ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರದೀಪ್ ಅಂಚೆ ನಿರ್ದೇಶನದಲ್ಲಿ ಸಹ್ಯಾದ್ರಿ ರಂಗ ತರಂಗ ಅರ್ಪಿಸುವ ಮುಖವಾಡ ನಾಟಕ ಕವಿತಾಶ್ರೀ ಪಾತ್ರದಿಂದ ಆರಂಭವಾಗುತ್ತದೆ. ಕವನ ಸಂಕಲನಕ್ಕೆ ಮುನ್ನುಡಿ ಬರೆಸಲು ಖ್ಯಾತ ಸಾಹಿತಿ ಆನಂದ್ ಅವರ ಮನೆಗೆ ಬಂದ ಕವಿತಾಶ್ರೀ ಅವರ ಕವನಗಳನ್ನು ಓದಿದ ಸಾಹಿತಿ ಆನಂದ್ ಸಾಹಿತ್ಯ ಪ್ರಕಾರಗಳ ಮಾರ್ಗದರ್ಶನ ನೀಡುತ್ತಾರೆ. ಇಬ್ಬರಲ್ಲೂ ಪರಿಚಯ ಸ್ನೇಹಕ್ಕೆ ತಿರುಗುತ್ತದೆ.



ಪ್ರತಿ ಪಾತ್ರವೂ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದು, ಮುಖ್ಯಭೂಮಿಕೆಯಲ್ಲಿ ಕವಿತಾಶ್ರೀ ಪಾತ್ರ ನಿರ್ವಹಿಸಿದ ಡಾ. ವಿನಯ ಶ್ರೀನಿವಾಸ್ ಅವರ ಅಭಿನಯ ಮನಸೆಳೆಯುವಂತಿತ್ತು. ವೈದ್ಯರಾಗಿ, ವೈದ್ಯಕೀಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸಮಯದ ಅಭಾವವಿರುವವರು ಪೂರ್ಣ ಪ್ರಮಾಣದ ಕಲಾವಿದರಂತೆ ಪಾತ್ರಕ್ಕೆ ಅವಶ್ಯವಿರುವ ಎಲ್ಲಾ ಭಾವಗಳನ್ನು ತುಂಬಿಕೊಂಡು ನಟಿಸಿರುವುದು ಪ್ರೇಕ್ಷಕರಿಗೆ ಕಲೆಯ ಬಗ್ಗೆ ಇನ್ನಷ್ಟು ಅಸಕ್ತಿ ಕೂತೂಹಲಗಳು ಹೆಚ್ಚಿಸುವಂತೆ ಮಾಡುತ್ತದೆ.
(ಲೇಖನ: ಯು.ಜೆ. ನಿರಂಜನಮೂರ್ತಿ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post