ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಂಗಳೂರು: ಕೋವಿಡ್19 ನೆಗೆಟಿವ್ ಪ್ರಮಾಣಪತ್ರದಲ್ಲಿ ಶಿವಮೊಗ್ಗದ ಹೆಸರಿನ ಸ್ಪೆಲ್ಲಿಂಗ್ ಮಿಸ್ಟೇಕ್ ಆದ ಕಾರಣದಿಂದಾಗಿ ದುಬೈಗೆ ತೆರಳಬೇಕಿದ್ದ ತೀರ್ಥಹಳ್ಳಿಯ ಮಹಿಳೆಯೊಬ್ಬರ ವಿಮಾನ ಪ್ರಯಾಣ ರದ್ದಾಗಿರುವ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ತೀರ್ಥಹಳ್ಳಿಯ ಚಾಂದ್ ಬೇಗಂ ಎಂಬ ಮಹಿಳೆ ಮಂಗಳೂರಿನಿಂದ ದುಬೈ’ಗೆ ಕಳೆದ ಶನಿವಾರ ಪ್ರಯಾಣಿಸುವವರಿದ್ದರು. ಆದರೆ, ವಿಮಾನ ನಿಲ್ದಾಣದಲ್ಲಿ ಕೋವಿಡ್19 ನೆಗೆಟಿವ್ ಪ್ರಮಾಣಪತ್ರದಲ್ಲಿ ಶಿವಮೊಗ್ಗ ಎಂಬ ಪದದಲ್ಲಿನ ಮಿಸ್ಟೇಕ್’ನಿಂದಾಗಿ ಸ್ಪೇಸ್ ಜೆಟ್ ಅಧಿಕಾರಿಗಳು ಬೋರ್ಡಿಂಗ್ ಪಾಸ್ ನೀಡಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಬೇಗಂ ಅವರು ಕೋವಿಡ್19 ಪರೀಕ್ಷೆ ಮಾಡಿಸಿಕೊಂಡಿದ್ದು, ನಿಂದ ಪ್ರಮಾಣಪತ್ರ ಪಡೆದುಕೊಂಡಿದ್ದರು. ಆದರೆ, ಜಿಲ್ಲಾ ಕಣ್ಗಾವಲು ಅಧಿಕಾರಿಯವರ ಸೀಲ್’ನಲ್ಲಿ Shivamogga ಬದಲಾಗಿ ಹಳೆಯ ಪದ Shimoga ಎಂದಾಗಿತ್ತು.
ಶಿವಮೊಗ್ಗ ಜಿಲ್ಲೆಯ ಅಧಿಕಾರಿಗಳು ಈ ವಿಷಯವನ್ನು ವಿಮಾನಯಾನ ಸಿಬ್ಬಂದಿಗೆ ವಿವರಿಸಲು ಪ್ರಯತ್ನಿಸಿದರು. ನೆಗೆಟಿವ್ ವರದಿ ನೀಡಿದ ಸಂಸ್ಥೆಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)ಯಿಂದ ಅನುಮೋದಿಸಲ್ಪಟ್ಟ ಸರ್ಕಾರಿ ಆಸ್ಪತ್ರೆಯಾಗಿದೆ ಎಂದು ಹೇಳಿದರೂ ಸಹ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿ ಅವರು ಪ್ರಯಾಣಿಸಬೇಕಿದ್ದ ವಿಮಾನ ಹೊರಟಿತ್ತು.
ಬೇಗಂ ಅವರ ಸಹೋದರ ಜಾಕಿರ್ ಹುಸೇನ್ ಮಾಧ್ಯಮಗಳಿಗೆ ಮಾತನಾಡಿದ್ದು, ವಿಮಾನಯಾನ ಸಿಬ್ಬಂದಿಗೆ ವಿಮಾನ ಹತ್ತಲು ಅವಕಾಶ ನೀಡುವಂತೆ ಮನವೊಲಿಸಲು ನಾವು ಬಹಳಷ್ಟು ಪ್ರಯತ್ನಪಟ್ಟೆವು. ಸ್ಪೈಸ್ ಜೆಟ್ ಪ್ರತಿನಿಧಿಗಳು ವಿಮಾನಯಾನ ಸಂಸ್ಥೆಗಳು ಭಾರತ ಸರ್ಕಾರ ಮತ್ತು ಯುಎಇಯ ಅಧಿಕಾರಿಗಳು ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ ಅಷ್ಟೇ ಎಂದರು. ಹೀಗಾಗಿ, ಅವರು ನಮ್ಮ ಮನವಿಯನ್ನು ಅವರು ಪುರಸ್ಕರಿಸದೇ ಇದ್ದ ಕಾರಣ ಹಿಂತಿರುಗಬೇಕಾಯಿತು.
ಬೇಗಂ ಮತ್ತೆ ನವೆಂಬರ್ 21 ರಂದು ಮಂಗಳೂರಿನಲ್ಲಿ ಕೋವಿಡ್19 ಪರೀಕ್ಷೆಗೆ ಒಳಗಾಗಿದ್ದಾರೆ.
ಕೋವಿಡ್19 ನಿಯಮಾವಳಿಗಳ ಅನ್ವಯ ಪ್ರಯಾಣಿಕರು ಸಲ್ಲಿಸುವ ನೆಗೆಟಿವ್ ಪ್ರಮಾಣಪತ್ರದಲ್ಲಿ ಯಾವುದೇ ರೀತಿಯ ಸಣ್ಣ ದೋಷವೂ ಸಹ ಇರುವಂತಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post