagada Solar Park

Next Post

ಮಾತು ಕೃತಿಗಿಳಿದಾಗ ಮಾತ್ರ ಸಾಧನೆ ಸಾಧ್ಯ: ಸುರೇಶ ಮರಕಾಲ ಅಭಿಪ್ರಾಯ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮಾತು ಕೃತಿಗಿಳಿದಾಗ ಮಾತ್ರ ಸಾಧನೆ ಸಾಧ್ಯ: ಸುರೇಶ ಮರಕಾಲ ಅಭಿಪ್ರಾಯ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭಾರತೀಯ ವಾಯಪಡೆಯ ಯುದ್ದ ವಿಮಾನ ಪತನ | ಇಬ್ಬರ ಸಾವು

July 9, 2025

ಗುಜರಾತ್ | ಬೃಹತ್ ಸೇತುವೆ ಕುಸಿತ | 9ಕ್ಕೆ ಏರಿದ ಸಾವಿನ ಸಂಖ್ಯೆ | ಘಟನೆ ಹೇಗಾಯ್ತು?

July 9, 2025

ಭಗವದ್ಗೀತಾ ಜ್ಞಾನದಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ: ಅಶೋಕ್ ಭಟ್

July 9, 2025

ಜು.10 | ಜಯನಗರ ರಾಯರ ಮಠದಲ್ಲಿ ದಾಸವಾಣಿ ಕಾರ್ಯಕ್ರಮ

July 9, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭಾರತೀಯ ವಾಯಪಡೆಯ ಯುದ್ದ ವಿಮಾನ ಪತನ | ಇಬ್ಬರ ಸಾವು

July 9, 2025

ಗುಜರಾತ್ | ಬೃಹತ್ ಸೇತುವೆ ಕುಸಿತ | 9ಕ್ಕೆ ಏರಿದ ಸಾವಿನ ಸಂಖ್ಯೆ | ಘಟನೆ ಹೇಗಾಯ್ತು?

July 9, 2025

ಭಗವದ್ಗೀತಾ ಜ್ಞಾನದಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ: ಅಶೋಕ್ ಭಟ್

July 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!