No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Monday, August 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಕಲಬುರಗಿ

ಧರ್ಮ ಉಳಿಯಬೇಕಾದರೆ ಆಚರಣೆ, ಅನುಷ್ಠಾನ ಅಗತ್ಯ: ಸತ್ಯಾತ್ಮತೀರ್ಥ ಶ್ರೀಗಳ ಆಶೀರ್ವಚನ

ಟೀಕಾಚಾರ್ಯರ ಮೂಲ‌ ಸನ್ನಿಧಾನದಲ್ಲಿ ಆರಾಧನೆ | ಕಾಗಿಣ ತಟದಲ್ಲಿ ಸಂಭ್ರಮದ ಜೋಡು ರಥೋತ್ಸವ

kalpa News by kalpa News
August 4, 2026
in ಕಲಬುರಗಿ
0
Kalaburagi jayatirtha-aradhana-jodu-rathotsava-malkheda
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಕಲಬುರಗಿ  |

ಮೋಡ ಕವಿದ ವಾತಾವರಣ ಹಾಗೂ ವರುಣನ ಸಿಂಚನದ ನಡುವೆಯೂ ಕಲಬುರಗಿಯ (Kalaburagi) ಸೇಡಂ ತಾಲೂಕಿನ ಐತಿಹಾಸಿಕ ಮಳಖೇಡದಲ್ಲಿರುವ ಉತ್ತರಾದಿ ಮಠದ ಶ್ರೀ ಜಯತೀರ್ಥರ ಮೂಲ ಸನ್ನಿಧಾನದಲ್ಲಿ ನಡೆದ ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವ ಹಾಗೂ ಜೋಡು ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ಜರುಗಿತು.

ಕರ್ನಾಟಕ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಿಂದ ಆಗಮಿಸಿದ್ದ ಭಕ್ತರು ಉತ್ಸವದಲ್ಲಿ ಭಕ್ತಿಭಾವದಿಂದ ಪಾಲ್ಗೊಂಡು ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾದರು.

Also Read>> ಯಡಕುಮರಿ ಭೂಕುಸಿತ | ಸಂಚಾರ ಪುರಾರಂಭ | ಮಂಗಳೂರು – ವಿಜಯಪುರ ರೈಲು ಯಶಸ್ವಿ ಸಂಚಾರ

ಇಂದ್ರಾಂಶ ಸಂಭೂತರಾಗಿ ಪ್ರಸಿದ್ಧರಾದ ಶ್ರೀ ಜಯತೀರ್ಥರ ರಥೋತ್ಸವದ ಸಂದರ್ಭದಲ್ಲಿ ಮಳೆಯ ಸಿಂಚನವಾಗಿರುವುದು ಭಕ್ತರಲ್ಲಿ ವಿಶೇಷ ಭಾವನೆಯನ್ನು ಮೂಡಿಸಿತು. ತುಂತುರು ಮಳೆಯ ನಡುವೆಯೂ ಭಕ್ತರ ಉತ್ಸಾಹಕ್ಕೆ ಯಾವುದೇ ಕೊರತೆ ಕಾಣಿಸಲಿಲ್ಲ. “ಎದುರಾರೈ ಗುರುವೆ ನಿನಗೆ ಸಮಾನಾರೈ”, “ಕಾಗಿಣಿ ತಟವಾಸ ಮಳಖೇಡ ನಿವಾಸ”, “ಟೀಕಾಚಾರ್ಯರ ಪಾದ ಸೋಕಿದ ಕೊನೆ ಧೂಳಿ”, “ಸಾರಿ ಭಜಿಸಿರೋ ಟೀಕಾರಾಯರ” ಸೇರಿದಂತೆ ಅನೇಕ ದಾಸರ ಪದಗಳನ್ನು ಹಾಡುತ್ತ, ದಾಸರ ವೇಷಭೂಷಣದಲ್ಲಿ ಭಕ್ತರು ರಥೋತ್ಸವದ ಮುಂಭಾಗದಲ್ಲಿ ನೃತ್ಯ ಮಾಡಿ ಸಂಭ್ರಮಿಸಿದರು. ವಿವಿಧ ಭಜನಾ ಮಂಡಳಿಗಳ ಸದಸ್ಯರು ದಾಸಸಾಹಿತ್ಯ ಗಾಯನದ ಮೂಲಕ ರಥೋತ್ಸವದ ಭಕ್ತಿ ವೈಭವವನ್ನು ಇನ್ನಷ್ಟು ಹೆಚ್ಚಿಸಿದರು.

ಭಾನುವಾರ ಸಂಜೆ ಉತ್ತರಾದಿ ಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಮಳಖೇಡಕ್ಕೆ ಆಗಮಿಸಿ, ಶ್ರೀ ಜಯತೀರ್ಥರು, ಶ್ರೀ ಅಕ್ಷೋಭ್ಯತೀರ್ಥರು ಹಾಗೂ ಶ್ರೀ ರಘುನಾಥತೀರ್ಥರ ಮೂಲ ವೃಂದಾವನಗಳಿಗೆ ಮಂಗಳಾರತಿ ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.
ಸೋಮವಾರ ನಡೆದ ಮಧ್ಯಾರಾಧನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶ್ರೀಪಾದಂಗಳವರು ಸುಧಾ ಪಾಠ ಬೋಧಿಸಿದರು. ಬಳಿಕ ಭಕ್ತರಿಗೆ ಮುದ್ರಾಧಾರಣೆ, ರಥಾಂಗ ಹೋಮ ಹಾಗೂ ಶ್ರೀ ಜಯತೀರ್ಥರ ಮೂಲ ವೃಂದಾವನದಲ್ಲಿ ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ನಂತರ ಶ್ರೀಪಾದಂಗಳವರು ಜೋಡು ರಥೋತ್ಸವಕ್ಕೆ ಚಾಲನೆ ನೀಡಿದರು.

ಸಾವಿರಾರು ಭಕ್ತರ ಜಯಘೋಷದ ನಡುವೆ ಎರಡು ರಥಗಳು ಪಾದಗಟ್ಟೆವರೆಗೆ ಸಂಚರಿಸಿ ಪುನಃ ಮಠಕ್ಕೆ ಮರಳಿದವು. ಬಳಿಕ ಶ್ರೀಪಾದಂಗಳವರು ದಿಗ್ವಿಜಯ ಮೂಲ ರಾಮದೇವರ ವಿಶೇಷ ಪೂಜೆ ನೆರವೇರಿಸಿದರು. ಉತ್ಸವದ ಅಂತ್ಯದಲ್ಲಿ ಆಗಮಿಸಿದ್ದ ಭಕ್ತರಿಗೆ ತೀರ್ಥ-ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.Sri Jayatirtha Aradhana & Jodu Rathotsava Held at Malkhedaಕಾರ್ಯಕ್ರಮದಲ್ಲಿ ಮಠದ ದಿವಾನರಾದ ಪಂ. ಶಶಿ ಆಚಾರ್ಯ, ಮುಂಬೈನ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಪಂ. ವಿದ್ಯಾಸಿಂಹಾಚಾರ್ಯ ಮಾಹುಲಿ, ಮಳಖೇಡ ಉತ್ತರಾದಿ ಮಠದ ವ್ಯವಸ್ಥಾಪಕ ಪಂ. ವೆಂಕಣ್ಣಾಚಾರ್ಯ ಪೂಜಾರ, ಮಠಾಧಿಕಾರಿ ರಾಮಾಚಾರ್ಯ ಘಂಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Kalaburagi | ಶ್ರೀ ಜಯತೀರ್ಥರ ಕುರಿತ ಪುಸ್ತಕ ಬಿಡುಗಡೆ

ಮಳಖೇಡದ ಕಮಲಾಕರ ಕುಲಕರ್ಣಿ ರಚಿಸಿರುವ “ದಾಸರು ಕಂಡ ಶ್ರೀ ಜಯತೀರ್ಥರು” ಕೃತಿಯನ್ನು ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಲೋಕಾರ್ಪಣೆ ಮಾಡಿದರು.
Kumadvathi College Shikariuraಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, “ಟೀಕಾಚಾರ್ಯರು ರಚಿಸಿದ ಪ್ರತಿಯೊಂದು ವಾಕ್ಯವೂ ಕಲ್ಪವೃಕ್ಷ ಹಾಗೂ ಕಾಮಧೇನುವಿನಂತಿದೆ. ಶ್ರೀ ಜಯತೀರ್ಥರು ತತ್ತ್ವಪ್ರಪಂಚದ ಧ್ರುವತಾರೆಯಾಗಿದ್ದಾರೆ. ಅನೇಕ ದಾಸವರೇಣ್ಯರು ಮಳಖೇಡಕ್ಕೆ ಆಗಮಿಸಿ ಶ್ರೀ ಜಯತೀರ್ಥರ ದರ್ಶನ ಪಡೆದು ಅವರನ್ನು ಕೊಂಡಾಡಿದ್ದಾರೆ. ಆ ದಾಸರ ಭಕ್ತಿಭಾವವನ್ನು ಕಮಲಾಕರ ಕುಲಕರ್ಣಿ ಅವರು ಸಂಗ್ರಹಿಸಿ ಗ್ರಂಥ ರೂಪದಲ್ಲಿ ನೀಡಿರುವುದು ಶ್ಲಾಘನೀಯ ಕಾರ್ಯ” ಎಂದು ಹೇಳಿದರು.

ಆಚರಣೆ-ಅನುಷ್ಠಾನದಿಂದಲೇ ಧರ್ಮ ಮತ್ತು ಸಿದ್ಧಾಂತ ಉಳಿಯುತ್ತದೆ: ಶ್ರೀ ಸತ್ಯಾತ್ಮತೀರ್ಥರು

ಆರಾಧನಾ ಮಹೋತ್ಸವದ ಆಶೀರ್ವಚನದಲ್ಲಿ ಮಾತನಾಡಿದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು, “ಯಾವುದೇ ಧರ್ಮ ಅಥವಾ ಸಿದ್ಧಾಂತ ಉಳಿಯಬೇಕಾದರೆ ಅದು ಕೇವಲ ಗ್ರಂಥಗಳಲ್ಲಿ ಉಳಿಯಬಾರದು; ಆಚರಣೆ ಮತ್ತು ಅನುಷ್ಠಾನದ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.

ಹಿಂದೂ ಧರ್ಮದ ಮೌಲ್ಯಗಳು ಹಾಗೂ ಸನಾತನ ಸಂಸ್ಕೃತಿ ಉಳಿಯಬೇಕಾದರೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಧಾರ್ಮಿಕ ಆಚರಣೆಗಳನ್ನು ಪಾಲಿಸಬೇಕು. ವಿಶೇಷವಾಗಿ ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಧರ್ಮ, ಸಂಸ್ಕಾರ ಹಾಗೂ ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ತಿಳಿಸಿಕೊಡಬೇಕು. ಉತ್ತಮ ಸಂಸ್ಕಾರ ಹೊಂದಿದ ಪೀಳಿಗೆ ರೂಪುಗೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶ್ರೀಗಳು ಕರೆ ನೀಡಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   
PES ShivamoggaJNNCE ShivamoggaKalpa News Advertising DisclaimerKalahamsa Infotech private limited  

Tags: Andra PradeshBayalu Seeme NewsJodu Chariot FestivalKalaburagiKannada News WebsiteLatest News KannadaMaharashtraMalakhedaSedamSri Satyatma Thirtha SwamijiTamilNaduTelanganaUttara KarantakaUttaradi Mathaಉತ್ತರಾದಿ ಮಠಕಲಬುರಗಿಜೋಡು ರಥೋತ್ಸವಮಳಖೇಡಶ್ರೀ ಜಯತೀರ್ಥರ ಮೂಲ ಸನ್ನಿಧಾನಸೇಡಂ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಯಡಕುಮರಿ ಭೂಕುಸಿತ | ಸಂಚಾರ ಪುರಾರಂಭ | ಮಂಗಳೂರು – ವಿಜಯಪುರ ರೈಲು ಯಶಸ್ವಿ ಸಂಚಾರ

Next Post

First Woman Custodian Revives Thiruvarur’s Sacred Sarvavadyam Heritage

kalpa News

kalpa News

Next Post
Thiruvarur Sacred Sarvavadyam Tradition Madras Music Academy

First Woman Custodian Revives Thiruvarur's Sacred Sarvavadyam Heritage

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL