ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ | 
ನಮ್ಮ ಮನೆಯವರು ಎಸ್ಪಿಬಿ (SPB) ಅವರು ಕಾಲವಾದಾಗ ಹೇಳುತ್ತಿದ್ದ ಮಾತು ಈ ಭೂಮಿಯ ಮೇಲೆ ಒಂದಲ್ಲ ಒಂದೆಡೆ ಅವರ ಹಾಡುಗಳನ್ನು ನಾವು ಪ್ರತಿದಿನ ಕೇಳುತ್ತಲೇ ಇರುತ್ತೇವೆ. ಏಕೆಂದರೆ ಅಷ್ಟು ಹಾಡುಗಳನ್ನು ಕೊಟ್ಟ ಗಾಯಕ ಅವರು ಎ೦ದು. ಅಂತಹ ಹಾಡುಗಳಲ್ಲಿ ಸುಂದರವಾದ ಹಾಡುಗಳನ್ನು ಹೆಕ್ಕಿ ತೆಗೆಯುವುದು ಸವಾಲಿನ ಮಾತಾದರೂ ಹೊಸ ರೀತಿಯಲ್ಲಿ ಅದನ್ನು ಎದುರಿಸಿ ಗೆದ್ದವರು ಅದರ ಪರಿಕಲ್ಪನೆ ರೂವಾರಿಗಳಾದ ಶ್ರೀ ವಿನಯಣ್ಣ.
ಆಷಾಢದ (Ashadha) ಈ ಹೊತ್ತು ಮಳೆ ಧೋ ಎಂದು ಸುರಿಯಬೇಕಾಗಿತ್ತು. ಆದರೆ ಅದಾಗಲಿಲ್ಲ ಸಂಗೀತದ ಮಳೆಯಂತೂ ಜೋರಾಗಿಯೇ ಸುರಿದು ರಸಗಂಗೆ ಹರಿದು ಬಂದು ಮನದಂಗಳವನ್ನು ಹಸಿರಾಗಿಸಿದಂತಾಯಿತು. ಅನೇಕ ಸಹೃದಯ ಪ್ರೇಕ್ಷಕರ ಬದುಕಿನ ಸುಂದರ ಕ್ಷಣಗಳನ್ನು ಮತ್ತೆ ನೆನಪಿಸಿದ ಗಾನ ಸಂಜೆ ಇದು.
ಬರದ ಈ ಕಾಲದಲ್ಲಿ ಮತ್ತೆ ಬಾರದ ಆ ಕಾಲದ ಹಾಡಿನ ಅಮೃತ ಸಿಂಚನ ತಂಪೆರೆಯಿತು. ಅತಿಶಯೋಕ್ತಿ ಎನಿಸದ ಈ ಮಾತುಗಳು ಕಾರ್ಯಕ್ರಮದ ಆಯೋಜಕರಿಂದ ಮೊದಲಾಗಿ, ಪರಿಕಲ್ಪನೆ ರೂವಾರಿಗಳು, ಜೊತೆಯಾದ ಸಂಗೀತಗಾರರೆಲ್ಲರಿಗೂ ಕೃತಜ್ಞತಾ ಸಮರ್ಪಣೆ ಮಾಡದೇ ಹೋದಲ್ಲಿ ನಿಜಕ್ಕೂ ತಪ್ಪಾಗುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಹಣ ಕೊಟ್ಟು ಹೋಗಿ ಆಸ್ವಾದಿಸುವ ಇಂತಹ ಕಾರ್ಯಕ್ರಮಗಳು ನಮ್ಮೂರಿನಲ್ಲಿ ಉಚಿತವಾಗಿ ನಮಗೆ ನೀಡಿದವರಿಗೆ ಧನ್ಯವಾದ ಸಮರ್ಪಿಸಲೇಬೇಕೆಂದು ಬರೆದ ಲೇಖನವಿದು.
ಸರಿಯಾಗಿ 5:40ಕ್ಕೆ ಕಾರ್ಯಕ್ರಮ ಆರಂಭವಾಗುವ ವೇಳೆಗೆ ರಂಗಮಂದಿರ ಭರ್ತಿಯಾಗುವ ಹಂತಕ್ಕೆ ತಲುಪುತ್ತಾ ಬಂದಿತ್ತು. ಇನ್ನು 6:45 ಆಗುವ ವೇಳೆಗೆ ಎಲ್ಲರಿಗೂ ಆಸನದ ವ್ಯವಸ್ಥೆ ಮಾಡಬೇಕಾಯಿತು ರಂಗಮಂದಿರ ತುಂಬಿ ರಂಗೇರಿತ್ತು. ಗಾನಗಂಧರ್ವನ ನೆನಪಿನಲ್ಲಿ ಮೂಡಿದ ಮತ್ತೆ ಹಾಡಿತು ಕೋಗಿಲೆ ರಸದೌತಣವೇ ಆಯಿತು.
ಒಂದು ಕಾರ್ಯಕ್ರಮ ಎಂದರೆ ಅದು ಹೀಗೆ ಅಚ್ಚುಕಟ್ಟಾಗಿ ಆಗಬೇಕೆಂದು ವಿನಯಣ್ಣನ ಕಲ್ಪನೆ ಅದಕ್ಕೆ ಸರಿಯಾಗಿ ಸಾತ್ ನೀಡುವವರು ಪಂಚತಾರಾ ಐಸ್ ಕ್ರೀಮ್ ನ ಶ್ರೀ ಪ್ರಕಾಶ್ ಪ್ರಭು ದಂಪತಿಗಳು. ರಸಭಂಗವಾಗುವ ಹಾಗೆ ಸಭಾ ಕಾರ್ಯಕ್ರಮಗಳಿಲ್ಲ, ಉದ್ಘಾಟನೆ ಸನ್ಮಾನ ಇತ್ಯಾದಿಗಳಿದ್ದರೂ ಅದು ಸಭಾ ಮರ್ಯಾದೆ ಎಂಬಂತೆ ಚಿಕ್ಕದಾಗಿ ಚೊಕ್ಕವಾಗಿ ಆಗುತ್ತದೆ. ಮುಖ್ಯ ಅತಿಥಿಗಳಾಗಿ ಆಗಮಿಸಿದವರಂತೂ ಶ್ರೀಯುತ ಅರುಣ್ ರವರೇ ಆಗಲಿ ಶ್ರೀಯುತ ಕಾಂತೇಶ್ ರವರೇ ಆಗಲಿ ಮಾತಾಡಿದ್ದು ಹೇಗಿತ್ತೆಂದರೆ ಇಲ್ಲಿ ಕಡಿಮೆ ಮಾತನಾಡಿದವರಿಗೇ ಬಹುಮಾನದ ಸ್ಪರ್ಧೆಗಿಳಿದಂತಿತ್ತು. ಹಾಗಾಗಿ ತುಂಬಾ ತುಂಬಾ ಹಿತವೆನಿಸುವ ವೇದಿಕೆ ಕಾರ್ಯಕ್ರಮವಾಗಿತ್ತು.
ಮುಖ್ಯ ಕಾರ್ಯಕ್ರಮದ ವಿಷಯಕ್ಕೆ ಬಂದರೆ ಮಲೆನಾಡಿನ ಕೋಗಿಲೆಗಳು ಗಾನ ಗಂಧರ್ವ ಸರಸ್ವತಿ ಪುತ್ರನನ್ನು ಚಿರಸ್ಥಾಯಿಯಾಗಿಸಿದವು. ಶಾರದೇ ದಯೆ ತೋರದೇ ಎಂಬಲ್ಲಿಂದ ಆರಂಭವಾಗಿ ಸಂಗೀತವೇ ನನ್ನ ಉಸಿರು ಎಂಬಲ್ಲಿಗೆ ಬರೋಬ್ಬರಿ 30 ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ಅದು ಹೇಗೆಂದರೆ ಎಸ್ಪಿಬಿ ಅವರ ವಿಶೇಷ ಮತ್ತು ವೈಶಿಷ್ಟ್ಯಗಳನ್ನು ತಿಳಿಸುವ ಹಾಡುಗಳು. ಒಂದು ಹೂವಿನ ಬೊಕ್ಕೆಯಲ್ಲಿನ ವಿವಿಧ ರೀತಿಯ ಹೂಗಳಿರುವಂತೆ ಪ್ರತಿಯೊಂದು ಸಹ ಹೊಸ ರೀತಿಯದು, ಅಷ್ಟಾಗಿ ಸಾಮಾನ್ಯವಾಗಿ ಆರ್ಕೆಸ್ಟ್ರಾಗಳಲ್ಲಿ ಹಾಡಲು ಧೈರ್ಯ ಮಾಡದ ಹಾಡುಗಳನ್ನೇ ಸವಾಲಿನಂತೆ ಹಾಡಿ ಒಂದು ಸುಂದರ ಹಾಡಿನ ಗುಚ್ಚವನ್ನ ಎಸ್ಪಿಬಿಗೆ ಸಮರ್ಪಿಸಿದ ಭಾವ ಮೂಡಿತು.
SPB ಹಾಡುಗಳನ್ನು ಹೆಕ್ಕಿ ತೆಗೆಯುವುದು ಸವಾಲಿನ ಮಾತು
ನಮ್ಮ ಮನೆಯವರು ಎಸ್ಪಿಬಿ ಅವರು ಕಾಲವಾದಾಗ ಹೇಳುತ್ತಿದ್ದ ಮಾತು ಈ ಭೂಮಿಯ ಮೇಲೆ ಒಂದಲ್ಲ ಒಂದೆಡೆ ಅವರ ಹಾಡುಗಳನ್ನು ನಾವು ಪ್ರತಿದಿನ ಕೇಳುತ್ತಲೇ ಇರುತ್ತೇವೆ. ಏಕೆಂದರೆ ಅಷ್ಟು ಹಾಡುಗಳನ್ನು ಕೊಟ್ಟ ಗಾಯಕ ಅವರು ಎ೦ದು. ಅಂತಹ ಹಾಡುಗಳಲ್ಲಿ ಸುಂದರವಾದ ಹಾಡುಗಳನ್ನು ಹೆಕ್ಕಿ ತೆಗೆಯುವುದು ಸವಾಲಿನ ಮಾತಾದರೂ ಹೊಸ ರೀತಿಯಲ್ಲಿ ಅದನ್ನು ಎದುರಿಸಿ ಗೆದ್ದವರು ಅದರ ಪರಿಕಲ್ಪನೆ ರೂವಾರಿಗಳಾದ ಶ್ರೀ ವಿನಯಣ್ಣ. ಪ್ರತಿನಿತ್ಯ ರೇಡಿಯೋ ಆನ್ ಮಾಡಿದಾಗಲೆಲ್ಲ ಎಸ್ಪಿಬಿ ಹಾಗೂ ಎಸ್. ಜಾನಕಿ ಅವರ ಹಾಡು ಕೇಳಿ ಬೆಳೆದವರಾದ ನಮಗೆ ಈ ಸಂಜೆ ರಸದೌತಣವೇ ಆಗಿತ್ತು.
ಎಸ್ಪಿಬಿ ಅವರ ವಿಶೇಷತೆಗಳಲ್ಲಿ ಒಮ್ಮೆ ಪ್ರಸಿದ್ಧವಾದ ಭಾವಗೀತೆಗೆ ಮತ್ತೆ ದನಿಯಾಗಿ ನಮ್ಮೆದೆಗೆ ಇಳಿದ ಹಾಡಾದ ನಿನ್ನ ಪ್ರೇಮದ ಪರಿಯ… ಗಾಯಕ ನೆಲ್ಲಿನ ನಟನನ್ನು ತೋರಿಸಿದ ಕಾಮಿಕ್ ಗೀತೆಯಾದ ತಾಳಿ ಕಟ್ಟುವ ಶುಭ ವೇಳೆ… ಚೆನ್ನಾಗಿ ಹಾಡುವ ಹಾಡುಗಾರನೂ ಒಬ್ಬ ಹಾಡಲು ಬಾರದ ಹಾಡುಗಾರನಂತೆ ಹಾಡಿದ ತೆಲುಗಿನ ಸ್ವಾತಿಮುತ್ಯಂ ನ ಸುವ್ವಿ ಸುವ್ವಿ… ಶ್ರೀನಾಥ್’ಗಾಗಿ ಹಾಡಿದ ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ…. ಮನುಷ್ಯರ ಧ್ವನಿಗಳಲ್ಲಿ ಸಂಗೀತದ ನೋಟ್ ಬರೆಯುವ ಅಕಪೆಲ್ಲ ಶೈಲಿಯ ಕೇಳದೆ ನಿಮಗೀಗ…. ತಮಿಳಿನ ಬ್ರೆಥ್ಲೆಸ್ ಹಾಡಾದಂತಹ ಮಣ್ಣಿನಿಂದ್ರ ಕಾದಲ್… ಎಸ್ಪಿಬಿ ತನ್ನ ಹೆಂಡತಿಗಾಗಿಯೇ ಹಾಡಿದ ಹಾಗೂ ತೆರೆಯ ಮೇಲೆ ವಿಷ್ಣು ದಂಪತಿಗಳಿರುವ ಚೆಲುವೆಯ ಅಂದದ ಮೊಗಕೆ…. ಎ.ಆರ್. ರೆಹಮಾನ್ ಅಂತಹ ಆಗ ತಾನೇ ಉದಯಿಸಿದ ಸಂಗೀತಗಾರನ ಹಾಡಿಗೂ ದನಿಯಾದ ರೋಜಾ ಜಾನೆಮನ್…. ಇವತ್ತಿನ ಜೆನ್ ಜೀಯು ಕೇಳಿ ಖುಷಿ ಪಡುವ ನಲಿವ ಗುಲಾಬಿ ಹೂವೇ… ಶಾಸ್ತ್ರೀಯವಾಗಿ ಸಂಗೀತ ಕಲಿಯದಿದ್ದರೂ ಪ್ರಯತ್ನದಿಂದ ಎಲ್ಲವೂ ಸಾಧ್ಯ ಎಂದು ತೋರಿಸಿದ ಶಂಕರಾಭರಣಂ ಹಾಡು, ವರ್ಸಟೈಲ್ ಸಿಂಗರ್ ಎಂದು ತೋರಿಸಿದ ತರೀಕೆರೆ ಏರಿ ಮೇಲೆ…. ವಾಣಿ ಜಯರಾಮ್ ಜೊತೆ ಹಾಡಿದ ನನ್ನದೇ ವೀಣೆಯು ಮಿಡಿಯುತಿದೆ… ಹಂಸಲೇಖ ರವಿಚಂದ್ರನ್ ಕಾಂಬಿನೇಷನ್ ಗೀತೆಯಾದ ಸಂಗೀತವೇ ನನ್ನ ಉಸಿರು… ಹೀಗೆ ಒಂದಕ್ಕಿಂತ ಒಂದು ವಿಶೇಷವಾದ ಹಾಡುಗಳಾಗಿದ್ದವು. ಈ ಎಲ್ಲಾ ಹಾಡುಗಳು ಎಸ್ಪಿಬಿ ಅನ್ನು ಸಮಗ್ರವಾಗಿ ಕಟ್ಟಿಕೊಟ್ಟವು.
ವಿನಯಣ್ಣ ಪ್ರತಿ ಬಾರಿ ಇಂತಹ ಕಾರ್ಯಕ್ರಮ ಮಾಡಿದಾಗಲೂ ಕಳಚಿದ ಶಿವಮೊಗ್ಗದ ಕೊಂಡಿಯನ್ನು ಮತ್ತೆ ತರುವ ಪ್ರಯತ್ನ ಮಾಡುತ್ತಾರೆ. ಅದರಂತೆ ಅಮಿತ್ ಅವರನ್ನು ಪರಿಚಯಿಸಿದರೆ, ಶ್ರೀಮತಿ ಕೆ ಸುರೇಖಾ ಅವರು ಎಸ್ ಜಾನಕಿಗೆ ನೀಡಿದ ಟ್ರಿಬ್ಯುಟ್ ಹಾಗೂ ಸುರೇಖಾ ಹೆಗಡೆಯವರು ಹಾಡಿದ ಈ ಭಾವಗೀತೆ, ತೇರೆ ಮೇರೆ ಬೀಚ್ ಮೇ… ನಿಜಕ್ಕೂ ಅವರಿಬ್ಬರಿಗೆ ನೀಡಿದ ಕ್ರಮವಾಗಿ “ಗಾನ ಸುರಭಿ” ಮತ್ತು “ಗಾನ ಮಾಧುರಿ” ಎಂಬ ಬಿರುದು ಸಾರ್ಥಕವಾದಂತಾಯಿತು.
Also read: Shivamogga | ಪ್ರತಿಭಟನೆ ಹೆಸರಿನಲ್ಲಿ ಅರಾಜಕತೆ | ವಿಜಯೇಂದ್ರ ಖಂಡನೆ
ಪಾರ್ಥ, ಪೃಥ್ವಿ, ವಿಶಾಖ್, ಕಾರ್ತಿಕ್ ಸಂಜನಾ ಇವರುಗಳ ಪ್ರಯತ್ನಕ್ಕೆ ಶಿವಮೊಗ್ಗದ ಜನತೆ ಬೆರಗಾಗಿ ಹೋದರು. ತಮ್ಮ ಕಳೆದ ದಿನಗಳ ಹಳೆಯ ನೆನಪುಗಳನ್ನ ಮನದಂಗಳಕ್ಕೆ ತಂದುಕೊಂಡು ತಂಗಾಳಿಯ ಭಾವ ಅನುಭವಿಸಿ ಪ್ರೇಕ್ಷಕರು ತೆರಳಿದ್ದಂತೂ ಸತ್ಯ. ಜೊತೆಯಲ್ಲಿ ಸಹಕರಿಸಿದ ವಾದ್ಯವರಿಂದ ಹಾಗೂ ಸೌಂಡ್ ಸಿಸ್ಟಮ್ ತಾಳಮೇಳ ಹೊಂದಿದ ಜೋಡಿಯಂತಿತ್ತು.
ಇದೆಲ್ಲಕ್ಕೂ ಕಾರಣರಾದ ದಿ. ಮಣೂರ್ ಗೋವಿಂದರಾಯ ಪ್ರಭು ಚಾರಿಟೇಬಲ್ ಟ್ರಸ್ಟ್ ನ ಶ್ರೀ ಪ್ರಕಾಶ್ ಪ್ರಭು ಹಾಗೂ ಶ್ರೀಮತಿ ರೀತಾ ಪ್ರಭು ದಂಪತಿಗಳು, ಅವರು ತಮ್ಮ ಪಂಚತಾರಾ ಹೋಟೆಲ್ ನಲ್ಲಿ ಕೊಡುವ ತಂಪಾದ ಐಸ್ ಕ್ರೀಮ್ ಸವಿದ ಅನುಭವವನ್ನು ನಮಗೆ ತರಿಸಿದರು. ಕಾರ್ಯಕ್ರಮ ಕೊನೆಯವರೆಗೂ ನೋಡಿ ಸವಿದ ಶಿವಮೊಗ್ಗ ನಗರದ ಜನತೆಯ ಪರವಾಗಿ ಅನಂತಾನಂತ ಧನ್ಯವಾದಗಳು. ಈ ಬಗೆಯ ಸದಭಿರುಚಿಯ ಕಾರ್ಯಕ್ರಮಗಳು ಮತ್ತಷ್ಟು ಬರುವಂತಾಗಲಿ… ಎಂಬ ಆಶಯದೊಂದಿಗೆ ಯಾರೆಲ್ಲ ಈ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡಿದ್ದಿರೋ ಅವರು ಸಾರಥಿ ಯೂಟ್ಯೂಬ್ ಚಾನಲ್’ನಲ್ಲಿ ವೀಕ್ಷಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







