ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲಾ ಕೇಂದ್ರದಲ್ಲಿ ನವರಾತ್ರಿ ವೈಭವಕ್ಕೆ ವಿಜೃಂಭಣೆಯ ತೆರೆ ಬಿದ್ದಿದೆ.
ಇಂದು ಸಂಜೆ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ನಂದಿ ಕೋಲಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಆಯ್ದ ಕೆಲವು ದೇವರುಗಳ ಉತ್ಸವ ಮೂರ್ತಿಗಳು ಮಾತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಜನರು ಮಾತ್ರ ನಿರೀಕ್ಷೆಗೆ ಮೀರಿ ಪಾಲ್ಗೊಂಡಿದ್ದರು. ಕೋಟೆ ದೇವಾಲಯದಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಫ್ರೀಡಂ ಪಾರ್ಕ್ಗೆ ಸೇರಿತು.
ಇನ್ನು, ಫ್ರೀಡಂ ಪಾರ್ಕ್ ಅವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬನ್ನಿ ಪೂಜೆ ಸಲ್ಲಿಸಿದ ತಹಶೀಲ್ದಾರ್ ನಾಗರಾಜ್ ಅವರು, ಬನ್ನಿ ಕಡಿದರು. ಆದರೆ, ಸಂಪ್ರದಾಯದಂತೆ ಬಾಳೆ ಗಿಡ ಒಂದೇ ಏಟಿಗೆ ತುಂಡಾಗಲಿಲ್ಲ. ಬಾಳೆ ಗಿಡ ಹೆಚ್ಚು ದಪ್ಪದಾಗಿದ್ದುದೇ ಒಂದೇ ಏಟಿಗೆ ತುಂಡಾಗದೇ ಇರಲು ಕಾರಣ ಎಂದು ಹೇಳಲಾಗಿದೆ.
ಕೊರೋನಾ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ 250 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಜಮಾಯಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post