No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
  • Advertise With Us
  • Grievances
  • About Us
  • Contact Us
Friday, August 14, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

50 ವರ್ಷಗಳ ಸಂಭ್ರಮದಲ್ಲಿ Maaza: ವಿಶೇಷ ಅಂಚೆ ಕವರ್ ಬಿಡುಗಡೆ

ರಾಷ್ಟ್ರೀಯ ಮಾವು ದಿನದ ಅಂಗವಾಗಿ ಮಾವು ಬೆಳೆಗಾರರಿಗೆ ಸನ್ಮಾನ

kalpa News by kalpa News
July 24, 2026
in Special Articles
0
Maaza Celebrates 50 Years: Postal Cover Released
Share on FacebookShare on TwitterShare on WhatsApp

ಆಹಾರ ಸಂಸ್ಕರಣಾ ಕೈಗಾರಿಕೆಗಳು ಹಾಗೂ ಅಂಚೆ ಇಲಾಖೆಯ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ಬಿಡುಗಡೆ ಮಾಡಿದ ಈ ವಿಶೇಷ ಅಂಚೆ ಕವರ್, ಭಾರತದ ಶಾಶ್ವತ ಮಾವಿನ ಪರಂಪರೆಯನ್ನು ಸ್ಮರಿಸುತ್ತದೆ.

ಕಲ್ಪ ಮೀಡಿಯಾ ಹೌಸ್  | ಬೆಂಗಳೂರು |

ಭಾರತದ ಸ್ವದೇಶಿ ಬಿಲಿಯನ್-ಡಾಲರ್ ಮೌಲ್ಯದ ಹಣ್ಣು ಆಧಾರಿತ ಪಾನೀಯ ಬ್ರ್ಯಾಂಡ್ ಮಾಝಾ, ಭಾರತೀಯ ಮಾವಿನ ಹಣ್ಣಿನ ನೈಜ ರುಚಿಯನ್ನು ತೋಟಗಳಿಂದ ಕೋಟ್ಯಂತರ ಗ್ರಾಹಕರಿಗೆ ತಲುಪಿಸುತ್ತಾ 50 ವರ್ಷಗಳನ್ನು ಪೂರೈಸಿರುವ ಸಂಭ್ರಮವನ್ನು ಆಚರಿಸುತ್ತಿದೆ.

ರಾಷ್ಟ್ರೀಯ ಮಾವು ದಿನದ ಅಂಗವಾಗಿ, ಕೋಕಾ-ಕೋಲಾ ಇಂಡಿಯಾ ಮತ್ತು ಭಾರತ ಸರ್ಕಾರದ ಅಂಚೆ ಇಲಾಖೆ ಸಂಯುಕ್ತವಾಗಿ ಮಾಝಾದ 50 ವರ್ಷಗಳ ಪಯಣವನ್ನು ಸ್ಮರಿಸುವ ‘ವಿಶೇಷ ಅಂಚೆ ಕವರ್’ ಬಿಡುಗಡೆ ಮಾಡಿವೆ. ಈ ಸಂದರ್ಭದಲ್ಲಿ ಆನಂದನಾ – ದಿ ಕೋಕಾ-ಕೋಲಾ ಇಂಡಿಯಾ ಫೌಂಡೇಶನ್ ಇದರ ಪ್ರಾಜೆಕ್ಟ್ ಉನ್ನತಿಗೆ ಸಂಬಂಧಿಸಿದ ಮಾವು ಬೆಳೆಗಾರರನ್ನು ಸಹ ಸನ್ಮಾನಿಸಲಾಯಿತು. ಭಾರತದ ಮಾವಿನ ಪರಂಪರೆಯನ್ನು ಸಂರಕ್ಷಿಸುವಲ್ಲಿ ಹಾಗೂ ಮಾಝಾನ ಐದು ದಶಕಗಳ ಯಶಸ್ವಿ ಪಯಣ ಸಾಧ್ಯವಾಗುವಂತೆ ತಮ್ಮ ಅಮೂಲ್ಯ ಕೊಡುಗೆ ನೀಡಿರುವ ಹಲವು ತಲೆಮಾರುಗಳ ಕೃಷಿಕ ಸಮುದಾಯದ ಸೇವೆಯನ್ನು ಈ ಮೂಲಕ ಗೌರವಿಸಲಾಯಿತು.
ವಿಶೇಷ ಅಂಚೆ ಕವರ್ ಅನ್ನು ಭಾರತ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಕೇಂದ್ರ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಅವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ, ಸಂವಹನ ಸಚಿವಾಲಯದ ಅಂಚೆ ಇಲಾಖೆಯ ದೆಹಲಿ ವಲಯದ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಕರ್ನಲ್ ಅಖಿಲೇಶ್ ಕುಮಾರ್ ಪಾಂಡೆ, ಕೋಕಾ-ಕೋಲಾ ಇಂಡಿಯಾ ಮತ್ತು ಸೌತ್‌ವೆಸ್ಟ್ ಏಷ್ಯಾದ ಸಾರ್ವಜನಿಕ ವ್ಯವಹಾರಗಳು, ಸಂವಹನ ಮತ್ತು ಸುಸ್ಥಿರತೆ ವಿಭಾಗದ ಉಪಾಧ್ಯಕ್ಷೆ ದೇವಯಾನಿ ರಾಣಾ, ಕೋಕಾ-ಕೋಲಾ ಇಂಡಿಯಾದ ಬಾಟ್ಲಿಂಗ್ ಪಾಲುದಾರರು, ಮಾವಿನ ಹಣ್ಣಿನ ಪೂರೈಕೆದಾರ ಸಂಸ್ಥೆ ಫುಡ್ಸ್ & ಇನ್ಸ್ ಲಿಮಿಟೆಡ್ ಹಾಗೂ ಎನ್‌ಜಿಒ ಪಾಲುದಾರ CENDECT ಉಪಸ್ಥಿತರಿದ್ದರು.

1976ರಲ್ಲಿ ಆರಂಭವಾದ ನಂತರದಿಂದ, Maaza ಭಾರತದಾದ್ಯಂತದ ತೋಟಗಳಲ್ಲಿ ಬೆಳೆಯುವ ಪ್ರಿಯ ಮಾವಿನ ಹಣ್ಣಿನ ಸವಿಯನ್ನು ದೇಶದ ಮನೆಮನೆಗಳಿಗೆ ತಲುಪಿಸುತ್ತಾ ಭಾರತೀಯ ಕುಟುಂಬಗಳ ಅವಿಭಾಜ್ಯ ಅಂಗವಾಗಿದೆ. ಕಳೆದ ಐದು ದಶಕಗಳಿಂದ, ಈ ಬ್ರ್ಯಾಂಡ್ ವರ್ಷಪೂರ್ತಿ ಭಾರತದ ಅತ್ಯಂತ ಪ್ರಿಯ ಹಣ್ಣಾದ ಮಾವಿನ ಸವಿಯನ್ನು ಗ್ರಾಹಕರಿಗೆ ನಿರಂತರವಾಗಿ ಪರಿಚಯಿಸುತ್ತಾ, ಅವರೊಂದಿಗೆ ಭಾವನಾತ್ಮಕ ಬಾಂಧವ್ಯವನ್ನು ಬೆಳೆಸಿಕೊಂಡಿದೆ.
ಈ ವಿಶೇಷ ಅಂಚೆ ಕವರ್, ಮಾವಿನ ತೋಟಗಳು ಮತ್ತು ಪ್ರತಿಷ್ಠಿತ Maaza ಬಾಟಲಿಯಿಂದ ಸ್ಫೂರ್ತಿ ಪಡೆದ ಚಿತ್ರಣದ ಮೂಲಕ, ಭಾರತೀಯ ಮಾವಿನ ಹಣ್ಣಿನೊಂದಿಗೆ Maaza ಹೊಂದಿರುವ ಅವಿನಾಭಾವ ಸಂಬಂಧವನ್ನು ದಾಖಲಿಸುವ ಶಾಶ್ವತ ಅಂಚೆಚೀಟಿ ಸಂಗ್ರಹ ಸ್ಮರಣಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ‘ಬಾಟಲಿಯಲ್ಲಿನ ಮಾವಿನ 50 ವರ್ಷಗಳ ಸಂಭ್ರಮ’ ಎಂಬ ಶೀರ್ಷಿಕೆಯೊಂದಿಗೆ ವಿನ್ಯಾಸಗೊಳಿಸಲಾದ ಈ ವಿಶೇಷ ಕವರ್, ಬ್ರ್ಯಾಂಡ್‌ನ ಐದು ದಶಕಗಳ ಪಯಣಕ್ಕೆ ಗೌರವ ಸಲ್ಲಿಸುವುದರ ಜೊತೆಗೆ, ಅದರ ಯಶಸ್ಸಿನ ಹಿಂದೆ ಇರುವ ರೈತ ಸಮುದಾಯಗಳ ಕೊಡುಗೆಯನ್ನೂ ಸ್ಮರಿಸುತ್ತದೆ.

