ಕಲ್ಪ ಮೀಡಿಯಾ ಹೌಸ್ | ಮಂಗಳೂರು/ಬೆಂಗಳೂರು |
ಮೈಸೂರು ವಿಭಾಗದ ಯಡಕುಮರಿ–ಶ್ರೀವಾಗಿಲು ರೈಲು ನಿಲ್ದಾಣಗಳ ನಡುವಿನ ಹಳಿಯಲ್ಲಿ ಆಗಸ್ಟ್ 1ರಂದು ಸಂಭವಿಸಿದ ಭೂಕುಸಿತದ (Landslide) ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಆಗಸ್ಟ್ 2ರಂದು ಮತ್ತಷ್ಟು ರೈಲುಗಳ ಸಂಚಾರದಲ್ಲಿ ಮಹತ್ವದ ಬದಲಾವಣೆ ಘೋಷಿಸಿದೆ.
ಈಗಾಗಲೇ ಕೆಲ ರೈಲುಗಳನ್ನು ರದ್ದು, ನಿಯಂತ್ರಣ ಹಾಗೂ ಮರು ವೇಳಾಪಟ್ಟಿಗೆ ಒಳಪಡಿಸಿದ್ದ ರೈಲ್ವೆ, ಇದೀಗ 6 ಎಕ್ಸ್ಪ್ರೆಸ್ ರೈಲುಗಳನ್ನು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಆದೇಶಿಸಿದೆ.
ಈ ಎಲ್ಲಾ ಬದಲಾವಣೆಗಳು 02.08.2026 ರಂದು ಪ್ರಯಾಣ ಆರಂಭಿಸುವ (JCO: 02.08.2026) ರೈಲುಗಳಿಗೆ ಅನ್ವಯವಾಗಲಿವೆ.
Landslide : ಮಾರ್ಗ ಬದಲಾವಣೆಗೊಂಡ ರೈಲುಗಳ ವಿವರ
1) 17377 ವಿಜಯಪುರ – ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್
ಈ ರೈಲು ಸಾಮಾನ್ಯವಾಗಿ ಹುಬ್ಬಳ್ಳಿ–ಅರಸೀಕೆರೆ–ಹಾಸನ–ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ–ಪಡೀಲ್–ಮಂಗಳೂರು ಜಂಕ್ಷನ್ ಮಾರ್ಗದಲ್ಲಿ ಸಂಚರಿಸುತ್ತದೆ.
ಭೂಕುಸಿತದ ಹಿನ್ನೆಲೆಯಲ್ಲಿ ರೈಲನ್ನು ಹುಬ್ಬಳ್ಳಿ–ಲೋಂಡಾ–ಕ್ಯಾಸಲ್ ರಾಕ್–ಮಡಗಾಂವ್–ಕಾರವಾರ–ತೋಕೂರು–ಮಂಗಳೂರು ಜಂಕ್ಷನ್ ಮಾರ್ಗದಲ್ಲಿ ಓಡಿಸಲಾಗುತ್ತದೆ.
ಈ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ:
ಯಳವಿಗಿ, ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಕಡೂರು, ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು ಹಾಗೂ ಬಂಟ್ವಾಳ.
2) 17378 ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್ಪ್ರೆಸ್
ಸಾಮಾನ್ಯವಾಗಿ ಮಂಗಳೂರು ಜಂಕ್ಷನ್–ಸುಬ್ರಹ್ಮಣ್ಯ ರಸ್ತೆ–ಸಕಲೇಶಪುರ–ಹಾಸನ–ಅರ್ಸಿಕೆರೆ–ಹುಬ್ಬಳ್ಳಿ ಮಾರ್ಗದಲ್ಲಿ ಸಂಚರಿಸುವ ಈ ರೈಲು, ಈಗ ತೋಕೂರು–ಕಾರವಾರ–ಮಡಗಾಂವ್–ಕ್ಯಾಸಲ್ ರಾಕ್–ಲೋಂಡಾ–ಹುಬ್ಬಳ್ಳಿ ಮಾರ್ಗದಲ್ಲಿ ಸಂಚರಿಸಲಿದೆ.
ಈ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ:
ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ, ಹಾಸನ, ಅರಸೀಕೆರೆ, ಬೀರೂರು, ಕಡೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಬ್ಯಾಡಗಿ, ಹಾವೇರಿ ಹಾಗೂ ಯಳವಿಗಿ.
Also Read>> ಕಾಕ್ಟೇಲ್ ಪ್ರತಿಭೆಗೆ ರಾಷ್ಟ್ರೀಯ ವೇದಿಕೆ | ಬಾರ್ ಮಾಸ್ಟ್ರೋ ಸ್ಪರ್ಧೆಯಲ್ಲಿ ಮಿಂಚಿದ ಬೆಂಗಳೂರು ಪ್ರತಿಭೆಗಳು
3) 16586 ಮುರ್ಡೇಶ್ವರ – ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್
ಈ ರೈಲು ಸಾಮಾನ್ಯವಾಗಿ ಮಂಗಳೂರು–ಸಕಲೇಶಪುರ–ಹಾಸನ–ಮೈಸೂರು–ಕೆಎಸ್ಆರ್ ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತದೆ.
ಇದೀಗ ಮಂಗಳೂರು–ಕಣ್ಣೂರು–ಶೋರನೂರು–ಪಾಲಕ್ಕಾಡ್–ಪೊದನೂರು–ಜೋಲಾರ್ಪೇಟೆ–ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿದೆ.
ಈ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ:
ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ, ಹಾಸನ, ಹೊಳೆನರಸೀಪುರ, ಕೃಷ್ಣರಾಜನಗರ, ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರ, ಕೆಂಗೇರಿ, ಬೆಂಗಳೂರು ಕ್ಯಾಂಟ್ ಹಾಗೂ ಕೆಎಸ್ಆರ್ ಬೆಂಗಳೂರು.
ವಿಶೇಷ ಸೂಚನೆ: ಈ ರೈಲು ಕೆಎಸ್ಆರ್ ಬೆಂಗಳೂರಿನ ಬದಲಿಗೆ ಎಸ್ಎಂವಿಟಿ ಬೆಂಗಳೂರಿನಲ್ಲೇ ಪ್ರಯಾಣ ಮುಕ್ತಾಯಗೊಳಿಸುತ್ತದೆ.
4) 16512 ಕೋಜಿಕೋಡ್ – ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್
ಈ ರೈಲು ಈಗ ಮಂಗಳೂರು ಸೆಂಟ್ರಲ್–ಕಣ್ಣೂರು–ಶೋರನೂರು–ಪಾಲಕ್ಕಾಡ್–ಪೊದನೂರು–ಜೋಲಾರ್ಪೇಟೆ–ಎಸ್ಎಂವಿಟಿ ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿದೆ.
ಈ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ:
ಮಂಗಳೂರು ಜಂಕ್ಷನ್, ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಬಿ.ಜಿ.ನಗರ, ಕುಣಿಗಲ್, ಯಶವಂತಪುರ ಹಾಗೂ ಕೆಎಸ್ಆರ್ ಬೆಂಗಳೂರು.
ವಿಶೇಷ ಸೂಚನೆ: ರೈಲು ಎಸ್ಎಂವಿಟಿ ಬೆಂಗಳೂರಿನಲ್ಲೇ ಸೇವೆ ಮುಕ್ತಾಯಗೊಳಿಸುತ್ತದೆ.
5) 16511 ಕೆಎಸ್ಆರ್ ಬೆಂಗಳೂರು – ಕೋಜಿಕೋಡ್ ಎಕ್ಸ್ಪ್ರೆಸ್
ಈ ರೈಲು ಇನ್ನು ಮುಂದೆ ಕೆಎಸ್ಆರ್ ಬೆಂಗಳೂರಿನ ಬದಲಿಗೆ ಎಸ್ಎಂವಿಟಿ (SMVB) ಬೆಂಗಳೂರಿನಿಂದಲೇ ಪ್ರಯಾಣ ಆರಂಭಿಸಲಿದೆ.
ಪರ್ಯಾಯ ಮಾರ್ಗ: ಎಸ್ಎಂವಿಟಿ–ಜೋಲಾರ್ಪೇಟೆ–ಪೊದನೂರು–ಪಾಲಕ್ಕಾಡ್–ಶೋರನೂರು–ಕೋಜಿಕೋಡ್–ಮಂಗಳೂರು ಸೆಂಟ್ರಲ್
ಈ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ:
ಕೆಎಸ್ಆರ್ ಬೆಂಗಳೂರು, ಯಶವಂತಪುರ, ಕುಣಿಗಲ್, ಬಿ.ಜಿ.ನಗರ, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟ್ವಾಳ ಹಾಗೂ ಮಂಗಳೂರು ಜಂಕ್ಷನ್.
ವಿಶೇಷ ಸೂಚನೆ: ಈ ರೈಲು ಪರ್ಯಾಯ ಮಾರ್ಗದಲ್ಲಿ ಸಂಚರಿಸಿ ಮಂಗಳೂರು ಸೆಂಟ್ರಲ್ವರೆಗೆ ವಿಸ್ತರಿಸಲಾಗುತ್ತದೆ.
6) 16585 ಎಸ್ಎಂವಿಟಿ ಬೆಂಗಳೂರು – ಮುರ್ಡೇಶ್ವರ ಎಕ್ಸ್ಪ್ರೆಸ್
ಮಧ್ಯಾಹ್ನ 12.30ಕ್ಕೆ ಹೊರಡಿಸಿದ ಬುಲೆಟಿನ್ನಲ್ಲಿ ಈ ರೈಲಿನ ಮಾರ್ಗ ಬದಲಾವಣೆಯನ್ನೂ ರೈಲ್ವೆ ಪ್ರಕಟಿಸಿದೆ.
ಈ ರೈಲು ಸಾಮಾನ್ಯವಾಗಿ ಕೆಎಸ್ಆರ್ ಬೆಂಗಳೂರು–ಮೈಸೂರು–ಹಾಸನ–ಸಕಲೇಶಪುರ–ಮಂಗಳೂರು–ಮುರ್ಡೇಶ್ವರ ಮಾರ್ಗದಲ್ಲಿ ಸಂಚರಿಸುತ್ತಿತ್ತು.
ಈಗ ಎಸ್ಎಂವಿಟಿ ಬೆಂಗಳೂರು–ಓಮಲೂರು–ಪೊದನೂರು–ಪಾಲಕ್ಕಾಡ್–ಶೋರನೂರು–ಕಣ್ಣೂರು–ತೋಕೂರು–ಮುರ್ಡೇಶ್ವರ ಮಾರ್ಗದಲ್ಲಿ ಸಂಚರಿಸಲಿದೆ. ಮಾರ್ಗ ಬದಲಾವಣೆಗೊಂಡು ಸಂಚರಿಸುತ್ತಿರುವ ರೈಲು ಸಂಖ್ಯೆ 16585ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ನಿಲುಗಡೆ ನೀಡಲಾಗುತ್ತದೆ.
ಈ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ:
ಕೆಎಸ್ಆರ್ ಬೆಂಗಳೂರು, ಬೆಂಗಳೂರು ಕ್ಯಾಂಟ್, ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು ಜಂಕ್ಷನ್, ಕೃಷ್ಣರಾಜನಗರ, ಹೊಳೆನರಸೀಪುರ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು ಹಾಗೂ ಬಂಟ್ವಾಳ.
ಪ್ರಯಾಣಿಕರಿಗೆ ರೈಲ್ವೆಯ ಮನವಿ
ಯಡಕುಮರಿ–ಶ್ರೀವಾಗಿಲು ನಡುವಿನ ಭೂಕುಸಿತ ತೆರವು ಕಾರ್ಯ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮ ರೈಲುಗಳ ಮಾರ್ಗ, ಹೊರಡುವ ನಿಲ್ದಾಣ ಹಾಗೂ ಅಂತಿಮ ಗಮ್ಯಸ್ಥಾನದ ಬದಲಾವಣೆಗಳನ್ನು ಮುಂಚಿತವಾಗಿ ಪರಿಶೀಲಿಸಿ ಪ್ರಯಾಣಿಸಲು ರೈಲ್ವೆ ಇಲಾಖೆ ಮನವಿ ಮಾಡಿದೆ.
ಪ್ರಯಾಣಿಕರು NTES (National Train Enquiry System) ವೆಬ್ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ರೈಲುಗಳ ನೇರ (Live) ಮಾಹಿತಿ ಹಾಗೂ ಇತ್ತೀಚಿನ ನವೀಕರಣಗಳನ್ನು ಪರಿಶೀಲಿಸುವಂತೆ ಸಲಹೆ ನೀಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







