Monday, June 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಬೆಂಗಳೂರು ನಗರ

ಬಾಡಿಗೆ ಕರಾರು: ಲೀಗಲ್‍ಡೆಸ್ಕ್-ಬೆಂಗಳೂರು ಒನ್ ಕೇಂದ್ರದ ನೂತನ ಸೇವೆ ಹೇಗಿದೆ ನೋಡಿ

September 8, 2018
in ಬೆಂಗಳೂರು ನಗರ
0 0
0
Share on facebookShare on TwitterWhatsapp
Read - 2 minutes

ಬೆಂಗಳೂರು: ಬೆಂಗಳೂರು ಮೂಲದ ಕಾನೂನು ತಂತ್ರಜ್ಞಾನ ಕಂಪನಿ ಲೀಗಲ್‍ಡೆಸ್ಕ್.ಕಾಂ, ಬೆಂಗಳೂರು ಒನ್ ಸಹಯೋಗದಲ್ಲಿ ಹೊಸ ಆನ್‍ಲೈನ್ ಬಾಡಿಗೆ ಒಪ್ಪಂದ ಸೇವೆಯನ್ನು ಪ್ರಾರಂಭಿಸಿದೆ.

ನಗರದ ನಿವಾಸಿಗಳು ಈಗ ಬಾಡಿಗೆ ಕರಾರು ಪತ್ರಗಳು ಮತ್ತು ಇತರೆ ದಾಖಲೆಗಳನ್ನು ನಗರದಾದ್ಯಂತ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಿದ್ಧಪಡಿಸಬಹುದು. ಗ್ರಾಹಕರು ತಮಗೆ ಹತ್ತಿರದ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಬಹುದು, ಒಪ್ಪಂದದ ಕರಡಿಗೆ ಅಗತ್ಯವಾದ ವಿವರಗಳನ್ನು ನೀಡಿ, ಹಣ ಪಾವತಿಸಿ ದಾಖಲೆ ವಿಲೇವಾರಿಯಾಗಬೇಕಾದ ವಿಳಾಸ ನೀಡಬೇಕು. ಲೀಗಲ್‍ಡೆಸ್ಕ್ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಒಪ್ಪಂದ ಸೃಷ್ಟಿಸಲು, ಮುದ್ರಾಂಕ ಶುಲ್ಕ ಪಾವತಿಸಲು ಮತ್ತು ಗ್ರಾಹಕರ ಮನೆಬಾಗಿಲಿಗೆ ಒಪ್ಪಂದದ ಪ್ರತಿಯನ್ನು ಪೂರೈಸಲು ನೆರವಾಗುತ್ತದೆ.

ಈ ಸೇವೆಗೆ ಮಲ್ಲೇಶ್ವರಂನ ಬೆಂಗಳೂರು ಒನ್ ಕೇಂದ್ರದಲ್ಲಿ ಖ್ಯಾತ ನಟ ದಿಗಂತ್ ಮಂಚಾಲೆ ಹಾಗೂ ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಚಾಲನೆ ನೀಡಿದರು. ಐಸ್ಪಿರಿಟ್‍ನ ಕಾರ್ತಿಕ್ ಕೆ. ಎಸ್. ಮತ್ತು ಕರ್ನಾಟಕ ಸರ್ಕಾರದ ಡೈರೆಕ್ಟೊರೇಟ್ ಆಫ್ ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವೀಸಸ್ ಹೇಮಂತ್ ಕುಮಾರ್ (ಇಡಿಸಿಎಸ್) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಲೀಗಲ್‍ಟೆಕ್ ಸ್ಟಾರ್ಟಪ್ ಶ್ರೀಸಾಮಾನ್ಯರಿಗೆ ಕಾನೂನು ದಾಖಲೀಕರಣ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಬಯಕೆ ಹೊಂದಿದೆ ಮತ್ತು ಈ ಹೊಸ ಸೇವೆಯ ಪರಿಚಯವು ಈ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ. ಲೀಗಲ್‍ಡೆಸ್ಕ್ ಸಂಸ್ಥಾಪಕ ಕೃಪೇಶ್ ಭಟ್, `ನಮ್ಮ ರೆಂಟಲ್ ಅಗ್ರಿಮೆಂಟ್ ಸೇವೆಯು ಬೆಂಗಳೂರು ಒನ್ ಕೇಂದ್ರಗಳಲ್ಲಿ ದೊರೆಯಲಿರುವ ಇತರೆ ಹಲವಾರು ದಾಖಲೆ ಸೇವೆಗಳಲ್ಲಿ ಮೊದಲನೆಯದಾಗಿದೆ. ನಾವು ಇತರೆ ಆನ್‍ಲೈನ್ ದಾಖಲೆಯ ಸೇವೆಗಳಾದ ಆಧಾರ್-ಆಧಾರಿತ ಇ-ಸೈನ್, ಉಯಿಲು, ಪವರ್ ಆಫ್ ಅಟಾರ್ನಿ, ಹೆಸರು ಬದಲಾವಣೆ, ಸಾಮಾನ್ಯ ಒಪ್ಪಂದಗಳು ಇತ್ಯಾದಿಗಳನ್ನು ಒದಗಿಸಲಿದ್ದೇವೆ. ಮುಂದಿನ ದಿನಗಳಲ್ಲಿ ಈ ಸೇವೆಗಳನ್ನು ಇತರೆ ನಗರಗಳ ನಾಗರಿಕ ಸೇವಾ ಕೇಂದ್ರಗಳಿಗೆ ವಿಸ್ತರಿಸಲಿದ್ದೇವೆ ಎಂದರು.

ಈ ವೇಳೆ ಮಾತನಾಡಿದ ಇಡಿಸಿಎಸ್‍ನ ಹೇಮಂತ್ ಕುಮಾರ್, ಕರ್ನಾಟಕದಲ್ಲಿರುವ ಎಲ್ಲಾ 750 ಬ್ಯಾಂಗಲೋರ್ ಒನ್ ಕೌಂಟರ್‍ಗಳಲ್ಲೂ ರೆಂಟಲ್ ಅಗ್ರಿಮೆಂಟ್ ಸೇವೆ ಲಭ್ಯವಿದ್ದು, ಈ ಸೇವೆ ರಾಜ್ಯದ ನಾಗರಿಕರಿಗೆ ಬಹಳ ಉಪಯುಕ್ತವಾಗಲಿದೆ ಎಂದರು.

ಈ ಹೊಸ ಸೇವೆ ಕುರಿತು ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮಾತನಾಡಿ, ಬೆಂಗಳೂರು ಒನ್ ಕೇಂದ್ರಗಳ ಮೂಲಕ ಈ ಸೇವೆ ಲಭ್ಯವಾಗಿರುವಂತೆ ಮಾಡಿರುವುದರಿಂದ ಸಮುದಾಯದ ಎಲ್ಲಾ ವರ್ಗಗಳ ನಾಗರಿಕರಿಗೆ ಸೂಕ್ತ ರೀತಿಯಲ್ಲಿ ಸಿದ್ಧಪಡಿಸಿದ ಬಾಡಿಗೆ ಕರಾರು ಪತ್ರಗಳು ಮತ್ತು ಕಾನೂನು ದಾಖಲೆಗಳು ಕೈಗೆಟುಕುವ ದರಗಳಲ್ಲಿ ಲಭ್ಯವಾಗುವಂತಾಗಿದೆ ಎಂದರು.

ನಟ ದಿಗಂತ್ ಮಂಚಾಲೆ ಮಾತನಾಡಿ, ಲೀಗಲ್‍ಡೆಸ್ಕ್‍ನಿಂದ ಇದೊಂದು ಅದ್ಭುತ ಉಪಕ್ರಮವಾಗಿದೆ. ಭಾರತದಾದ್ಯಂತ ಇತರೆ ಪಟ್ಟಣಗಳು ಮತ್ತು ನಗರಗಳಲ್ಲೂ ಇಂತಹ ಸೇವೆಗಳನ್ನು ಪರಿಚಯಿಸುವುದನ್ನು ಎದುರು ನೋಡುತ್ತಿದ್ದೇನೆ ಎಂದರು.

ಬೆಂಗಳೂರು ಒನ್ ನಾಗರಿಕ ಸೇವಾ ಕೇಂದ್ರವಾಗಿದ್ದು ಸರ್ಕಾರ, ಉದ್ಯಮಗಳು ಮತ್ತು ಗ್ರಾಹಕರ ನಡುವೆ ಸೇವೆಗಳು ಮತ್ತು ಮಾಹಿತಿಯನ್ನು ಪೂರೈಸುತ್ತದೆ. ಅಲ್ಲಿ ನೀಡಲಾಗುವ ಸೇವೆಗಳಲ್ಲಿ ಆಸ್ತಿ ತೆರಿಗೆ, ಯುಟಿಲಿಟಿ ಬಿಲ್‍ಗಳು, ಟ್ರಾಫಿಕ್ ದಂಡಗಳು, ಸಾರಿಗೆ ಬುಕಿಂಗ್‍ಗಳು, ಸರ್ಕಾರದ ಉದ್ಯೋಗ ನೇಮಕಾತಿ, ಕೌಶಲ್ಯಾಭಿವೃದ್ಧಿ, ಮತದಾರರ ಗುರುತಿನ ಚೀಟಿ ನೀಡಿಕೆ ಇತ್ಯಾದಿ ಒಳಗೊಂಡಿವೆ. ಬಾಡಿಗೆ ಕರಾರು ಪತ್ರ ಸೇವೆ ಬೆಂಗಳೂರು ಒನ್‍ನಲ್ಲಿ ನೀಡಲಾಗುತ್ತಿರುವ ಹೊಸ ಸೇವೆಯಾಗಿದೆ.

ಲೀಗಲ್‍ಡೆಸ್ಕ್.ಕಾಂ(LeaglDesk.com) ತಂತ್ರಜ್ಞಾನ ಪ್ಲಾಟ್‍ಫಾರಂ ಆಗಿದ್ದು ದಾಖಲೆ ಪ್ರಕ್ರಿಯೆಗಳನ್ನು ಡಿಜಿಟಲೀಕರಣಕ್ಕೆ ನೆರವಾಗುತ್ತದೆ. ಈ ಸ್ಟಾರ್ಟಪ್ ಡಿಐವೈ ಪ್ಲಾಟ್‍ಫಾರಂ ಆಗಿದ್ದು ಗ್ರಾಹಕರು ಮತ್ತು ಕಾರ್ಪೊರೇಟ್‌ಗಳಿಗೆ ಆನ್‍ಲೈನ್‍ನಲ್ಲಿ 100ಕ್ಕೂ ಹೆಚ್ಚು ಕಾನೂನು ದಾಖಲೆಗಳನ್ನು ಸಿದ್ಧಪಡಿಸಲು ಮತ್ತು ಅವುಗಳನ್ನು ಆಧಾರ್ ಬಳಸಿ ಡಿಜಿಟಲಿ ಸಹಿ ಮಾಡಲು ನೆರವಾಗುತ್ತದೆ. ಈ ಲೀಗಲ್-ಟೆಕ್ ಕಂಪನಿಯ ಮುಖ್ಯ ಕಛೇರಿ ಬೆಂಗಳೂರಿನಲ್ಲಿದ್ದು ಚೆನ್ನೈ, ಕೊಲ್ಕತಾ, ಮುಂಬೈ ಮತ್ತು ದೆಹಲಿಗಳಲ್ಲಿ ಕಚೇರಿಗಳನ್ನು ಹೊಂದಿದೆ.

ದಾಖಲೆಗಳ ಡಿಜಿಟೈಸ್ ಮಾಡುವ ಈ ಸ್ಟಾರ್ಟಪ್‍ನ ಪ್ರಯತ್ನಗಳನ್ನು ಬ್ಲೂಮ್‍ಬರ್ಗ್ ಟೆಲಿವಿಷನ್, ಗೂಗಲ್ ಲಾಂಚ್‍ಪ್ಯಾಡ್, ಫೋರ್ಬ್‌ಸ್ ಏಷ್ಯಾ ಮತ್ತು ಇಂಡಿಯಾ ಟುಡೇ ಮಾನ್ಯತೆ ಮಾಡಿವೆ. ಹೆಚ್ಚು ಆರ್ಡರ್ ಪಡೆಯುವ ದಾಖಲೆಗಳು ಸಾಲದ ದಾಖಲೆಗಳು, ಬಾಡಿಗೆ ಕರಾರು ಪತ್ರಗಳು, ಉಯಿಲು, ಗಿಫ್ಟ್ ಡೀಡ್, ಹೆಸರು ಬದಲಾವಣೆ ದಾಖಲೆಗಳು ಇತ್ಯಾದಿ.

Tags: Bangalore OneBengaloreC N Ashwath NarayanLeaglDesk.comrental agreement
Previous Post

ಆರ್ ಜೆ ನಯನಾ ಜೊತೆ ಬೆಳಗಿನ ಪಯಣ

Next Post

ಗಣಪತಿ ಕೂರಿಸ್ತೀರಾ? ನಮ್ಮೊಂದಿಗೆ ಫೋಟೋ ಹಂಚಿಕೊಳ್ಳಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಗಣಪತಿ ಕೂರಿಸ್ತೀರಾ? ನಮ್ಮೊಂದಿಗೆ ಫೋಟೋ ಹಂಚಿಕೊಳ್ಳಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025

ಶಿವಮೊಗ್ಗ | ಬೆಳ್ಳಂಬೆಳಗ್ಗೆ ಬೈಕ್ – ಆಟೋ ಡಿಕ್ಕಿ | ಆಟೋ ಚಾಲಕ ಸಾವು

June 7, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!