ಈ ಸಂದರ್ಭದಲ್ಲಿ ಭಾರತ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಕೇಂದ್ರ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಅವರು ಮಾತನಾಡುತ್ತಾ, “ಆಹಾರ ಉತ್ಪಾದನೆಯಲ್ಲಿ ಭಾರತವು ಸ್ವಾವಲಂಬನೆ ಸಾಧಿಸಿದೆ. ಈಗ ನಮ್ಮ ಮುಂದಿನ ಆದ್ಯತೆ, ಮೂಲಸೌಕರ್ಯವನ್ನು ಬಲಪಡಿಸುವುದು ಮತ್ತು ರೈತರಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶಗಳನ್ನು ವಿಸ್ತರಿಸುವ ಮೂಲಕ ಆಹಾರ ಸಂಸ್ಕರಣೆಯ ಕ್ಷೇತ್ರದಲ್ಲಿ ಹೆಚ್ಚಿನ ಮೌಲ್ಯ ಸೃಷ್ಟಿಸುವುದಾಗಿದೆ. ನಮ್ಮ ರೈತರು ನಮ್ಮ ‘ಅನ್ನದಾತರು’ ಆಗಿದ್ದು, ಕೃಷಿ ಮೌಲ್ಯ ಸರಪಳಿಯನ್ನು ಬಲಪಡಿಸಲು ಮಾಡುವ ಪ್ರತಿಯೊಂದು ಪ್ರಯತ್ನವೂ ಅವರ ಭವಿಷ್ಯದಲ್ಲಿ ಮಾಡುವ ಹೂಡಿಕೆಯಾಗಿದೆ. ಭಾರತದ ನೆಚ್ಚಿನ ‘ಆಮ್’ (ಮಾವು) ಹಣ್ಣಿನ ಪರಂಪರೆಯನ್ನು ಆಚರಿಸುತ್ತಾ, ಅದರ ನೈಜ ಸವಿಯನ್ನು ಕೋಟ್ಯಂತರ ಮನೆಗಳಿಗೆ ತಲುಪಿಸುವ ಜೊತೆಗೆ ರೈತರನ್ನು ಬೆಂಬಲಿಸಿ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುತ್ತಿರುವ Maaza ದಂತಹ ಸ್ವದೇಶಿ ಪಾನೀಯ ಬ್ರ್ಯಾಂಡ್‌ಗಳನ್ನು ನೋಡುವುದು ಸಂತಸದ ವಿಷಯವಾಗಿದೆ. ಅಂಚೆ ಇಲಾಖೆಯಿಂದ ಈ ವಿಶೇಷ ಅಂಚೆ ಕವರ್ ಬಿಡುಗಡೆ ಮಾಡಿರುವುದು ಭಾರತದ ಮಾವಿನ ಪರಂಪರೆ ಹಾಗೂ ಅದನ್ನು ಉಳಿಸಿ ಬೆಳೆಸುತ್ತಿರುವ ರೈತರಿಗೆ ಸಲ್ಲಿಸಿದ ಗೌರವವಾಗಿದೆ.” ಎಂದು ಹೇಳಿದರು.

Also read: ಇತಿಹಾಸವನ್ನು ನೆನಪಿಟ್ಟಾಗಲೇ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ: ಎನ್ಇಎಸ್ ಅಧ್ಯಕ್ಷ ನಾರಾಯಣ ರಾವ್

ಕೋಕಾ-ಕೋಲಾ ಇಂಡಿಯಾ ಮತ್ತು ಸೌತ್‌ವೆಸ್ಟ್ ಏಷ್ಯಾದ ಇಂಟಿಗ್ರೇಟೆಡ್ ಆಪರೇಷನ್ಸ್ ವಿಭಾಗದ ಉಪಾಧ್ಯಕ್ಷ ಸುಂದೀಪ್ ಬಜೋರಿಯಾ ಅವರು ಮಾತನಾಡಿ, “ಕಳೆದ ಐದು ದಶಕಗಳಿಂದ Maaza ಆಲ್ಫೋನ್ಸೊ ಸೇರಿದಂತೆ ಭಾರತೀಯ ಮಾವಿನ ಹಣ್ಣುಗಳ ನೈಜ ಸವಿಯನ್ನು ಕೋಟ್ಯಂತರ ಗ್ರಾಹಕರಿಗೆ ತಲುಪಿಸುತ್ತಾ, ದೇಶದ ನೆಚ್ಚಿನ ಹಣ್ಣನ್ನು ವರ್ಷಪೂರ್ತಿ ಲಭ್ಯವಾಗುವಂತೆ ಮಾಡಿದೆ. ರುಚಿಕರವಾದ ಭಾರತೀಯ ಮಾವಿನ ಹಣ್ಣುಗಳ ಸಹಜ ಸವಿಯನ್ನು ಆಧಾರವಾಗಿಟ್ಟುಕೊಂಡಿರುವ Maaza, ತಲೆಮಾರುಗಳಿಂದ ಗ್ರಾಹಕರೊಂದಿಗೆ ಶಾಶ್ವತ ಬಾಂಧವ್ಯವನ್ನು ಬೆಳೆಸಿಕೊಂಡಿದ್ದು, ಖರೀದಿ ವ್ಯವಸ್ಥೆ, ತಾಂತ್ರಿಕ ಬೆಂಬಲ ಮತ್ತು ಮೌಲ್ಯ ಸರಪಳಿ ಸಹಭಾಗಿತ್ವಗಳ ಮೂಲಕ ಭಾರತೀಯ ರೈತ ಕುಟುಂಬಗಳಿಗೆ ವಿನಮ್ರವಾಗಿ ಬೆಂಬಲ ನೀಡುತ್ತಿದೆ. ಈ ಮೈಲಿಗಲ್ಲು, ಕಚ್ಚಾ ವಸ್ತುಗಳ ಸಂಗ್ರಹಣೆಯಿಂದ ಸಂಸ್ಕರಣೆ, ಬಾಟಲಿಗೊಳಿಸುವಿಕೆ ಹಾಗೂ ವಿತರಣೆಯವರೆಗೆ ವ್ಯಾಪಿಸಿರುವ ಪರಿಣಾಮಕಾರಿ ಮೌಲ್ಯ ಸರಪಳಿಗೆ ಸಾಕ್ಷಿಯಾಗಿದೆ. ಇದೇ ವ್ಯವಸ್ಥೆಯು ನಮ್ಮ ಉತ್ಪನ್ನಗಳನ್ನು ದೇಶದಾದ್ಯಂತದ ಗ್ರಾಹಕರಿಗೆ ತಲುಪುವಂತೆ ಮಾಡುತ್ತಿದೆ. ಅಂಚೆ ಇಲಾಖೆಯಿಂದ ಬಿಡುಗಡೆಯಾದ ಈ ವಿಶೇಷ ಅಂಚೆ ಕವರ್, ಕಳೆದ 50 ವರ್ಷಗಳಲ್ಲಿ ಈ ಪಯಣವನ್ನು ಸಾಧ್ಯವಾಗಿಸಿದ ಸಹಭಾಗಿತ್ವ ಮತ್ತು ಸಂಪೂರ್ಣ ಪರಿಸರ ವ್ಯವಸ್ಥೆಗೆ ನೀಡಿರುವ ಗೌರವವಾಗಿದೆ.” ಎಂದು ಹೇಳಿದರು.

JNNCE ShivamoggaSLMG ಬೆವರೆಜಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಪರಿತೋಷ್ ಲಾಧಾನಿ ಅವರು ಮಾತನಾಡಿ, “Maazaದ ಪ್ರತಿಯೊಂದು ಬಾಟಲಿಯ ಹಿಂದೆಯೂ ರೈತರು, ಸಂಸ್ಕರಣಾ ಘಟಕಗಳು, ಉತ್ಪಾದನಾ ಘಟಕಗಳು, ಸರಕು ಸಾಗಣೆದಾರರು, ವಿತರಕರು ಹಾಗೂ ಚಿಲ್ಲರೆ ವ್ಯಾಪಾರಿಗಳು ಪ್ರತಿದಿನ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸುಸಂಘಟಿತ ಮೌಲ್ಯ ಸರಪಳಿಯಿದೆ. ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಪೂರೈಕೆ ಸರಪಳಿಯ ಮೂಲಕ ಮಾವಿನ ಹಣ್ಣುಗಳ ನೈಜ ಸವಿಯನ್ನು ಕೋಟ್ಯಂತರ ಗ್ರಾಹಕರಿಗೆ ತಲುಪಿಸುವಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸುತ್ತಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. Maaza ತನ್ನ 50ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಈ ಗೌರವವು ಸಂಪೂರ್ಣ ಪರಿಸರ ವ್ಯವಸ್ಥೆಯಲ್ಲಿರುವ ಪ್ರತಿಯೊಬ್ಬರಿಗೂ ಸಲ್ಲುತ್ತದೆ. ಅವರ ನಿರಂತರ ಪರಿಶ್ರಮವೇ Maaza ಅನ್ನು ಭಾರತದಾದ್ಯಂತ ಮನೆಮಾತಾಗಿಸಲು ಕಾರಣವಾಗಿದೆ.” ಎಂದು ಹೇಳಿದರು.

ಈ ವಿಶೇಷ ಅಂಚೆ ಕವರ್, Maaza®ದ ಸುವರ್ಣ ಮಹೋತ್ಸವದ ಆಚರಣೆಗಳ ಮುಂದುವರಿದ ಭಾಗವಾಗಿದ್ದು, ‘50 saal se, sip-sip mein aam’ (50 ವರ್ಷಗಳಿಂದ ಗುಟುಕು ಗುಟುಕಿನಲ್ಲೂ ಮಾವು) ಎಂಬ ರಾಷ್ಟ್ರೀಯ ಅಭಿಯಾನವನ್ನೂ ಒಳಗೊಂಡಿದೆ. ಇದು ಭಾರತದ ರಾಷ್ಟ್ರೀಯ ಹಣ್ಣಾದ ಮಾವಿನೊಂದಿಗೆ ಹಾಗೂ ಅದರ ಹಿಂದೆ ಶ್ರಮಿಸುತ್ತಿರುವ ರೈತ ಸಮುದಾಯಗಳೊಂದಿಗೆ Maaza ಕಳೆದ ಐವತ್ತು ವರ್ಷಗಳಿಂದ ಬೆಳೆಸಿಕೊಂಡಿರುವ ಬಾಂಧವ್ಯಕ್ಕೆ ಶಾಶ್ವತ ಗೌರವದ ಸಂಕೇತವಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      Kalpa News Advertising DisclaimerKalahamsa Infotech private limited

Tags: BENGALURUCoca-Cola IndiaKannada NewsKannada News LiveKannada News OnlineKannada News WebsiteKannada WebsiteLatest News KannadaMazzaNews in KannadaNews KannadaPostal Cardಬೆಂಗಳೂರು
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಇತಿಹಾಸವನ್ನು ನೆನಪಿಟ್ಟಾಗಲೇ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ: ಎನ್ಇಎಸ್ ಅಧ್ಯಕ್ಷ ನಾರಾಯಣ ರಾವ್

Next Post

ಸಮಾಜದ ನೈಜ ಸಮಸ್ಯೆಗಳಿಗೆ ಸ್ಪಂದಿಸುವ ಎಐ ಪರಿಹಾರಗಳನ್ನು ರೂಪಿಸಿ: ರುದ್ರೇಗೌಡ ಕರೆ

kalpa News

kalpa News

Next Post
JNNCE: 'Yugma Techfest-2.0' AI Hackathon Inauguration

ಸಮಾಜದ ನೈಜ ಸಮಸ್ಯೆಗಳಿಗೆ ಸ್ಪಂದಿಸುವ ಎಐ ಪರಿಹಾರಗಳನ್ನು ರೂಪಿಸಿ: ರುದ್ರೇಗೌಡ ಕರೆ

Leave a Reply Cancel reply

Your email address will not be published. Required fields are marked *

No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL