ಅರಳುಗೋಡು: ಈಗ ಕೇವಲ ಮಲೆನಾಡಿನ ಮೂಲೆಯ ಯಾರೂ ತಿಳಿಯದ ಹಳ್ಳಿಯಾಗಿ ಉಳಿದಿಲ್ಲ. ನೆಲ್ಲಿಮಕ್ಕಿ, ಮರಬಿಡಿ, ಚೇಗಳ, ಸಂಪ, ಬಣ್ಣುಮನೆ, ಕಂಚಿಕೈ, ಕಾಳಮಂಜಿ, ಇಟಿಗೆ, ಐತುಮನೆ, ಮರಾಠಿಕೇರಿ ಮಜರೆಗಳ ಸುಮಾರು 170 ಕುಟುಂಬಗಳು ಮಂಗನಕಾಯಿಲೆ ಪೀಡಿತ ಸಂತ್ರಸ್ತರಾಗಿದ್ದಾರೆ.
ಮಂಗನ ಕಾಯಿಲೆಯಿಂದ ತತ್ತರಿಸುತ್ತಿರುವ ಹಳ್ಳಿಗರ ಗೋಳಿಗೆ ಕೇವಲ ಮೇಲ್ಪದರದಲ್ಲೇ ನಡೆಯುತ್ತಿದೆ. ಅಲ್ಲಿನ ಪೀಡಿತರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಸರ್ಕಾರ ವ್ಯವಸ್ಥೆ ಮಾಡಿದೆ.
ಇಲ್ಲಿ ಬಹಳ ಜಾಣತನದ ವಿಷಯವೆಂದರೆ ಸಾರ್ವಜನಿಕರೇ ಹೇಳುವಂತೆ ಒಮ್ಮೆ ಮಣಿಪಾಲ್ ಆಸ್ಪತ್ರೆಯಲ್ಲಿ ಪಡೆದರೆ ಮತ್ತೆ ಮರು ಚಿಕಿತ್ಸೆ ಉಚಿತವಿಲ್ಲ. ಮಂಗನಕಾಯಿಲೆ ಒಮ್ಮೆಲೆ ವಾಸಿಯಾಗುವುದಿಲ್ಲ. ಅದಕ್ಕೆ ದೀರ್ಘ ಉಪಚಾರ ಬೇಕು. ಆದರೆ ಪೀಡಿತರಿಗೆ ಸರ್ಕಾರ ಈ ರೀತಿ ಒಂದುಬಾರಿ ಮಾತ್ರ ಉಚಿತವೆಂದರೆ ಏನೂ ಪ್ರಯೋಜನವಾಗುವುದಿಲ್ಲ. ತತಕ್ಷಣ ಸರ್ಕಾರ ಈ ಬಗ್ಗೆ ಗಮನಕೊಟ್ಟು ಮಂಗನಕಾಯಿಲೆ ಪೀಡಿತರಿಗೆ ಜೀವನ ಪೂರ್ತ ಉಚಿತ ಚಿಕಿತ್ಸೆ ನೀಡಿದರೆ ಬಡಹಳ್ಳಿಗರು ಬದುಕಿಯಾರು.
ಈಗಾಗಲೇ ಸರ್ಕಾರ ಗಮನ ನೀಡುತ್ತಿದ್ದರೂ ಈ ಧೋರಣೆಯಲ್ಲಿ ಬದಲಾವಣೆ ತಂದರೆ ಒಳ್ಳೆಯದು.
(ವರದಿ: ಡಾ.ಸುಧೀಂದ್ರ, ಶಿವಮೊಗ್ಗ)
Discussion about this post