ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗದ ರಂಗಾಯಣವು ತಿಂಗಳ ವಾರಾಂತ್ಯ ನಾಟಕ ಪ್ರದರ್ಶನ ಮಾಲಿಕೆಯಡಿ ಫೆ.18ರ ನಾಳೆ ಸಂಜೆ 6.30ಕ್ಕೆ ರಂಗಾಯಣದಲ್ಲಿ ಕೆ.ವಿ. ಸುಬ್ಬಣ್ಣ ರಚನೆಯ ಬಿ.ಆರ್.ವೆಂಕಟರಮಣ ಐತಾಳರ ನಿರ್ದೇಶನದ ‘ಚಾಣಕ್ಯ ಪ್ರಪಂಚ’ ನಾಟಕವು ಪ್ರದರ್ಶನಗೊಳ್ಳಲಿದೆ.
ನಾಟಕದ ಕಥಾ ಸಾರಾಂಶ:
ಭಾರತೀಯ ಇತಿಹಾಸದಲ್ಲಿ ಕ್ರಿಸ್ತಪೂರ್ವ ೪ನೆಯ ಶತಮಾನದ ಉತ್ತರಾರ್ಧವು ಸಣ್ಣ ಪುಟ್ಟ ತುಂಡು ರಾಜ್ಯಗಳು ಒಂದಾಗಿ ಬಲಿಷ್ಠ ಕೇಂದ್ರದ ಸಾಮ್ರಾಜ್ಯವೊಂದು ನಿರ್ಮಾಣವಾದ ಮಹತ್ವದ ಸಂಧಿಕಾಲದಲ್ಲಿ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿ ನಿಲ್ಲಿಸಿದ ಅದರ ರೂವಾರಿ ಆಚಾರ್ಯ ಚಾಣಕ್ಯನೆಂದು ಇತಿಹಾಸ ಗುರುತಿಸಿದೆ.
ಅರ್ಥಶಾಸ್ತ್ರಕಾರನಾದ ಚಾಣಕ್ಯ ವಿಷ್ಣುಶರ್ಮನು ನಂದರನ್ನು ನಿವಾರಿಸಿ ಚಂದ್ರಗುಪ್ತನನ್ನು ಪಟ್ಟಕ್ಕೆತಂದು, ರಾಜ್ಯತಂತ್ರದಲ್ಲಿ ಅವನನ್ನು ಪಳಗಿಸಿ, ಅವನ ಸಾಮ್ರಾಜ್ಯ ವ್ಯವಸ್ಥಿತವಾಗಲು ನಂದನಿಷ್ಠೆಯ ಅಮಾತ್ಯರಾಕ್ಷಸನನ್ನು ಪಲ್ಲಟಗೊಳಿಸಿ ಚಂದ್ರನಿಷ್ಠನನ್ನಾಗಿ ಪರಿವರ್ತಿಸುವ ಕಥಾವಸ್ತುವುಳ್ಳ ಈ ನಾಟಕವನ್ನು ವಿಶಾಖದತ್ತನು ಬರೆದ ಮುದ್ರಾರಾಕ್ಷಸ ಎಂಬ ಸಂಸ್ಕೃತ ನಾಟಕದಿಂದ ಆಧರಿಸಿ ಕೆ.ವಿ. ಸುಬ್ಬಣ್ಣ ಮರುರೂಪಿಸಿದ್ದಾರೆ.
ಕೋವಿಡ್-19ರ ಹಿನ್ನೆಲೆಯಲ್ಲಿ ಪ್ರೇಕ್ಷಕರು ಸರ್ಕಾರಿ ಮಾರ್ಗಸೂಚಿ ಪ್ರಕಾರ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯ. ಟಿಕೆಟ್ ದರ ಒಬ್ಬರಿಗೆ 20ರೂ. ನಿಗಧಿ ಪಡಿಸಲಾಗಿದೆ. ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವವಸುವಂತೆ ವಿನಂತಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post