ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-14 |

ನಾನು ಹುಟ್ಟಿದ್ದು ಪ್ರಕೃತಿಯಿಂದ ಎಂದರೆ ಅವಳಿಗೆ ಬೇಡವಾಗಿ ಇರುವುದಿಲ್ಲ. ಇಂದಲ್ಲ ನಾಳೆ ನನ್ನನ್ನು ಯಾರಾದರು ಬಳಸುತ್ತಾರೆ ಎಂಬ ನಂಬುಗೆಯಿಂದ ಜೀವನ ನಡೆಸುತ್ತಿತ್ತು.
ಅದು ತನ್ನ ಹಿಂದಿನ ನೆನಪಿಗೆ ಹೋಯಿತು. ಬಿಸಿಲಿನಿಂದ ತಾಪ ಹೆಚ್ಚಾದಾಗ ತನ್ನ ನೆರಳನ್ನು ಆಶ್ರಯಿಸಿ ಬಂದಿದ್ದ, ತನ್ನ ಕೊಂಬೆಯನ್ನು ಆಶ್ರಯಿಸಿ ಅಲ್ಲೇ ಹುಟ್ಟಿ ಬೆಳೆದಿರುವ ಅನೇಕ ಪ್ರಾಣಿ, ಪಕ್ಷಿಗಳು, ಅವುಗಳ ಜೀವನ, ಕಾಡಿನಲ್ಲಿದ್ದ ತನ್ನದೇ ಜಾತಿಯ ಮರಗಳ ನಡುವೆ ನಡೆಯುತ್ತಿದ್ದ ಸಂವಹನ, ನಂತರ ಕಾಡಿನಲ್ಲಿ ಬೇರೆ ಮುಳ್ಳು ಮರಗಳ ಆಗಮನ, ತನ್ನ ಜಾತಿಯ ಮರಗಳ ನಾಶ ಇವೆಲ್ಲವನ್ನು ನೆನೆದು ದುಃಖಿಸಿತು. ತಾನು ಉದುರಿಸಿದ ಬೀಜ ಬೆಳೆಯಲು ಅಸಾಧ್ಯ ಎಂದು ತಿಳಿದರೂ ಅದು ಒಂದಿಷ್ಟು ಬೀಜಗಳನ್ನು ಉದುರಿಸಿತು. ಆ ಮರದಲ್ಲೇ ಹುಟ್ಟಿ-ಬೆಳೆದಿದ್ದ ಒಂದು ಪಕ್ಷಿ ಆ ಮರದ ಬೀಜಗಳ ದುಃಸ್ಥಿತಿಯನ್ನು ಕಂಡು ಮರುಕಪಟ್ಟಿತು. ತಾನು ಆ ಮರದ ಕೊಂಬೆಗಳಲ್ಲಿ ಆಡಿ ಬೆಳೆದಿದ್ದನ್ನು ನೆನಪಿಸಿಕೊಂಡಿತು. ತನಗೆ ಆಶ್ರಯ ಕೊಟ್ಟ ಮರಕ್ಕೆ ನೆರವಾಗಲು ನಿರ್ಧರಿಸಿತು. ತನ್ನ ಎಲ್ಲಾ ಮಿತ್ರ ಪಕ್ಷಿಗಳಿಂದ ಕೂಡಿ ಆ ಬೀಜಗಳನ್ನು ಪಕ್ಕದ ಕಾಡಿಗೆ ಒಯ್ಯಿತು.

ಇದು ನನಗೆ ಗೋಚರವಾದ ಕಥೆ. ಇದರಲ್ಲಿರುವ ಆ ಮರ ನಮ್ಮ ಪರಂಪರೆ. ಕಲೆಗಳು ಅದರ ಬೀಜ, ಆಧುನಿಕತೆ ಎಂಬ ಮುಳ್ಳಿನ ಮರಗಳಿಂದ ಪರಂಪರೆಯ ಇರುವು ಮರೆತು ಹೋಗುತ್ತಿದೆ. ಪಕ್ಷಿಗಳು ಆ ಮರದ ಬೀಜಗಳನ್ನು ರಕ್ಷಿಸಿದ ಹಾಗೆ ಆ ಕಲೆಗಳನ್ನು ರಕ್ಷಿಸಲು ನಾವೆಲ್ಲರೂ ಸಂಘಟಿತರಾಗಿ ಪ್ರಯತ್ನಿಸಬೇಕು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post