ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿಯ ಶುದ್ಧೀಕರಣಕ್ಕಾಗಿ ಅಪ್ಪ-ಮಕ್ಕಳ ಕೈಯಿಂದ ಪಕ್ಷವನ್ನು ಬಿಡಿಸುವ ಹಿನ್ನಲೆಯಲ್ಲಿ ಇವತ್ತು ದೆಹಲಿಗೆ ಹೊರಟಿರುವೆ. ಗೊಂದಲದಲ್ಲಿರುವವರಿಗೆ ನಾಳೆ ಬೆಳಿಗ್ಗೆ ಎಲ್ಲಾ ಗೊತ್ತಾಗುತ್ತದೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿಯೆಂದು ಬಿಂಬಿಸಿಕೊಂಡಿರುವ ಕೆ.ಎಸ್. ಈಶ್ವರಪ್ಪ #K S Eshwarappa ಮತ್ತೊಮ್ಮೆ ಪುನರುಚ್ಚರಿಸಿದರು.
ಅವರು ಅಮಿತ್ ಶಾ #Amith Shah ಅವರ ಕರೆಯ ಮೇರೆಗೆ ದೆಹಲಿಗೆ ಪಯಾಣ ಬೆಳೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಸಂಜೆ 7:20ಕ್ಕೆ ದೆಹಲಿಯಲ್ಲಿ ಇರುತ್ತೇನೆ. ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿ ದೆಹಲಿಯಲ್ಲಿ ಅಮಿತ್ ಶಾ ಅವರ ಮನೆಯಲ್ಲಿ ಇಂದು ರಾತ್ರಿ 8 ಗಂಟೆಗೆ ಭೇಟಿಯಾಗುವಂತೆ ತಿಳಿಸಿದ್ದಾರೆ. ನಾನು ಮತ್ತು ಪಾಲಿಕೆ ಮಾಜಿ ಸದಸ್ಯ ವಿಶ್ವಾಸ್ ಅವರು ದೆಹಲಿಗೆ ತೆಳಲಿದ್ದೇವೆ ಎಂದರು.
ನಾನು ಈಗಾಗಲೇ ಪಕ್ಷದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಅವರು ನನಗೆ ಮನವೊಲಿಸುವ ಪ್ರಶ್ನೆ ಬರುವುದಿಲ್ಲ. ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪಕ್ಷ ಶುದ್ಧೀಕರಣಕ್ಕಾಗಿ ನಾನು ನಿಂತಿರುವುದು. ಗೆದ್ದು ಬಂದು ಮತ್ತೆ ಗೆಲುವನ್ನು ಮೋದಿಗೆ ಸಮರ್ಪಿಸುತ್ತೇನೆ ಎಂದರು.
Also read: ಅವರಿಗೆ ಸುಳ್ಳು ಹೇಳಿ ಅಭ್ಯಾಸವಿದೆ, ಬೇಕಾದರೆ ಘಂಟೆ ಬಾರಿಸಬಹುದು: ಈಶ್ವರಪ್ಪ ಹೀಗೆ ಹೇಳಿದ್ದು ಯಾರಿಗೆ?
ನಾನೇ ಅಮಿತ್ ಶಾ ಅವರ ಮನವೊಲಿಸುತ್ತೇನೆ. ಈಶ್ವರಪ್ಪ ಬಂಡಾಯ ಶಿವಮೊಗ್ಗ ಕ್ಷೇತ್ರದಲ್ಲಿ ರಾಘವೇಂದ್ರ ಗೆಲುವಿಗೆ ಕಷ್ಟವಾಗುತ್ತದೆ ಎಂದು ಅಮಿತ್ ಶಾ ಬಳಿ ಹೇಳಿರಬಹುದು ಅದು ನನಗೆ ಗೊತ್ತಿಲ್ಲ. ಹಿರಿಯರು ಕರೆದಿದ್ದಾರೆ ಹೋಗುವುದು ನಮ್ಮ ಪದ್ಧತಿ. ಪ್ರತಾಪ್ ಸಿಂಹ. ಸಿಟಿ ರವಿ. ಯತ್ನಾಳ್. ಅನಂತ್ ಕುಮಾರ್ ಹೆಗಡೆ ಮೊದಲಾದ ಹಿಂದುತ್ವವಾದಿಗಳನ್ನು ಕಡೆಗಣಿಸಿದ್ದೇಕೆ? ಅವರೆಲ್ಲರೂ ಹಿಂದುತ್ವದ ಪರ ಹೋರಾಟ ಮಾಡಿರುವುದೇ ತಪ್ಪೇ ? ನನ್ನ ಸ್ಪರ್ಧೆಯಿಂದ ರಾಜ್ಯದ ಬೇರೆ ಕ್ಷೇತ್ರದಲ್ಲೂ ಪರಿಣಾಮ ಬೀರುತ್ತಾ ಇಲ್ಲವಾ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನನಗೆ ಮಾತ್ರ ಸ್ಪರ್ಧೆಯಿಂದ ಹಿಂದೆ ಸರಿಯಬೇಡಿ ಎಂದು ಪಕ್ಷದ ಹಾಗೂ ಸಂಘಟನೆ ಅನೇಕರು ತಿಳಿಸಿದ್ದು ನಾವು ನಿಮಗೆ ಬೆಂಬಲಿಸುತ್ತೇವೆ ಎಂದಿದ್ದಾರೆ, ಕಾರ್ಯಕರ್ತರ ಮನದಲ್ಲಿ ಇರುವ ಗೊಂದಲಕ್ಕೆ ಎಲ್ಲವೂ ನಾಳೆ ತೆರೆ ಬೀಳಲಿದೆ ನಾನು ಸ್ಪರ್ಧೆಗೆ ನಿಲ್ಲುವುದು ಖಚಿತ. ನಾನೇ ಅಮಿತ್ ಶಾ ಅವರ ಮನವೊಲಿಸಿ ಬರುತ್ತೇನೆ ಎಂದರು.
ಪಕ್ಷದ ಶುದ್ಧೀಕರಣಕ್ಕಾಗಿ ನಾನು ಕೈಗೊಂಡ ನಿರ್ಣಯವನ್ನು ಅವರೆಲ್ಲರೂ ಬೆಂಬಲಿಸಿದ್ದಾರೆ. ನಾನು ಅಭಿಪ್ರಾಯ ಸಂಗ್ರಹ ಸಭೆ ಬಂಜಾರ ಭವನದಲ್ಲಿ ಮಾಡಿದಾಗ ಅಭೂತಪೂರ್ವ ಬೆಂಬಲ ಸಿಕ್ಕಿತ್ತು ಅದು ನೆನ್ನೆ ಶುಭಮಂಗಳದಲ್ಲಿ ನಡೆದ ಸಭೆಗೂ ಮುಂದುವರೆದಿತ್ತು, ಯಾವುದೇ ಕಾರ್ಯಕ್ರಮಗಳು ವಿಫಲವಾಗಿಲ್ಲ, ನಾನು ಹೋದ ಕಡೆ ಎಲ್ಲ ಸಾವಿರಾರು ಜನರು ಸೇರುತ್ತಿದ್ದಾರೆ. ಭಾರೀ ಬೆಂಬಲ ವ್ಯಕ್ತವಾಗಿದೆ. ಹೋದ ಕಡೆಯಲ್ಲಿ ಎಲ್ಲಾ ವರ್ಗದ ಜನ ದಲಿತರು ಹಿಂದುಳಿದವರು. ವೀರಶೈವ ಲಿಂಗಾಯಿತರು. ಮಠಾಧೀಶರು ಸೇರಿದಂತೆ ಎಲ್ಲಾ ವರ್ಗದ ಜನ ಬೆಂಬಲಿಸಿದ್ದಾರೆ ಎಂದರು.
ದೆಹಲಿಗೆ ತೆರಳುವ ಮುನ್ನಾವು ಪ್ರಚಾರ ಕಾರ್ಯ ನಡೆಸಿದ ಈಶ್ವರಪ್ಪನವರು ಇಂದು ತೇವರಚಟ್ನಹಳ್ಳಿಯಲ್ಲಿ ಪ್ರಚಾರ ಕಾರ್ಯ ಆರಂಭಿಸಿದರು. ವಿವಿಧ ಸಹಕಾರಿಗಳ ಮನೆಗಳಿಗೆ ತೆರಳಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಊರಿನ ಅನೇಕ ಹಿರಿಯರು ಈಶ್ವರಪ್ಪನವರನ್ನು ಮನೆಯೊಳಗೆ ಕರೆದು ಬೆಂಬಲ ನೀಡಿದರು. ಅಲ್ಲಿಯೂ ಕೂಡ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಲಿಂಗಾಯತ ಮುಖಂಡರಾದ ಮಹಾಲಿಂಗ ಶಾಸ್ತ್ರಿ, ಕೆ.ಈ.ಕಾಂತೇಶ್ ಉಪಸ್ಥಿತರಿದ್ದರು. ನಂತರ ಕೃಷಿಕ ಮಲ್ಲೇಶಪ್ಪ ರವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post