No Result
View All Result
RPF Mysuru Railway Theft Lost Mobile Recovered copy
English Articles

RPF Mysuru Cracks Railway Property Theft, Recovers Passenger’s Lost Mobile Phone

by kalpa News
August 31, 2026
0

Kalpa Media House  |  Mysuru  | The Railway Protection Force (RPF), Mysuru Division, has demonstrated prompt action and vigilance by...

Read moreDetails
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
  • Advertise With Us
  • Grievances
  • About Us
  • Contact Us
Monday, August 31, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಆರೋಗ್ಯ - ಜೀವನ ಶೈಲಿ

Rare ‘Artery of Percheron’ Stroke | 65ರ ವೃದ್ಧನಿಗೆ NH ಆಸ್ಪತ್ರೆ ವೈದ್ಯರ ಯಶಸ್ವಿ ಚಿಕಿತ್ಸೆ

kalpa News by kalpa News
July 22, 2026
in ಆರೋಗ್ಯ - ಜೀವನ ಶೈಲಿ, ಶಿವಮೊಗ್ಗ
0
Rare ‘Artery of Percheron’ Stroke Doctors Save Patient in Sahyadri Narayana Hospital
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ರೋಗಿಗೆ ‘ಆರ್ಟರಿ ಆಫ್ ಪೆರ್ಚೆರಾನ್ ಇನ್ಫಾರ್ಕ್ಷನ್’ (Artery of Percheron Infarction) ಎಂಬ ಅಪರೂಪದ ಪಾರ್ಶ್ವವಾಯು (Rare ‘Artery of Percheron’ Stroke) ಉಂಟಾಗಿರುವುದು ಪತ್ತೆಯಾಯಿತು. ಈ ಸ್ಥಿತಿಯಲ್ಲಿ ಮೆದುಳಿನ ಎಚ್ಚರಗೊಳಿಸುವ ವ್ಯವಸ್ಥೆಗೆ ತೀವ್ರ ಹಾನಿಯಾಗಿದ್ದು, ಅವರು ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದರು.

ಚಿಕ್ಕಮಗಳೂರಿನ ಕಡೂರಿನ 65 ವರ್ಷದ ವೃದ್ಧರೊಬ್ಬರಿಗೆ ಅಂದು ಎಂದಿನಂತೆಯೇ ಸಾಮಾನ್ಯ ದಿನವಾಗಿತ್ತು. ರಾತ್ರಿ ಊಟ ಮುಗಿಸಿ ಆರಾಮವಾಗಿ ನಿದ್ರೆಗೆ ಜಾರಿದ ಅವರು, ಮರುದಿನ ಬೆಳಗ್ಗೆ ಎಷ್ಟೇ ಹೊತ್ತಾದರೂ ಎದ್ದುಕೊಳ್ಳಲಿಲ್ಲ. ಮನೆಯವರು ಎಷ್ಟೇ ಪ್ರಯತ್ನಿಸಿದರೂ ಅವರಿಂದ ಯಾವುದೇ ಸ್ಪಂದನೆ ದೊರೆಯದೆ, ಕೇವಲ ಅಸ್ಪಷ್ಟ ಶಬ್ದಗಳು ಮಾತ್ರ ಕೇಳಿಬರುತ್ತಿದ್ದವು.

ಇದರಿಂದ ಗಾಬರಿಗೊಂಡ ಕುಟುಂಬಸ್ಥರು, ಇದು ವಿಷಪ್ರಭಾವವೋ ಅಥವಾ ಬೇರೆ ಕಾಯಿಲೆಯೋ ಎಂಬ ಅನುಮಾನದಿಂದ ತಮ್ಮದೇ ರೀತಿಯಲ್ಲಿ ಎಬ್ಬಿಸಲು ಪ್ರಯತ್ನಿಸುತ್ತಾ ಅಮೂಲ್ಯ ಸಮಯವನ್ನು ಕಳೆದುಕೊಂಡರು. ಕೊನೆಗೆ ಪರಿಸ್ಥಿತಿ ಗಂಭೀರವಾಗಿದೆ ಎಂದು ಅರಿತು ಅವರನ್ನು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲಿಸಿದರು.

Also Read>> Glasgow Commonwealth 2026 | ಟ್ರ್ಯಾಕ್‌ನಲ್ಲಿ ಭಾರತದ ಸ್ಟಾರ್ ಪವರ್

ಎಂಆರ್‌ಐನಲ್ಲಿ ಬಹಿರಂಗವಾದ ನಿಜಾಂಶ

ಆಸ್ಪತ್ರೆಗೆ ತಲುಪಿದ ತಕ್ಷಣ ನರರೋಗ ತಜ್ಞರಾದ ಡಾ. ಹಂಸ ಕೆ.ಎಂ. ಅವರು ತುರ್ತು ಎಂಆರ್‌ಐ ಸ್ಕ್ಯಾನ್ ನಡೆಸಿದರು. ಈ ವೇಳೆ, ರೋಗಿಗೆ ‘ಆರ್ಟರಿ ಆಫ್ ಪೆರ್ಚೆರಾನ್ ಇನ್ಫಾರ್ಕ್ಷನ್’ (Artery of Percheron Infarction) ಎಂಬ ಅಪರೂಪದ ಪಾರ್ಶ್ವವಾಯು ಉಂಟಾಗಿರುವುದು ಪತ್ತೆಯಾಯಿತು. ಈ ಸ್ಥಿತಿಯಲ್ಲಿ ಮೆದುಳಿನ ಎಚ್ಚರಗೊಳಿಸುವ ವ್ಯವಸ್ಥೆಗೆ ತೀವ್ರ ಹಾನಿಯಾಗಿದ್ದು, ಅವರು ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದರು.

ಗೋಲ್ಡನ್ ಅವರ್ ಮೀರಿದರೂ ಜೀವ ಉಳಿಸಿದ ವೈದ್ಯರು

ಸ್ಟ್ರೋಕ್ ಚಿಕಿತ್ಸೆಗೆ ಅತ್ಯಂತ ಮುಖ್ಯವಾದ ‘ಗೋಲ್ಡನ್ ಅವರ್’ (ಸುಮಾರು ನಾಲ್ಕೂವರೆ ಗಂಟೆ) ಈಗಾಗಲೇ ಮೀರಿತ್ತು. ರೋಗಿಯ ಸ್ಥಿತಿ ಗಂಭೀರವಾಗಿದ್ದರಿಂದ ತಕ್ಷಣವೇ ಅವರನ್ನು ವೆಂಟಿಲೇಟರ್‌ಗೆ ಸಂಪರ್ಕಿಸಿ ಐಸಿಯುನಲ್ಲಿ ಚಿಕಿತ್ಸೆ ಆರಂಭಿಸಲಾಯಿತು. ಮೆದುಳಿನ ಊತ ಕಡಿಮೆ ಮಾಡುವ ಔಷಧಗಳು ಹಾಗೂ ರಕ್ತದೊತ್ತಡ ಮತ್ತು ಸಕ್ಕರೆ ನಿಯಂತ್ರಣಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಲಾಯಿತು.

48 ಗಂಟೆಗಳಲ್ಲಿ ಚೇತರಿಕೆ

ವೈದ್ಯರ ನಿರಂತರ ಪ್ರಯತ್ನದಿಂದ ಕೇವಲ 48 ಗಂಟೆಗಳಲ್ಲಿ ರೋಗಿಯ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತು. ನಂತರ ವೆಂಟಿಲೇಟರ್ ತೆಗೆದುಹಾಕಿ ಉಸಿರಾಟ ಮತ್ತು ದೇಹದ ಸಮತೋಲನ ಕಾಯ್ದುಕೊಳ್ಳಲು ಅಗತ್ಯ ವ್ಯಾಯಾಮಗಳನ್ನು ಮಾಡಿಸಲಾಯಿತು. ಆಸ್ಪತ್ರೆಗೆ ದಾಖಲಾದ ನಾಲ್ಕೇ ದಿನಗಳಲ್ಲಿ ಅವರು ಯಾರ ಸಹಾಯವೂ ಇಲ್ಲದೆ ನಡೆಯುವಷ್ಟು ಗುಣಮುಖರಾಗಿ ಮನೆಗೆ ಮರಳಿದರು.

ಅಪರೂಪದ ಸ್ಟ್ರೋಕ್ ಪತ್ತೆಹಚ್ಚುವುದು ಏಕೆ ಕಷ್ಟ?

ಸಾಮಾನ್ಯವಾಗಿ ಮೆದುಳಿಗೆ ರಕ್ತ ಪೂರೈಸಲು ಎರಡು ಪ್ರತ್ಯೇಕ ರಕ್ತನಾಳಗಳಿರುತ್ತವೆ. ಆದರೆ ಶೇಕಡಾ 4ರಿಂದ 12ರಷ್ಟು ಜನರಲ್ಲಿ ಮಾತ್ರ ಎರಡೂ ಭಾಗಗಳಿಗೆ ಒಂದೇ ರಕ್ತನಾಳದಿಂದ ರಕ್ತ ಪೂರೈಕೆ ಆಗುತ್ತದೆ. ಆ ರಕ್ತನಾಳದಲ್ಲಿ ಅಡಚಣೆ ಉಂಟಾದರೆ, ಮೆದುಳಿನ ಎರಡೂ ಭಾಗಗಳಿಗೆ ರಕ್ತ ಪೂರೈಕೆ ನಿಲ್ಲಿ, ವ್ಯಕ್ತಿ ಹಠಾತ್ತನೆ ಗಾಢ ನಿದ್ರೆಯಂತಿರುವ ಸ್ಥಿತಿಗೆ ಅಥವಾ ಕೋಮಾಗೆ ಜಾರುತ್ತಾನೆ.

ಈ ರೀತಿಯ ಸ್ಟ್ರೋಕ್‌ನಲ್ಲಿ ಸಾಮಾನ್ಯ ಲಕ್ಷಣಗಳಾದ ಮುಖ ಸೊಟ್ಟಗಾಗುವುದು, ಕೈಕಾಲು ದುರ್ಬಲವಾಗುವುದು ಅಥವಾ ಮಾತು ತೊದಲುವುದು ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ಇದನ್ನು ಪತ್ತೆಹಚ್ಚುವುದು ಬಹಳ ಸವಾಲಿನ ವಿಷಯ.

ವೈದ್ಯರ ಎಚ್ಚರಿಕೆ

“ಮಲಗಿದ ವ್ಯಕ್ತಿಯನ್ನು ಎಬ್ಬಿಸಿದಾಗ ಏಳದಿದ್ದರೆ, ಜೊತೆಗೆ ಉಸಿರಾಟದಲ್ಲಿ ವ್ಯತ್ಯಾಸ, ಬಾಯಲ್ಲಿ ಜೊಲ್ಲು ಸುರಿಯುವುದು ಅಥವಾ ಪ್ರಜ್ಞಾಹೀನ ಸ್ಥಿತಿ ಕಂಡುಬಂದರೆ, ಅದನ್ನು ನಿರ್ಲಕ್ಷ್ಯ ಮಾಡಬಾರದು. ತಕ್ಷಣವೇ ಆಸ್ಪತ್ರೆಗೆ ಕರೆತರುವುದು ಅತ್ಯಂತ ಮುಖ್ಯ. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆತರೆ ಅಪರೂಪದ ಸ್ಟ್ರೋಕ್‌ನಿಂದಲೂ ಜೀವ ಉಳಿಸಬಹುದು,” ಎಂದು ಡಾ. ಹಂಸ ಕೆ.ಎಂ. ತಿಳಿಸಿದ್ದಾರೆ.

ಗಾಢ ನಿದ್ರೆಯಂತೆ ಕಾಣುವ ಲಕ್ಷಣಗಳನ್ನೂ ಲಘುವಾಗಿ ತೆಗೆದುಕೊಳ್ಳಬಾರದು. ತಕ್ಷಣದ ವೈದ್ಯಕೀಯ ನೆರವು ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

Rare ‘Artery of Percheron’ Stroke: Doctors Save Patient Against Odds

Shivamogga: What began as a normal night turned into a medical emergency for a 65-year-old man from Kadur in Chikkamagaluru district. After having dinner, he went to sleep as usual, but the next morning, he did not wake up. Despite repeated attempts, his family could not rouse him; he only made faint, unclear sounds.

Alarmed, the family initially suspected poisoning or some other illness and tried various ways to wake him, losing precious time in the process. As his condition worsened, they rushed him to Sahyadri Narayana Hospital in Shivamogga.

Diagnosis Reveals Rare Stroke

Upon arrival, neurologist Dr. Hamsa K.M. immediately ordered an emergency MRI scan. The results revealed that the patient had suffered a rare type of stroke known as Artery of Percheron Infarction. This condition affects the brain’s arousal system, pushing the patient into a deep unconscious state.Kalahamsa Infotech private limited

Critical Care Beyond the ‘Golden Hour’

By the time he reached the hospital, the critical “golden hour” window for stroke treatment (around 4.5 hours) had already passed. Given the severity of his condition, he was placed on a ventilator and shifted to the Intensive Care Unit (ICU). Doctors administered medications to reduce brain swelling and strictly controlled his blood pressure and blood sugar levels.

Remarkable Recovery in 48 Hours

Thanks to continuous monitoring and timely intervention, the patient began to show signs of improvement within just 48 hours. He was gradually taken off the ventilator and started on breathing and balance exercises.

In a remarkable turnaround, he recovered enough to walk independently within four days of hospitalization and was discharged in stable condition.

Why This Stroke Is Hard to Detect

Typically, the brain receives blood supply through two separate arteries. However, in about 4–12% of people, a single artery supplies both sides of the brain. If this artery gets blocked, blood flow to both sides is suddenly cut off, causing the person to slip into deep sleep or even a coma.

Unlike common strokes, this condition does not present typical symptoms such as facial drooping, limb weakness, or slurred speech. This makes it extremely difficult to identify in the early stages.

Doctor’s Warning

a person does not wake up from sleep and shows signs like irregular breathing, drooling, or unconsciousness, it should never be ignored. It is a medical emergency, and the patient must be taken to a hospital immediately. Timely treatment can save lives even in rare stroke cases,” said Dr. Hamsa K.M.

What may appear as deep sleep could be a life-threatening condition. Immediate medical attention is crucial and can make the difference between life and death.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

Kalpa News Advertising Disclaimer

Tags: Artery of Percheron InfarctionHealth NewsKannada News WebsiteLatest News KannadaLocal NewsMalnad NewsMedical NewsRare ‘Artery of Percheron’ StrokeSahyadri Narayana HospitalShimogaShivamoggaShivamogga Newsಆರ್ಟರಿ ಆಫ್ ಪೆರ್ಚೆರಾನ್ ಇನ್ಫಾರ್ಕ್ಷನ್ಎಂಆರ್‌ಐಚಿಕ್ಕಮಗಳೂರುಪಾರ್ಶ್ವವಾಯುಶಿವಮೊಗ್ಗಸಹ್ಯಾದ್ರಿ ನಾರಾಯಣ ಆಸ್ಪತ್ರೆ
Share211Tweet132Send
Aniruddha Vasishta S R

Aniruddha Vasishta S R

Editor-in-Chief

Previous Post

EAM Jaishankar | ಮನಿಲಾದಲ್ಲಿ ಭಾರತ–ಅಮೆರಿಕಾ ಸಭೆ: ವ್ಯಾಪಾರ, ರಕ್ಷಣಾ, ಎಐ ವಿಚಾರ ಚರ್ಚೆ

Next Post

Shikaripura | 23 ವರ್ಷದ ಯುವಕನಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ | ಕಾರಣವೇನು?

kalpa News

kalpa News

Next Post
Shikaripura | 23 ವರ್ಷದ ಯುವಕನಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ | ಕಾರಣವೇನು?

Shikaripura | 23 ವರ್ಷದ ಯುವಕನಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ | ಕಾರಣವೇನು?

Leave a Reply Cancel reply

Your email address will not be published. Required fields are marked *

No Result
View All Result
RPF Mysuru Railway Theft Lost Mobile Recovered copy
English Articles

RPF Mysuru Cracks Railway Property Theft, Recovers Passenger’s Lost Mobile Phone

by kalpa News
August 31, 2026
0

Kalpa Media House  |  Mysuru  | The Railway Protection Force (RPF), Mysuru Division, has demonstrated prompt action and vigilance by...

Read moreDetails
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL