No Result
View All Result
MEIL Completes Historic Largest Concrete Pour for PHWR at Kaiga
English Articles

MEIL Completes Historic Largest Concrete Pour for PHWR at Kaiga

by kalpa News
July 6, 2026
0

Kalpa Media House  |  Karwar  | Megha Engineering & Infrastructures Ltd. (MEIL) has successfully completed one of the largest monolithic...

Read moreDetails
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
  • Advertise With Us
  • Grievances
  • About Us
  • Contact Us
Tuesday, July 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ನಮ್ಮೊಳಗಿನ ಅಮ್ಮನ ಅನುಭೂತಿಯ ಮೂರ್ತರೂಪ

ಜುಲೈ 25ರಂದು ಪೂಜಾ ರಘುನಂದನ್ ರ ಏಕವ್ಯಕ್ತಿ ರಂಗಪ್ರಯೋಗ ತಾಯಿಯಾಗುವುದೆಂದರೆ...

kalpa News by kalpa News
July 25, 2022
in ಶಿವಮೊಗ್ಗ
0
ನಮ್ಮೊಳಗಿನ ಅಮ್ಮನ ಅನುಭೂತಿಯ ಮೂರ್ತರೂಪ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |     

ವಿಶೇಷ ಲೇಖನ: ಕೆ.ವಿ. ಅಜೇಯ ಸಿಂಹ    

ಅಮ್ಮ, ಮದರ್, ಮಮ್ಮಿ, ಮಾ ಹೀಗೆ ಏನೇ ಕರೆದರೂ ಅವಳು ಅವಳೇ…ಎಲ್ಲದರಲ್ಲೂ ಮ ಕಾರವಿದೆ ಅದೇ ಮಮತೆ. ಅದೇ ಹೆಣ್ಣು. ಅವಳೇ ತಾಯಿ…ತಾಯಿಯಾಗುವುದೆಂದರೆ ಅದು ತನ್ನೊಡಲ ಕಂದನಿಗೆ ಮಾತ್ರವಲ್ಲ, ಜಗದೆಲ್ಲ ಕಂದಮ್ಮಗಳಿಗೆ ಎನ್ನುವ ಮಹೋನ್ನತ ಭಾವವನ್ನು ಮತ್ತೆ ಮತ್ತೆ ಮೂರ್ತರೂಪವಾಗಿಸುತ್ತಿದೆ ಹಾಸನದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಜುಲೈ 25ರಂದು ಸಂಜೆ 6:30ಕ್ಕೆ ನಡೆಯುತ್ತಿರುವ ಏಕವ್ಯಕ್ತಿ ರಂಗಪ್ರಯೋಗ ತಾಯಿಯಾಗುವುದೆಂದರೆ….

ರಂಗಕಲಾವಿದೆ ಪೂಜಾ ರಘುನಂದನ್ ಸ್ವಾನುಭವವನ್ನು ಪ್ರೇಕ್ಷಕರೆದುರು ಅನಾವರಣಗೊಳಿಸುತ್ತಿದ್ದಾರೆ. ಇದಕ್ಕೆ ಕೃಷ್ಣಮೂರ್ತಿ ಕವತ್ತಾರ್ ಅವರ ದಕ್ಷ ನಿರ್ದೇಶನವಿದೆ. ಸಮಾಜಮುಖಿಯಾಗಿ ರೋಟರಿ ಸಂಸ್ಥೆಯ ಅಧ್ಯಕ್ಷೆಯಾಗಿ ಛಾಪುಮೂಡಿಸಿರುವ, ಸೆನ್ಸಾರ್ ಮಂಡಳಿ ಸದಸ್ಯರಾಗಿರುವ ಪೂಜಾ ರಘುನಂದನ್ ಅವರ ಬದುಕಿನ ಕಥೆ ಇದು. ಬರಿದಾದ ಒಡಲು ಎಂದು ಕೊರಗುತ್ತಿರುವ ಅಸಂಖ್ಯಾತ ದಂಪತಿಗಳಿಗೆ, ಮಡಿಲು ತುಂಬುವ ಪುಟ್ಟಕಂದಮ್ಮನೆಡೆಗೆ ಕರೆದೊಯ್ಯವ ಶ್ರೇಷ್ಠತಮ ಕಾರ್ಯ ಇದಾಗಿದೆ. ಕುಂದಾನಗರಿ ಬೆಳಗಾವಿಯಲ್ಲಿ ಜನಿಸಿ, ತಾಯಿ ಹೇಮಾವತಿಯ ಮಡಿಲಾದ ಹಾಸನಕ್ಕೆ ಬಂದು ಸೇರಿದ ಪೂಜಾ ರಘುನಂದನ್ ಅವರ ಬದುಕಿನಲ್ಲಿ ನಂದುತ್ತಿದ್ದ ಆಶಾಕಿರಣವು ಮತ್ತೆ ಮಹಾಜ್ಯೋತಿಯಾದ ಕಥಾನಕ ಇದಾಗಿದೆ.

ಏಕವ್ಯಕ್ತಿ ರಂಗಪ್ರಯೋಗವೇ ಸವಾಲು
ಪಾತ್ರವೊಂದರ ಚಿತ್ರಣವನ್ನು ರಂಗಕ್ಕೆ ತರುವುದೇ ಕಲಾವಿದನಿಗೆ ಸವಾಲು, ವ್ಯಕ್ತಿಯೋರ್ವನೇ ಬೇರೇ ಬೇರೆ ಪಾತ್ರಗಳು, ಅವುಗಳ ಮನೋಧರ್ಮವನ್ನು ರಂಗದಲ್ಲಿ ತಂದು, ಪ್ರೇಕ್ಷಕನಿಗೆ ಆಪ್ತವಾಗಿ ವಿಚಾರಧಾರೆಗಳನ್ನು ಮುಟ್ಟಿಸುವುದು ಅತ್ಯಂತ ದೊಡ್ಡ ಸವಾಲು. ಇದನ್ನು ಪ್ರೀತಿಯಿಂದ ಒಪ್ಪಿಕೊಂಡಿರುವ ಪೂಜಾ ರಘುನಂದನ್ ತಾಯಿಯಾಗುವುದೆಂದರೆ…ಎನ್ನುತ್ತಾ ರಂಗಕ್ಕೆ ಬರುತ್ತಿದ್ದಾರೆ. ಇವರಿಗೆ ಬೆಂಬಲವಾಗಿ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ನಿಂತಿದ್ದಾರೆ. ಪೂಜಾ ಪತಿ ರಘುನಂದನ್ ಹಾಗೂ ಕುಟುಂಬಸ್ಥರು ಇದರ ಜೊತೆಗೆ ನಿಂತಿದ್ದಾರೆ. ಹಾಸನದ ರಂಗಹೃದಯ ತಂಡದ ಪ್ರಸ್ತುತಿ ಇದಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀವಿದ್ಯಾ ಫೌಂಡೇಷನ್ ಇವರೊಂದಿಗೆ ಕೈಜೋಡಿಸಿದ್ದಾರೆ.

ಮಾತೃಹೃದಯಿ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್
ಸ್ವತಃ ಏಕವ್ಯಕ್ತಿ ರಂಗಪ್ರಯೋಗದಲ್ಲಿ ಅಭಿನಯಿಸಿ ರಂಗಾಭಿರುಚಿಕರಲ್ಲಿ ಮನೆಮಾಡಿರುವ ಕೃಷ್ಣಮೂರ್ತಿ ಕವತ್ತಾರ್ ಸದಾ ಕ್ರಿಯಾಶೀಲ ವ್ಯಕ್ತಿ. ಶಿಸ್ತುಬದ್ದ ನಿರ್ದೇಶನಕ್ಕೆ ಹೆಸರು ಮಾಡಿದ್ದಾರೆ. ಶಿಲೆಯೂ ಕಲೆಯಾಗಬಲ್ಲ ಕೈಗುಣ ಇವರದ್ದು. ಈ ಪ್ರಯೋಗದಲ್ಲಂತೂ ಪೂಜಾ ರಘುನಂದನ್ ಅವರ ಜೀವನದ ಕಥನವನ್ನು ಸ್ವತಃ ಮನದಿಂದ ಅನುಭವಿಸುತ್ತಾ, ಪ್ರಯೋಗದ ಎಲ್ಲಾ ಭಾವಗಳನ್ನೂ ಪ್ರೀತಿಯಿಂದ ಕಟ್ಟಿಕೊಟ್ಟಿದ್ದಾರೆ. ವಿಭಿನ್ನ ರಂಗತಂತ್ರಗಳನ್ನು ಬಳಸಿ ನಾಟಕ ಕಟ್ಟುವಲ್ಲಿ ಸಿದ್ಧಹಸ್ತರಾದ ಕೃಷ್ಣಮೂರ್ತಿ ಕವತ್ತಾರ್ ರಂಗರೂಪ-ನಿರ್ದೇಶನ-ಸಂಗೀತದ ಏಕವ್ಯಕ್ತಿ ರಂಗಪ್ರಯೋಗ ತಾಯಿಯಾಗುವುದೆಂದರೆ…

ತಾಯಿಯಾಗುವುದೆಂದರೆ ಅದು ದೈಹಿಕ ಪ್ರಕ್ರಿಯೆಗಿಂತ ಮನೋನ್ನತಿಯ ಹಂತ ಎಂಬ ತಾತ್ವಿಕ ದರ್ಶನ ಇದರಲ್ಲಿದೆ. ತಾಯಿಯಾಗುವ ಕ್ಷಣ ಹಂಬಲಿಸಿ, ಕಣ್ಣೀರ್ಗರೆದ ಅಸಂಖ್ಯಾತ ಸ್ತ್ರೀಹೃದಯಗಳ ಮನದ ಮಾತಿದು. ಪಿಸುಮಾತುಗಳಲ್ಲೇ ನಡೆಯುತ್ತಿದ್ದ ಈ ವಿಚಾರವೀಗ ಅಂತಲ್ಲ, ಅಂತಿಲ್ಲ ಎಂಬುದನ್ನು ಜಗಜ್ಜಾಹೀರಾಗಿ ಗಟ್ಟಿಧ್ವನಿಯಲ್ಲಿ ಈ ಹೆಣ್ಣುಮಗಳು ಹೇಳಲು ಹೊರಟಿದ್ದಾರೆ. ಅದನ್ನು ಅಷ್ಟೇ ಸಂಭ್ರಮದಿಂದ ಹೃನ್ಮನ ತುಂಬಿಸಿಕೊಳ್ಳುವ ಪ್ರೇಕ್ಷಕರಿಗಾಗಿ ಕಾಯುತ್ತಿದ್ದಾರೆ.
ಕಂಡ ದೇವರಿಗೆಲ್ಲಾ ಹೊತ್ತ ಹರಕೆ, ಬಲ್ಲವರ ಹಾರೈಕೆ, ಸಾಮಾಜಿಕ, ಕಾನೂನಾತ್ಮಕ ಸವಾಲುಗಳು,ನೋವು- ನಲಿವುಗಳು, ಕಣ್ಣೀರು, ಆನಂದಾಶ್ರು ಹೀಗೆ ಬದುಕಿನ ಎಲ್ಲ ರಸಭಾವಗಳ ಹೂರಣವೇ ರಂಗದಲ್ಲಿ ತೆರೆದುಕೊಳ್ಳಲಿದೆ. ಧೈರ್ಯದಿಂದ ತನ್ನದೇ ಬದುಕಿನ ಕಥೆಯನ್ನು ರಂಗದಲ್ಲಿ ಕಟ್ಟಿಕೊಡುತ್ತಿರುವ ಪೂಜಾ ರಘುನಂದನ್ ಅವರಿಗೆ ಅಂತೆಯೇ ಮಾತೃಹೃದಯಿಯಾಗಿ ಒಂದರ್ಥದಲ್ಲಿ ತಾನೇ ತಾಯಿಯಾಗಿ ರಂಗರೂಪ, ಸಂಗೀತದೊಂದಿಗೆ ರಂಗನಿರ್ದೇಶನ ಮಾಡಿದ್ದಾರೆ ಹಿರಿಯ ರಂಗನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್.

ಅಮ್ಮನ ಅಮೃತಧಾರೆಯಲ್ಲಿ ಮಿಂದಿರುವ ಸಮಸ್ತ ಜೀವಸಂಕುಲವೇ ನೋಡಬೇಕಾದ ಏಕವ್ಯಕ್ತಿ ರಂಗಪ್ರಯೋಗ ತಾಯಿಯಾಗುವುದೆಂದರೆ…
ಹೀಗಾಗಿ ನೋಡಲೇಬೇಕು:

  • ಅಮ್ಮನನ್ನು ಆರಾಧಿಸುವ ಮನಸುಗಳನ್ನು ಮುದಗೊಳಿಸುವ ರಂಗಚಿತ್ರಣ
  • ಸ್ತ್ರೀಯರನ್ನು ಗೌರವಿಸುವ ಪ್ರತಿಯೊಬ್ಬರಿಗೂ ಮನಮುಟ್ಟುವ ಕಥಾನಕ
  • ಅಭಿನಯ ಹಾಗೂ ಸಂಗೀತವನ್ನು ಮೇಳೈಸಿದ ರಂಗಪ್ರಯೋಗ
  • ಹಾಸನದ ಮೊದಲ ಮಹಿಳಾ ಏಕವ್ಯಕ್ತಿ ರಂಗಪ್ರಯೋಗ

ಪ್ರಥಮ ಪ್ರಯೋಗ ನೋಡಲು ಮರೆಯದಿರಿ
ರಂಗಹೃದಯ ತಂಡದ ಪ್ರಸ್ತುತಿಯ ಏಕವ್ಯಕ್ತಿ ರಂಗಪ್ರಯೋಗ
ತಾಯಿಯಾಗುವುದೆಂದರೆ…
ರಂಗದಲ್ಲಿ ಪೂಜಾ ರಘುನಂದನ್
ರಂಗರೂಪ-ನಿರ್ದೇಶನ-ಸಂಗೀತ : ಕೃಷ್ಣಮೂರ್ತಿ ಕವತ್ತಾರ್
ಜುಲೈ 25ರ ಸೋಮವಾರ ಸಂಜೆ 6:30ಕ್ಕೆ ಹಾಸನದ ಹಾಸನಾಂಬಾ ಕಲಾಕ್ಷೇತ್ರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Astrology in KannadaKannadaNewsKannadaNewsLiveKannadaNewsOnlineKannadaWebsiteLatest News KannadaLocal NewsMalnad NewsNewsinKannadaNewsKannadaShimogaShivamoggaShivamogga Newsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಅತ್ಯಾಧುನಿಕ ಆಟೋಲೋಗಸ್‌ ಕಾರ್ಟಿಲೇಜ್‌ ಕಸಿ ಶಸ್ತ್ರಚಿಕಿತ್ಸೆ: ಕ್ಷೀಪ್ರವಾಗಿ ಚೇತರಿಸಿಕೊಂಡ ಕ್ರೀಡಾಪಟು

Next Post

ಇಂದಿರಾನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರಮಾದಾನ ಕಾರ್ಯಕ್ರಮ

kalpa News

kalpa News

Next Post
ಇಂದಿರಾನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರಮಾದಾನ ಕಾರ್ಯಕ್ರಮ

ಇಂದಿರಾನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರಮಾದಾನ ಕಾರ್ಯಕ್ರಮ

Leave a Reply Cancel reply

Your email address will not be published. Required fields are marked *

No Result
View All Result
MEIL Completes Historic Largest Concrete Pour for PHWR at Kaiga
English Articles

MEIL Completes Historic Largest Concrete Pour for PHWR at Kaiga

by kalpa News
July 6, 2026
0

Kalpa Media House  |  Karwar  | Megha Engineering & Infrastructures Ltd. (MEIL) has successfully completed one of the largest monolithic...

Read moreDetails
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL