ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿಂದು ಜೈಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್ , ಸಂಯುಕ್ತ ಆಶ್ರಯದಲ್ಲಿ ಗುರು ಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಅಕ್ಕರವರಿಗೆ ಗುರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷರು,ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಭಾರತೀಯ ಸನಾತನ ಧರ್ಮದಲ್ಲಿ ಗುರುಪೂರ್ಣಮಿಗೆ ಅಪಾರ ಮಹತ್ವವಿದೆ. ವೇದವ್ಯಾಸರು ವೇದದ ವೇದವನ್ನು ವಿಂಗಡಿಸಿ ಪ್ರತಿಯೊಬ್ಬರಿಗೂ ಅರ್ಥವಾಗುವ ಹಾಗೆ ಅರ್ಥೈಸಿ ಸರಣಿಕರಣಗೊಳಿಸಿದರು. ಮಹಾಭಾರತವನ್ನು ರಚಿಸಿ ಜ್ಞಾನದ ಭಂಡಾರವನ್ನು ಜಗತ್ತಿಗೆ ನೀಡಿದವರು. ಸಾವಿರಾರು ವರ್ಷಗಳಿಂದಲೂ ಭಾರತದ ಜ್ಞಾನವನ್ನು ವಿಶ್ವಕ್ಕೆ ನೀಡಲಾಗುತ್ತಿದೆ. ಋಷಿಗಳು ಚಿಂತಕರು, ಆಚಾರ್ಯರು ವೇದೋತ್ತಮರು, ಪಂಡಿತರು ಜ್ಞಾನಿಗಳ ಸಮೂಹವೇ ಜಗತ್ತಿಗೆ ಭಾರತದ ಸರ್ವತೋಮುಖ ಜ್ಞಾನವನ್ನು ನೀಡಿ ಜಗದ್ಗುರುವಾಗಿ ಪರಿವರ್ತಿತವಾಗಿದೆ. ವ್ಯಾಸ ಮಹರ್ಷಿಗಳ ಜನ್ಮ ದಿನವೇ ಗುರುಪೂರ್ಣಿಮೆ. ನಿರಂತರವಾಗಿ ಸಾವಿರಾರು ವರ್ಷಗಳಿಂದ ಮಾರ್ಗದರ್ಶನ ನೀಡುತ್ತಿರುವ ಪ್ರತಿಯೊಬ್ಬರು ಗುರುವಾಗಿ ಆದರ್ಶವಾಗಿದ್ದಾರೆ. ಗುರುಪೂರ್ಣಿಮೆಯ ದಿನದಲ್ಲಿ ಗುರುವಿಗೆ ಗೌರವಿಸಿ ಆಶೀರ್ವಾದ ಪಡೆಯುವುದು ಭಾರತೀಯರಾದ ಪ್ರತಿಯೊಬ್ಬರ ಕಾರ್ಯವಾಗಿದೆ. ಚಾಮರಾಜನಗರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬಿಕೆ ದಾನೇಶ್ವರಿ ಅಕ್ಕ ರವರು ಸಮಸ್ತ ನಾಗರಿಕರಿಗೆ ಆಧ್ಯಾತ್ಮಿಕ ಪ್ರಭೆಯನ್ನು ನೀಡುವ ಮೂಲಕ ಉತ್ತಮ ಸೇವ ಹಾಗೂ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
Also read>> ಭಾರತದಲ್ಲೇ ಮೊದಲ ಬಾರಿ 4,000 ಎಲೆಕ್ಟ್ರಿಕ್ ಬಸ್ಗಳ ಸಂಚಾರ: ಒಲೆಕ್ಟ್ರಾ ಐತಿಹಾಸಿಕ ಸಾಧನೆ
ಸಮಾಜ ಸೇವಕ ಎಲ್ ಸುರೇಶ್ ಮಾತನಾಡಿ ಗುರುಪೂರ್ಣಿಮೆಯ ದಿನ ಗುರುವಿಗೆ ನಮನ ಸಲ್ಲಿಸಿ , ನಮ್ಮ ಜನ್ಮವನ್ನು ಪಾವನಗೊಳಿಸಿಕೊಳ್ಳಲು ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಜೀವನ ನಡೆಸಲು ಸಹಾಯವಾಗುತ್ತದೆ ಗುರುಪೂರ್ಣಮಿ ಎಂದು ಅಕ್ಕ ರವನ್ನು ಗೌರವಿಸುವುದು, ತಾಯಿಯನ್ನು ಪೂಜಿಸಿದಂತೆ ಎಂದು ತಿಳಿಸಿದರು.
ಜನಪದ ಗಾಯಕ ಹರದನಹಳ್ಳಿ ಸುರೇಶ್ ನಾಗ್ ಮಾತನಾಡಿ ಗುರುಪೂರ್ಣಿಮೆಯನ್ನು ಆಚರಿಸಿ ಸನ್ಮಾರ್ಗದಲ್ಲಿ ನಡೆಯಲು ಪ್ರತಿಯೊಬ್ಬರಿಗೂ ಆದರ್ಶವಾಗಿದ್ದಾರೆ ಪ್ರತಿಯೊಬ್ಬರಿಗೂ ನಮನ ಸಲ್ಲಿಸೋಣ ಎಂದರು.
ದಿವ್ಯ ಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ದಾನೇಶ್ವರಿಯವರು ವಹಿಸಿ ಮಾತನಾಡಿ ಸದ್ಗುರುವಾಗಿ ಸಮಾಜಕ್ಕೆ ಸನ್ಮಾರ್ಗದ ಮೂಲಕ ಮಾನವ ಜೀವನವನ್ನು ಪವಿತ್ರ ಗೊಳಿಸಿ ಸುಖ,ಸಂತೋಷ, ನೆಮ್ಮದಿ ಆನಂದದಿಂದ ಬದುಕಲು ಪ್ರತಿಯೊಬ್ಬರಿಗೂ ಆಧ್ಯಾತ್ಮದ ಶಕ್ತಿ ಅಗತ್ಯವಿದೆ. ಆಧ್ಯಾತ್ಮದ ಅರಿವು ಬಹಳ ಮುಖ್ಯ. ಗುರು ಪ್ರತಿಯೊಬ್ಬರಿಗೂ ಮುಖ್ಯವಾಗಿದ್ದಾರೆ. ತಂದೆ ತಾಯಿಯ ನಂತರ ಗುರು ಬಹಳ ಪ್ರಮುಖ ಪಾತ್ರ ವಹಿ ಸುತ್ತಾರೆ. ಭಾರತೀಯ ಧರ್ಮದಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವನ್ನು ನೀಡಲಾಗಿದೆ. ಗುರುಪೂರ್ಣಿಮೆಯ ದಿನ ಭಾರತದ ವ್ಯಾಸ ಮಹರ್ಷಿಗಳ ಚಿಂತನೆ ಜ್ಞಾನ ತಿಳಿಯುವುದು ಬಹಳ ಅಗತ್ಯ. ಧ್ಯಾನ ಯೋಗ ಗಳ ಮೂಲಕ ಸರ್ವ ಜನರು ಕೂಡ ಸಂತೋಷದಿಂದ ಬದುಕಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಅಧಿಕಾರಿಗಳಾದ ಪುಷ್ಪ,ಗೀತಾ, ಶಿಕ್ಷಕರುಗಳಾದ ಪ್ರಮೀಳಾ ಊದಗಡ್ಡಿ, ಶ್ರೀನಿವಾಸ್ ಮೂರ್ತಿ, ನಾಗರಾಜ್, ನ್ಯಾಯಾಂಗ ಇಲಾಖೆಯ ಶ್ರೀನಿವಾಸ್, ಓಂ ಶಾಂತಿ ನ್ಯೂ ಸರ್ವಿಸ್ ನ ಬಿಕೆ ಆರಾಧ್ಯ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









