No Result
View All Result
Children's Ramayana Book by 11 Year Girl
English Articles

11-Year-Old Mysuru Girl Writes Children’s Ramayana in Just 15 Days

by kalpa News
July 25, 2026
0

Kalpa Media House  | Mysuru | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Sunday, July 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನೃತ್ಯವನ್ನೇ ಆರಾಧಿಸಿ, ಉಸಿರಾಗಿಸಿಕೊಂಡ ಅಪರೂಪದ ಕಲಾವಿದ ಮಂಜಿತ್ ಶೆಟ್ಟಿ ಕುರಿತು ನೀವು ತಿಳಿಯಲೇಬೇಕು

kalpa News by kalpa News
September 19, 2020
in Special Articles
0
ನೃತ್ಯವನ್ನೇ ಆರಾಧಿಸಿ, ಉಸಿರಾಗಿಸಿಕೊಂಡ ಅಪರೂಪದ ಕಲಾವಿದ ಮಂಜಿತ್ ಶೆಟ್ಟಿ ಕುರಿತು ನೀವು ತಿಳಿಯಲೇಬೇಕು
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಸಂತಸವನ್ನು ಅಭಿವ್ಯಕ್ತಿ ಪಡಿಸುವಾಗ ಮನಸ್ಸು ಉಲ್ಲಾಸಹೊಂದಿ ದೇಹದ ಹಾವ-ಭಾವಗಳು ಬದಲಾಗಿ ಆಂಗಿಕ ಅಭಿನಯವು ಹೊರಹೊಮ್ಮುತ್ತದೆ. ಈ ರೀತಿ ನಲಿಯುವ ಉಲಿಯುವ ಪರಿಪಾಠ ಮಾನವನಿಗೆ ಅನಾದಿ ಕಾಲದಿಂದಲೇ ಬಂದಿರಬೇಕು. ಪ್ರಕೃತಿಯೇ ಇದಕ್ಕೆ ಪೂರಕವಾದ ಅಂಶಗಳನ್ನು ಒದಗಿಸಿರಬಹುದು. ಮಳೆ ಬರುವ ಮುನ್ಸೂಚನೆಯಾದೊಡನೆ ಅಥವಾ ಬಾನಲ್ಲಿ ಕಾಮನಬಿಲ್ಲು ಮೂಡುವಾಗ ಗಂಡು ನವಿಲು ಗರಿಬಿಚ್ಚಿ ನಾಟ್ಯ ಗೈಯುತ್ತದೆ. ವಸಂತಕಾಲದಲ್ಲಿ ಕೋಗಿಲೆ ಮುಂತಾದ ಪಕ್ಷಿಗಳು ಲಯಬದ್ಧವಾಗಿ ಹಾಡಿದರೆ ಇನ್ನು ಕೆಲವು ಪಕ್ಷಿಗಳು ಲಾಸ್ಯದ ಹೆಜ್ಜೆ ಹಾಕುತ್ತವೆ.

ನಾಗರ ಹಾವುಗಳು ಮಿಲನವನ್ನು ಹೊಂದುವ ಸಮಯದಲ್ಲಿ ಬಾಲದ ತುದಿಯಲ್ಲಿ ನಿಂತು ಒಂದನ್ನೊಂದು ಸುರುಳಿ ಸುತ್ತುತ್ತ ನೃತ್ಯ ಮಾಡುತ್ತ ಕೂಡುತ್ತವೆ. ನಮ್ಮ ಸನಾತನ ಧರ್ಮ ಹೇಳುವಂತೆ ಲೋಕಾಧ್ಯಕ್ಷನಾದ ಶಿವನು ತನ್ನ ತಾಂಡವ ನೃತ್ಯದಿಂದ ಸೃಷ್ಟಿ ಮತ್ತು ಲಯವನ್ನು ಮಾಡುತ್ತಾನೆ. ಸುಧರ್ಮ ಸಭೆ ಎಂದು ಕರೆಯಲಾಗುವ ಸ್ವರ್ಗದಲ್ಲಿ ರಂಭೆ, ಊರ್ವಶಿ, ಮೇನಕಾ ಮುಂತಾದ ಅಪ್ಸರಾ ಸ್ತ್ರೀಯರು ನಿಯಮಿತವಾಗಿ ನೃತ್ಯ ಸೇವೆ ಮಾಡುತ್ತಾರೆ.

ಇತಿಹಾಸಕ್ಕೆ ಬಂದರೆ ರಾಜರ ಆಸ್ಥಾನಗಳಲ್ಲಿ ರಾಜನರ್ತಕಿಯರು/ನರ್ತಕರು ಇರುತ್ತಿದ್ದರು. ಒಟ್ಟಿನಲ್ಲಿ ಹೇಳುವುದಾದರೆ ಕುಣಿತ/ನೃತ್ಯಗಳು ಅಥವಾ ಲಲಿತ ಕಲೆಗಳು ಮಾನವ ಇತಿಹಾಸದ ಉಗಮದಿಂದಲೂ ಅವನೊಂದಿಗೆ ಅಂತಸ್ಥವಾಗಿವೆ.

ಭಾರತದಲ್ಲಿ ಭರತನಾಟ್ಯ, ಕೂಚಿಪುಡಿ, ಒಡಿಸ್ಸಿ, ಮಣಿಪುರಿ, ಕಥಕ್ಕಳಿ, ಮೋಹಿನಿ ಅಟ್ಟಂ, ಕಥಕ್, ಸತ್ರಿಯಾ ಮುಂತಾದವುಗಳು ಶಾಸ್ತ್ರೀಯ ನೃತ್ಯಗಳೆಂದು ಪರಿಗಣಿಸಲ್ಪಟ್ಟಿವೆ. ಕರ್ನಾಟಕದ ಯಕ್ಷಗಾನ ಹಾಗೂ ಭಾಗವತರ ಮೇಳಗಳ ನೃತ್ಯಗಳು ಶಾಸ್ತ್ರೀಯ ನೃತ್ಯಗಳೆಂದು ಹೇಳಲ್ಪಡುತ್ತವೆ. ನಮ್ಮಲ್ಲಿ ಸುಮಾರು ಒಂದೂವರೆ ಸಾವಿರಕ್ಕಿಂತ ಹೆಚ್ಚು ಜಾನಪದ ನೃತ್ಯಗಳಿವೆ. ಅನಂತರದ ಕಾಲಘಟ್ಟದಲ್ಲಿ ಪಾಶ್ಚಾತ್ಯರ ಆಗಮನದಿಂದ ಅಥವಾ ಅವರ ಅನುಕರಣೆಗಳಿಂದ ನಮ್ಮಲ್ಲೂ ಆಧುನಿಕ ನೃತ್ಯಗಳು ಅಸ್ತಿತ್ವಕ್ಕೆ ಬಂದವು.

ಆಧುನಿಕ ನೃತ್ಯಗಳು (Modern Dances) ನಮ್ಮ ನೆಲದಲ್ಲಿ ಸೊಗಸಾಗಿ ಬೆಳೆದವು. ಕೆಲವು ನೃತ್ಯಗಳು ಭಾರತೀಯತೆಯನ್ನು ಸೇರಿಸಿಕೊಂಡು ಮೂಲ ಸ್ವರೂಪದಲ್ಲಿ ಪರಿವರ್ತನೆಗೊಂಡವು. ಶಾಸ್ತ್ರೀಯ ನೃತ್ಯಗಳನ್ನು ಕಲಾಸಂಸ್ಥೆಗಳು ಹಾಗೂ ಗುರು ಶಿಷ್ಯ ಪರಂಪರೆ ಪೋಷಿಸಿಕೊಂಡು ಬಂದರೆ; ಆಧುನಿಕ ನೃತ್ಯಗಳನ್ನು ಚಲನಚಿತ್ರ, ದೂರದರ್ಶನ ಮಾಧ್ಯಮಗಳು ಪೋಷಿಸಿದವು. ಆಧುನಿಕ ನೃತ್ಯಗಳಲ್ಲಿ ಪ್ರಸಿದ್ಧಿಗೊಂಡಿರುವ ನೂರಾರು ವಿಧಗಳಿವೆ. ಹಿಪ್ ಹಾಪ್, ಬೆಲ್ಲಿ, ಸಾಲ್ಸಾ, ಸಾಂಬಾ, ರುಂಬಾ, ಝುಂಬಾ, ಜಾಝ್, ಟ್ಯಾಪ್, ವಾಲ್ಟ್ಜ್, ಟ್ಯಾಂಗೋ, ಬ್ರೇಕ್ ಡ್ಯಾನ್ಸ್‌, ಸಮಕಾಲೀನ ಹೀಗೆ ಯಾದಿ ಬೆಳೆಯುತ್ತ ಹೋಗುತ್ತದೆ. ಭಾರತದಲ್ಲಿ ಕಳೆದ ಶತಮಾನದ ಕೊನೆಯ ಭಾಗ ಹಾಗೂ ಇಪ್ಪತ್ತೊಂದನೆ ಶತಮಾನದ ಆರಂಭದ ಈ ಕಾಲವು ಆಧುನಿಕ ನೃತ್ಯಗಳಿಗೆ ಪರ್ವಕಾಲ. ದೂರದರ್ಶನದ ನೂರಾರು ವಾಹಿನಿಗಳಲ್ಲಿ ನಿತ್ಯ ನಿರಂತರ ಆಧುನಿಕ ನೃತ್ಯಗಳ ರಿಯಾಲಿಟಿ ಶೋಗಳು ನಡೆಯುತ್ತ ಇರುತ್ತವೆ.

ಲಕ್ಷೋಪಲಕ್ಷ ಜನರು ಆಧುನಿಕ ನೃತ್ಯಗಳನ್ನು ಪರಿಶ್ರಮಗಳಿಂದ ಕಲಿತು, ಕಲಿಸುತ್ತ ಬದುಕು ಕಟ್ಟಿಕೊಂಡಿದ್ದಾರೆ. ಹೀಗೆ ಇಂಜಿನಿಯರಿಂಗ್ (ಡಿಪ್ರೋಮಾ) ಕಲಿತರೂ ನೃತ್ಯದ ಮೇಲಿನ ಅತೀವ ಆಸಕ್ತಿಯಿಂದ ನೃತ್ಯ ಸಂಯೋಜಕರಾಗಿ ಉಡುಪಿಯಲ್ಲಿ ಎಕ್ಸ್‌-ಟ್ರೀಮ್ ಡ್ಯಾನ್ಸ್‌ ಅಕಾಡೆಮಿಯನ್ನು ಸ್ಥಾಪಿಸಿ ಬದುಕು ಕಟ್ಟಿಕೊಂಡವರು ಮಂಜಿತ್ ಶೆಟ್ಟಿ.

ಉಡುಪಿಯ ಶ್ರೀಮತಿ ಪ್ರೇಮಾ ಹಾಗೂ ಶ್ರೀ ಸುಧಾಕರ್ ಶೆಟ್ಟಿ ದಂಪತಿಗಳ ಮಗ ಮಂಜಿತ್ ಶೆಟ್ಟಿ. ಉಡುಪಿ ನಗರದ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರಾಥಮಿಕ ಹಾಗೂ ಸಂತ ಮರಿಯ ಪ್ರೌಢ ಶಾಲೆಯಿಂದ ಪ್ರೌಢ ಶಿಕ್ಷಣ ಪಡೆದವರು. ಎಂ.ಜಿ.ಎಂ. ಕಾಲೇಜಿನಿಂದ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಮುಗಿಸಿ ಮಣಿಪಾಲದ ಟಿ.ಎಂ.ಎ.ಪೈ. ಪಾಲಿಟೆಕ್ನಿಕ್ ಸಂಸ್ಥೆಯಿಂದ ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದಿಂದ ಡಿಪ್ರೋಮಾ ಪದವಿ ಪಡೆದವರು. ಮಂಜಿತ್ ಅವರಿಗೆ ನೃತ್ಯ ಎಂದರೆ ಬಾಲ್ಯದಿಂದಲೇ ಅತೀವ ಆಸಕ್ತಿ. ಆದರೆ ದುಬಾರಿ ಮುಂಗಡ ಹಾಗೂ ಮಾಸಿಕ ಶುಲ್ಕ ನೀಡಿ ನೃತ್ಯ ಶಾಲೆ ಸೇರುವಂತಿರಲಿಲ್ಲ ಅವರ ಅಂದಿನ ಪರಿಸ್ಥಿತಿ. ಒಂಬತ್ತನೆ ತರಗತಿಯಲ್ಲಿರುವಾಗ ಹೇಗಾದರೂ ಮಾಡಿ ನೃತ್ಯ ಕಲಿಯಲೇ ಬೇಕೆಂಬ ಉತ್ಕಟವಾದ ಅಪೇಕ್ಷೆಯನ್ನರಿತ ಆತ್ಮೀಯ ಸಹಪಾಠಿ ನಿಶಾಂತ್ ಅವರ ಸಹಾಯಹಸ್ತದಿಂದ ನೃತ್ಯ ಶಾಲೆಗೆ ಪ್ರವೇಶ ಪಡೆದರು. ಮಂಜಿತ್ ಅವರ ರಂಗಪ್ರವೇಶ ನಡೆದದ್ದು ಖ್ಯಾತ ನೃತ್ಯಪಟು ಪ್ರಭುದೇವ ಅವರು ನರ್ತಿಸಿದ ಮುಕಾಬುಲಾ ಹಾಡಿಗೆ. ಈ ಸಹಾಯಕ್ಕಾಗಿ ನಿಶಾಂತ್ ಅವರಿಗೆ ಇಂದಿಗೂ ಮುಂದಿಗೂ ಕೃತಜ್ಞರಾಗಿದ್ದಾರೆ. ಮಂಜಿತ್ ಅವರಿಗೆ ನಿರಂತರ ಪ್ರೋತ್ಸಾಹ ನೀಡಿದವರು ಅವರ ಹಿರಿಯಕ್ಕ ಮಂಜುಳಾ ಅವರು. ಪ್ರಸ್ತುತ ಪತಿ ದತ್ತರಾಮ್ ಶೆಟ್ಟಿ ಹಾಗೂ ಪುತ್ರ ರೇಯಾನ್ಸ್‌ ಅವರೊಂದಿಗೆ ಹೈದ್ರಾಬಾದಿನಲ್ಲಿ ನೆಲೆಸಿದ್ದಾರೆ.

ಸತತವಾಗಿ ನೃತ್ಯಾಭ್ಯಾಸವನ್ನು ಜಾರಿಯಲ್ಲಿರಿಸಿದ ಮಂಜಿತ್ ಅವರು ಮುಂದೆ ಮಂಗಳೂರಿನ Excellent Dance Academy ಸೇರುತ್ತಾರೆ. ಅಲ್ಲಿ ಸಂದೇಶ್ ಜಾಹ್ನವಿ, ಗೌತಮ್, ಚರಣ್ ಹಾಗೂ ಸುರೇಶ್ ಆಚಾರ್ಯ ಮುಂತಾದ ನೃತ್ಯಗುರುಗಳ ಗರಡಿಯಲ್ಲಿ ಪಳಗುತ್ತಾರೆ. ಉಡುಪಿಯಲ್ಲಿ ತನ್ನದೇ ಆದ Xtreme Dance Academy (R) ಎಂಬ ನೃತ್ಯ ಶಾಲೆಯನ್ನು 2007 ರಲ್ಲಿ ಸ್ಥಾಪಿಸುತ್ತಾರೆ. ಹದಿಮೂರು ವರ್ಷಗಳ ಹಿಂದೆ ಕೇವಲ ಮೂರು ನೃತ್ಯಾಭ್ಯಾಸಿಗಳೊಂದಿಗೆ ಆರಂಭವಾದ ನೃತ್ಯಶಾಲೆಯಲ್ಲಿ ಇಂದು ಸುಮಾರು ಇನ್ನೂರು ಮಂದಿ ಕಲಿಯುತ್ತಿದ್ದಾರೆ. ಮಂಜಿತ್ ಅವರು ಕಳೆದ ಮೂರು ವರ್ಷಗಳಿಂದ ದೈಹಿಕ ಸದೃಢತೆಗಾಗಿ ಕಲಿಸುವ ಝುಂಬಾ ನೃತ್ಯವನ್ನೂ ಕಲಿಸುತ್ತಿದ್ದಾರೆ.

ಹಲವಾರು ರಿಯಾಲಿಟಿ ಶೋಗಳಿಗಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಅದರಲ್ಲಿ ಧೀ ಜೂನಿಯರ್ಸ್ ಈಟಿವಿ (ತೆಲುಗು), ಸುವರ್ಣ ವಾಹಿನಿಯ Sye to Dance, ಸ್ಟಾರ್ ಸುವರ್ಣ ವಾಹಿನಿಯ ಡ್ಯಾನ್ಸ್‌ ಡ್ಯಾನ್ಸ್‌ (ಜೂನಿಯರ್ಸ್), ಸ್ಪಂದನ ವಾಹಿನಿಯ ಡ್ಯಾನ್ಸ್‌ ಕ ಸೂಪರ್ ಸ್ಟಾರ್, ದೈಜಿವಲ್ಡರ್ ವಾಹಿನಿಯ ಜೂನಿಯರ್ ಮಸ್ತಿ, ಚಂದನ ವಾಹಿನಿಯ ಮಧುರ ಮಧುರವೀ ಮಂಜುಳಗಾನ ಪ್ರಮುಖವಾಗಿವೆ. ಅನೇಕ ರಾಜ್ಯಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ವಿಜಯಶಾಲಿಯಾಗಿದ್ದಾರೆ.

ಅವರ ಈ ವಿಜಯಯಾತ್ರೆಯು ಕರ್ನಾಟಕದ ಗಡಿ ದಾಟಿ ಪುಣೆ ಮುಂಬೈ, ಹೈದ್ರಾಬಾದ್, ಗೋವಗಳಿಗೂ ವಿಸ್ತರಿಸಲ್ಪಟ್ಟಿದೆ. ಮಲ್ಪೆ ರೋಟರಿ ಕ್ಲಬ್ಬು ’ನಾಟ್ಯ ಚತುರ’ ಎಂಬ ಬಿರುದನ್ನಿತ್ತು ಸನ್ಮಾಸಿದೆ. ಮಂಜಿತ್ ಅವರು ನಿಶುಲ್ಕವಾಗಿ ಆಶಾ ನಿಲಯದ ದಿವ್ಯಾಂಗ ಮಕ್ಕಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ ಮತ್ತು ಸ್ಪರ್ಧೆಲ್ಲಿ ಆ ಮಕ್ಕಳು ಗೆದ್ದಿದ್ದಾರೆ. ಜಪಾನಿನಲ್ಲಿ ನಡೆಯುವ ನೃತ್ಯ ಸ್ಪರ್ಧೆಯಲ್ಲಿ ಜೆಸಿಐ ಸಂಸ್ಥೆಯನ್ನು ಪ್ರತಿನಿಧಿಸುವ ಮಕ್ಕಳಿಗೆ ನೃತ್ಯ ಸಂಯೋಜನೆ ಮಾಡುವ ಯೋಜನೆಯನ್ನಿಟ್ಟು ಕೊಂಡಿದ್ದಾರೆ.

ಮಂಜಿತ್ ಅವರು ಬಾಲಿವುಡ್, ಅರೆಶಾಸ್ತ್ರೀಯ (Semi Classical) ಫ್ರೀಸ್ಟೈಲ್, ಸಮಕಾಲೀನ (Contemporary) ಮೊದಲಾದ ನೃತ್ಯ ಪ್ರಕಾರಗಳನ್ನು ಕಲಿಸುತ್ತಾರೆ. ಹದಿಮೂರು ವರ್ಷಗಳಲ್ಲಿ ತಮ್ಮ ನೃತ್ಯಶಾಲೆಯಲ್ಲಿ ಒಂದೂವರೆ ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನೃತ್ಯವನ್ನು ಕಲಿತಿದ್ದಾರೆ. ಒಟ್ಟಾರೆಯಾಗಿ ಹತ್ತು ಸಾವಿರದಷ್ಟು ವಿದ್ಯಾರ್ಥಿಗಳಿಗೆ ನೃತ್ಯ ಕಲಿಸಿದ್ದಾರೆ. ಮಂಜಿತ್ ಅವರ ಕೆಲವು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ವಿಜಯಿಯಾಗಿ ಕೀರ್ತಿ ತಂದಿದ್ದಾರೆ. ಮಂಜಿತ್ ಅವರ ಅನುಜೆ ಸ್ಪೂರ್ತಿ ಡಿ. ಶೆಟ್ಟಿಯವರು 2018ರಲ್ಲಿ ’ಮಿಸ್ ಟೀನ್’ ಕರ್ನಾಟಕ ಸ್ಪರ್ಧೆಯಲ್ಲಿ ವಿಜಯಿಯಾಗಿ ’ಮಿಸ್ ಟೀನ್ ಇಂಡಿಯಾ’ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. 2019 ರಲ್ಲಿ ಹೈದ್ರಾಬಾದಿನಲ್ಲಿ ನಡೆದ ಸ್ಪರ್ಧೆಯಲ್ಲಿ ಅತ್ಯುತ್ತಮ ರೂಪದರ್ಶಿಯಾಗಿ ಹೊರಹೊಮ್ಮಿದ್ದಾರೆ. ಚಿಕ್ಕಮಗಳೂರಲ್ಲಿ ನಡೆದ ಕ್ವೀನ್ ಆಫ್ ಕರ್ನಾಟಕ’ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಸ್ಪಂದನ ವಾಹಿನಿಯಲ್ಲಿ ನಡೆದ ಡ್ಯಾನ್ಸ್‌ ಕ ಸೂಪರ್ ಸ್ಟಾರ್ ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಆಫ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕೃತಿ ಉಚ್ಚಿಲ್ ಅವರು ಸ್ಟಾರ್ ಸುವರ್ಣ ವಾಹಿನಿಯ ಡ್ಯಾನ್ಸ್‌ ಡ್ಯಾನ್ಸ್‌ (ಜೂನಿಯರ್ಸ್) ಹತ್ತು ಅತ್ಯುತ್ತಮ ಸ್ಪರ್ಧೆಗಳಲ್ಲಿ ಒಬ್ಬರಾಗಿದ್ದರು. ಸ್ಪಂದನ ವಾಹಿನಿಯ ಡ್ಯಾಕ್ಸ್‌ ಕ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಪ್ರಥಮ ರನ್ನರ್ ಆಫ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಾನ್ವಿ ಶಾನುಭೋಗ್ ದೈಜಿ ವಲ್ಡರ್ ವಾಹಿನಿಯ ಜೂನಿಯರ್ ಮಸ್ತಿಯಲ್ಲಿ ದ್ವಿತೀಯ ರನ್ನರ್ ಆಫ್ ಪ್ರಶಸ್ತಿಯನ್ನೂ, ಸ್ಪಂದನ ವಾಹಿನಿಯ ಡ್ಯಾನ್ಸ್‌ ಕ ಸೂಪರ್ ಸ್ಟಾರ್ ನಲ್ಲಿ ಸೆಮಿ ಫೈನಲಿಸ್ಟ್‌ ಆಗಿ ಹಂತ ತಲುಪಿದ್ದರು. ಹರ್ಷಿತಾ ಸೇರಿಗಾರ್ ಅವರು ದೈಜಿ ವಲ್ಡರ್ ವಾಹಿನಿಯ ಜೂನಿಯರ್ ಮಸ್ತಿಯಲ್ಲಿ ಹಾಗೂ ಸ್ವಂದನ ವಾಹಿನಿಯ ಡ್ಯಾನ್ಸ್‌ ಕ ಸೂಪರ್ ಸ್ಟಾರ್ ಸ್ಪರ್ಧೆಯಲ್ಲಿ ಫೈನಲಿಸ್ಟ್‌ ಆದವರು. ಸೋಹನ್ ಆಳ್ವ ಅವರು ದೈಜಿ ವಲ್ಡರ್ ವಾಹಿನಿಯ ಕಿಂಗ್ ಆಫ್ ಡ್ಯಾನ್ಸ್‌ ಸ್ಪರ್ಧೆಯಲ್ಲಿ ಸೆಮಿ ಫೈನಸ್ಟ್‌ ಆದವರು. ಸೋಹನ ಶಂಕರ್ ಅವರು ದೈಜಿ ವಲ್ಡರ್ ವಾಹಿನಿಯ ಕ್ವೀನ್ ಆಫ್ ಡ್ಯಾನ್ಸ್‌ ಸ್ಪರ್ಧೆಯಲ್ಲಿ ಮತ್ತು ಜೂನಿಯರ್ ಮಸ್ತಿಯಲ್ಲಿ ಸೆಮಿ ಫೈನಲಿಸ್ಟ್‌ ಆದವರು. ತನಿಶಾ ಪೂಜಾರಿ, ಸೃಷ್ಟಿ ಗುರುರಾಜ್ ಜೂನಿಯರ್ ಮಸ್ತಿ ಸ್ಪರ್ಧೆಯಲ್ಲಿ ಕಾರ್ಟರ್ ಫೈನಲಿಸ್ಟ್‌ ಆದವರು. ದಿಶ್ವಿ ಅವರು ಜೂನಿಯರ್ ಮಸ್ತಿಯಲ್ಲಿ ’ಚೋಟ ಪ್ಯಾಕೆಟ್’ ಆದವರು. ವೈಷ್ಣವಿ ಶೆಟ್ಟಿ ಅವರು ಮಿಸ್ ಟೀನ್’ ಮಣಿಪಾಲ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು. ಹೀಗೆ ಪಟ್ಟಿ ಬೆಳೆಯುತ್ತದೆ.

ಭಾವ, ತಾಳ, ಲಯ ಯುಕ್ತವಾದ ಅಭಿನಯವೇ ನೃತ್ಯ. ದೈಹಿಕ, ಮಾನಸಿಕ, ಬೌದ್ಧಿಕ ಹಾಗೂ ನೈತಿಕವಾಗಿ ವ್ಯಕ್ತಿಯ ನಡವಳಿಕೆಗಳನ್ನು ತಿದ್ದಿ ವಿಕಾಸದೆಡೆಗೆ ಪ್ರೇರೇಪಿಸುವ ಶಕ್ತಿ ನೃತ್ಯ ಕಲೆಗಿದೆ. ಅಂತಃಕರಣವನ್ನು ಪ್ರಚೋದಿಸುವ ಅತಿ ಸುಂದರವಾದ ನೃತ್ಯ ಜೀವನದ ಬರಿಯ ಪ್ರತಿಬಿಂಬ ಅಥವಾ ಆಕರ್ಷಣವಲ್ಲ. ಅದು ಜೀವನವೇ ಆಗಿದೆ ಎಂದು ಸೊಗಸಾಗಿ ವ್ಯಾಖ್ಯಾನಿಸಿದ್ದಾರೆ ವಿದೇಶಿ ಸಾಹಿತಿಯೊಬ್ಬರು. ಮೈ-ಮನವನ್ನು ಮುದಗೊಳಿಸುವ ನೃತ್ಯವನ್ನೇ ಪೂಜಿಸುತ್ತ, ಆರಾಧಿಸುತ್ತ, ಅದನ್ನೇ ಉಸಿರು ಮತ್ತು ಬದುಕನ್ನಾಗಿಸಿಗೊಂಡ ಮಂಜಿತ್ ಅವರಿಗೆ ಭವಿತವ್ಯದಲ್ಲಿ ಇನ್ನಷ್ಟು ಮತ್ತಷ್ಟು ಕೀರ್ತಿ ಬರಲಿ. ಅವರ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಹೆಸರು ಗಳಿಸಲಿ.


Get In Touch With Us info@kalpa.news Whatsapp: 9481252093

Tags: coastal newsDanceKannada News WebsiteLatest News KannadaModern DancesSemi ClassicalSouth KendraSpecial ArticleSye to DanceUdupiಆಧುನಿಕ ನೃತ್ಯಉಡುಪಿನೃತ್ಯಶಾಸ್ತ್ರೀಯ ನೃತ್ಯ
Share257Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬಿಆರ್’ಪಿ ಸಮೀಪ ಸಿಂಗನಮನೆ ಗ್ರಾಮದಲ್ಲಿ ಓಮ್ನಿ ವಾಹನ ಬೆಂಕಿಗೆ ಆಹುತಿ

Next Post

ಸಾಮಾಜಿಕ ಜಾಲತಾಣ ಸ್ಪರ್ಧೆ: ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ರಾಜ್ಯಕ್ಕೆ ಪ್ರಥಮ

kalpa News

kalpa News

Next Post
ಸಾಮಾಜಿಕ ಜಾಲತಾಣ ಸ್ಪರ್ಧೆ: ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ರಾಜ್ಯಕ್ಕೆ ಪ್ರಥಮ

ಸಾಮಾಜಿಕ ಜಾಲತಾಣ ಸ್ಪರ್ಧೆ: ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ರಾಜ್ಯಕ್ಕೆ ಪ್ರಥಮ

Leave a Reply Cancel reply

Your email address will not be published. Required fields are marked *

No Result
View All Result
Children's Ramayana Book by 11 Year Girl
English Articles

11-Year-Old Mysuru Girl Writes Children’s Ramayana in Just 15 Days

by kalpa News
July 25, 2026
0

Kalpa Media House  | Mysuru | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL