ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಯಾವುದೇ ಪ್ರತಿಫಲಗಳ ಆಕಾಂಕ್ಷೆ ಇಲ್ಲದೆ ಸಮಾಜಸೇವೆ ಮೂಲಕ ತೊಡಗಿಸಿಕೊಂಡ ಸದ್ದು ಮಾಡದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿರುವ ಮಾನವ ಹಕ್ಕುಗಳ ಕಮಿಟಿಯ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ ಎಂದು ಮೆಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶ್ರೀಧರ್ ಹೇಳಿದರು.
ಅವರು ಶಿವಮೊಗ್ಗ ಕಾಶಿಪುರದಲ್ಲಿರುವ ಮಾನವ ಹಕ್ಕುಗಳ ಕಮಿಟಿಯ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸದ್ದಿಲ್ಲದ ಸಾಧಕರು ಹಾಗೂ ಕನ್ನಡದ ಬಡ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅತ್ಯಂತ ಅರ್ಥಪೂರ್ಣವಾದ ಹಾಗೂ ಶ್ಲಾಘನೀಯವಾದ ಕಾರ್ಯಕ್ರಮ ಇದಾಗಿದೆ. ಕೊರೋನಾದ ಇಂದಿನ ದಿನಮಾನಗಳಲ್ಲಿ ವೈದ್ಯ ವ್ಯವಸ್ಥೆಯ ನಡುವೆ ಶವಾಗಾರದಲ್ಲಿ ಕಾ ಕಾರ್ಯನಿರ್ವಹಿಸುವ ಬಸವರಾಜ್, ಕುಮಾರಿ ರಂಜಿತ, ರೋಟರಿ ಚಿತಾಗಾರದ ಶ್ರೀಮತಿ ಸವಿತಾ ಹಾಗೂ ಹಿರಿಯ ಪತ್ರಕರ್ತರಾದ ಜೇವಿಯರ್ ಡೇವಿಡ್ ಅವರನ್ನು ಗುರುತಿಸಿ ಗೌರವಿಸುತ್ತಿರುವುದು ಸಂತಸದ ವಿಷಯ ಎಂದರು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ರಾಜ್ಯದಲ್ಲಿ ಒಂದು ಮಾದರಿ ಆಸ್ಪತ್ರೆಯಾಗಿ ರೂಪುಗೊಂಡಿದೆ. ಅಲ್ಲಿನ ನಮ್ಮೆಲ್ಲ ಸಿಬ್ಬಂದಿಗಳು, ವೈದ್ಯ ಸಮೂಹ ಜನರ ಆರೋಗ್ಯ ರಕ್ಷಣೆಗೆ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆಸ್ಪತ್ರೆಯ ಸಮಗ್ರ ಸುಧಾರಣೆಯತ್ತ ಗಮನಹರಿಸಿರುವುದು ರಾಜ್ಯದಲ್ಲಿ ಈ ವಿಶೇಷ ಗೌರವವನ್ನು ತಂದುಕೊಟ್ಟಿದೆ ಎಂದು ಹೇಳಿದರು.
ಸದ್ದಿಲ್ಲದ ಸಾಧಕರನ್ನು ಸನ್ಮಾನಿಸಿದ ಪೊಲೀಸ್ ಸರ್ಕಲ್ ಇನ್ಸ್ ಸ್ಪೆಕ್ಟರ್ ಆರ್. ವಸಂತಕುಮಾರ್ ಅವರು ಮಾತನಾಡುತ್ತಾ ಯಾವುದೇ ಸಂಘ ಸಂಸ್ಥೆಗಳು ಬಡವರ ನೊಂದವರ ಸ್ಪಂದಿಸಬೇಕು. ಆಗಮಾತ್ರ ಸಂಘ-ಸಂಸ್ಥೆಗಳು ಹಾಗೂ ಅದರ ಮುಖವಾಣಿಯಾದ ನಾಯಕರುಗಳು ಬೆಳೆಯಲು ಗುರುತಿಸಿಕೊಳ್ಳಲು ಸಾಧ್ಯ. ಮಾನವ ಹಕ್ಕುಗಳ ಕಮಿಟಿ ಇಂತಹ ಕಾರ್ಯ ಕೈಗೊಂಡಿರುವುದು ವಿಶ್ವಾಸ ಹಾಗೂ ನಂಬಿಕೆಯನ್ನು ಹೆಚ್ಚಿಸುವಂತೆ ಮಾಡಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಕನ್ನಡ ಮಾತೆಗೆ ಪುಷ್ಪಗುಚ್ಚವನ್ನಿರಿಸುವ ಮೂಲಕ ರಾಜ್ಯೋತ್ಸವಕ್ಕೆ ಚಾಲನೆ ನೀಡಿದ ಕಮಿಟಿಯ ಸಂಸ್ಥಾಪಕ ಅಧ್ಯಕ್ಷ ಬೈರೇಗೌಡ ಅವರು ಮಾತನಾಡುತ್ತಾ ರಾಜ್ಯಾದ್ಯಂತ ಬಹಿತೇಕ ಜಿಲ್ಲೆಗಳಲ್ಲಿ ಕಮಿಟಿಯ ಶಾಖೆಗಳನ್ನು ಕಟ್ಟಲಾಗಿದೆ. ಶಿವಮೊಗ್ಗ ಕಮಿಟಿ ಹೊಸತನದ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಗೌರವಾನ್ವಿತ ವಾಗಿದೆ ಎಂದರು.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಶವಾಗಾರ ದಲ್ಲಿರುವ ಶವಾಗಾರ ಸಹಾಯಕ ಬಸವರಾಜ್, ಓದುತ್ತಲೇ ಸುಬ್ಬಯ್ಯ ಆಸ್ಪತ್ರೆಯ ಶವಾಗಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರಿ ರಂಜಿತಾ, ರೋಟರಿ ಚಿತಾಗಾರ ದಿವಂಗತ ಪಾಪನಾಯ್ಕರ ಪತ್ನಿ ಶ್ರೀಮತಿ ಸವಿತಾ ಹಾಗೂ ನಿವೃತ್ತ ಪತ್ರಕರ್ತ ಜೇವಿಯರ್ ಡೇವಿಡ್, ಜಿಲ್ಲೆಯ ಹನ್ನೊಂದು ಸರ್ಕಾರಿ ಶಾಲೆಗಳ ಬಡ ಹಾಗೂ ಪ್ರತಿಭಾನ್ವಿತ ಎಸ್ ಎಸ್ ಎಲ್ ಸಿ ಮಕ್ಕಳಿಗೆ ನಗದು, ಬಟ್ಟೆ ನೀಡುವ ಮೂಲಕ ಗೌರವಿಸಿತು.
ಇದೇ ಸಂದರ್ಭದಲ್ಲಿ ರಪ್ತಾರ್ ಎಲೆಕ್ಟ್ರಿಕಲ್ ಬೈಕ್ ನ ಡಿಸ್ಟಿಬ್ಯೂಟರ್ ದೀರಜ್ ಜೈನ್ ಅವರು ಮೂವರು ಸದ್ದಿಲ್ಲದ ಸಾಧಕರಿಗೆ ನಗದಿನ ನೆರವು ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಮಿಟಿಯ ರಾಜ್ಯ ಮಾಧ್ಯಮ ಸಲಹೆಗಾರ ಎಸ್ ಕೆ ಗಜೇಂದ್ರ ಸ್ವಾಮಿ ಅವರು ಮಾನವ ಹಕ್ಕುಗಳ ಸಮಿತಿ ಸಹಾಯ ನೀಡುವಾಗ ಶಕ್ತಿಯನ್ನು ಬಳಸಿಕೊಳ್ಳುತ್ತಿದೆ ಕಿರಿಕಿರಿ ಯಾವುದೇ ಆತಂಕ ಇಲ್ಲದೆ ನೀರು ಬಿಸ್ಕೆಟ್ ಹಾಗೂ ಕರೋನಾ ಪೀಡಿತರ ಮನೆಗೆ ಆಹಾರಧಾನ್ಯಗಳನ್ನು ಪೂರೈಸುವ ಕಾರ್ಯ ಮಾಡಿತ್ತು ಈಗಲೂ ಹೊಸತನದ ಕಾರ್ಯಕ್ರಮಗಳ ಮೂಲಕ ಜನಸೇವೆಯ ಮುಖ್ಯ ಉದ್ದೇಶವನ್ನು ಹೊಂದಿದೆ ಎಂದರು.
ಪತ್ರಕರ್ತ ಹಾಗೂ ಸಾಹಿತಿ ಆರುಂಡಿ ಶ್ರೀನಿವಾಸಮೂರ್ತಿ ಅವರು ಕನ್ನಡ ನುಡಿ ನಮನ ಸಲ್ಲಿಸಿದರು
ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷ ನಾಗರಾಜ್ ರಾಜ್ಯಾಧ್ಯಕ್ಷ ಕೆ ನಾಗರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿತಾ ಡಿ, ಜಿಲ್ಲಾಧ್ಯಕ್ಷ ದಯಾನಂದ ಗೌಡ, ಜಿಲ್ಲಾ ಗೌರವಾಧ್ಯಕ್ಷರಾದ ರಮೇಶ್ ಎಸ್., ಡಿ.ಬಿ. ವಿಜಯಕುಮಾರ್, ರಾಜ್ಯ ಕಮಿಟಿಯ ನಿರಂಜನಮೂರ್ತಿ,ಮಹಿಳಾ ಘಟಕದ ಅಧ್ಯಕ್ಷೆ ಜಯಮಾಲಶೆಟ್ಟಿ ಹಾಗೂ ಇತರರಿದ್ದರು.
ಕಾರ್ಯಕ್ರಮ ಆರಂಭಕ್ಕೂ ಪೂರ್ವದಲ್ಲಿ ಶಿವಮೊಗ್ಗ ಸ್ಟೈಲ್ ಡ್ಯಾನ್ಸ್ ಗ್ರೂಪ್ ವತಿಯಿಂದ ಕನ್ನಡ ಗೀತೆಗೆ ನೃತ್ಯ ಪ್ರದರ್ಶನ ನಡೆಯಿತು. ಸ್ಕಂದ ಮಾಧುರ್ಯ ಸಂಗೀತ ಶಾಲೆಯ ಮಕ್ಕಳಿಂದ ನಾಡಗೀತೆ ಹಾಗೂ ರೈತ ಗೀತೆ ಮೂಡಿಬಂದಿತು.
ಕಮಿಟಿಯ ಪ್ರಧಾನ ಕಾರ್ಯದರ್ಶಿ ಶಾರದಾ ಶೇಷಗಿರಿ ಗೌಡ, ವಿನೋದ್ ಅವರು ಸದ್ದಿಲ್ಲದ ಸಾಧಕರ ಹಾಗೂ ಸನ್ಮಾನಿತರ ಪರಿಚಯ ಮಾಡಿದರು. ಕಾರ್ಯದರ್ಶಿ ಸುಜಾತ ಸ್ವಾಗತಿಸಿದರು. ಕಾರ್ಯದರ್ಶಿ ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಉಷಾ ಉತ್ತಪ್ಪ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post