ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಖ್ಯಾತ ಚಲನಚಿತ್ರ ನಟ ಕಿಚ್ವ ಸುದೀಪ್ Actor Sudeep ಅವರು ಇಂದು ಶಿಕಾರಿಪುರದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೆಂದ್ರ BYVijayendra ಅವರ ಪರ ಮತ ಯಾಚಿಸಿದರು. ಸಂಸದ ಬಿ.ವೈ. ರಾಘವೇಂದ್ರ ಸಾತ್ ನೀಡಿದರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ರೋಡ್ ಶೋ ಅಕ್ಕಮಹಾದೇವಿ ವೃತ್ತದಿಂದ ಆರಂಭವಾಗಿ, ಪ್ರಮುಖ ರಸ್ತೆಗಳಲ್ಲಿ ಸಾಗಿ ಬಸ್ ನಿಲ್ದಾಣ ವೃತ್ತದಲ್ಲಿ ಕೊನೆಯಾಯಿತು. ನಾಲ್ಕು ಕಿಲೋಮೀಟರ್ ನಷ್ಟು ದೂರ ಸಾಗಿದ ಈ ರೋಡ್ ಶೋನಲ್ಲಿ ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸಿದರು. ಹಲವರು ಹೂವುಗಳನ್ನು ಎರಚಿ ಸಂಭ್ರಮಿಸಿದರು. ಬಿ.ವೈ. ವಿಜಯೇಂದ್ರ, ಬಿ.ವೈ. ರಾಘವೇಂದ್ರ ಹಾಗೂ ಯಡಿಯೂರಪ್ಪ ಪರ ಘೋಷಣೆ ಕೂಗಿದರು. “ಕಿಚ್ಚ ಕಿಚ್ಚ” ಎಂಬ ಘೋಷಣೆಯಂತೂ ಮುಗಿಲು ಮುಟ್ಟಿತ್ತು. ಕಿಚ್ಚ ಸುದೀಪ್ ಅವರು ಮದಕರಿ ಸಿನಿಮಾದ “ಕೋಪದಲ್ಲಿದ್ದಾಗ ದೇವ್ರು ಎಂಥೆಂತವರನ್ನೋ ಸೃಷ್ಟಿ ಮಾಡ್ತಾನೆ. ಆದ್ರೆ ಖುಷಿಯಲ್ಲಿದ್ದಾಗ ಕಿಚ್ಚ ಸುದೀಪ್ ತರದವರನ್ನ ಸೃಷ್ಟಿ ಮಾಡ್ತಾನೆ” ಡೈಲಾಗ್ ಹೇಳಿ ರಂಜಿಸಿದರು.
ರೋಡ್ ಶೋ ಉದ್ದಕ್ಕೂ ಬಿಜೆಪಿಯ ಬಾವುಟಗಳು, ಕಿಚ್ಚ ಸುದೀಪ್ ಅವರ ಫೋಟೋಗಳು, ಪ್ಲಕಾರ್ಡ್ ಗಳು, ರಾರಾಜಿಸಿದವು.
ಪ್ರಚಾರದ ಕೊನೆಯ ದಿನವಾದ ಇಂದು ಮಧ್ಯಾಹ್ನದ ನಂತರ ಶಿರಾಳಕೊಪ್ಪದಲ್ಲಿ ಸುದೀಪ್ ಅವರ ರೋಡ್ ಶೋ ನಡೆಯಲಿದೆ.
ವಿಜಯೇಂದ್ರ ಸೋಲಲು ಜನ ಬಿಡಲ್ಲ: ಕಿಚ್ಚ
ಬಿ.ವೈ. ವಿಜಯೇಂದ್ರ ಅವರು ಸೋಲಲು ಶಿಕಾರಿಪುರದ ಜನ ಬಿಡಲ್ಲ. ಗೆಲ್ಲಿಸೇ ಗೆಲ್ಲುಸ್ತಾರೆ ಎಂದು ನಟ ಕಿಚ್ಚ ಸುದೀಪ್ ವಿಶ್ವಾಸ ವ್ಯಕ್ತಪಡಿಸಿದರು.
Also read: ದೇಶದ ಹಿತ ಕಾಯುವ ಪಕ್ಷಕ್ಕೆ ರಾಮಚಂದ್ರಾಪುರ ಮಠದ ಶಿಷ್ಯವರ್ಗ ಬೆಂಬಲ
ಶಿಕಾರಿಪುರದಲ್ಲಿ ಇಂದು ನಡೆದ ರೋಡ್ ಶೋ ಸಂದರ್ಭದಲ್ಲಿ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಅವರು ಇದೂವರೆಗೆ ಹಲವು ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ. ಆದರೆ ಇವತ್ತು ಮೊದಲ ಬಾರಿ ಪರೀಕ್ಷೆ ಬರೆಯೋ ವಿದ್ಯಾರ್ಥಿ ರೀತಿ ಆಗಿದ್ದಾರೆ. ಅವರ ಮೊದಲ ಚುನಾವಣೆ ಇದು. ಶಿಕಾರಿಪುರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯ, ಜನರ ಬೆಂಬಲ ನೋಡಿದರೆ ಅವರ ಗೆಲವು ಖಚಿತ ಎಂಬುದು ಸ್ಪಷ್ಟ ಎಂದರು.
ಒಂದು ಓಟಿನಿಂದ ಗೆದ್ದರೂ ಗೆಲುವೇ, ಸಾವಿರ ಓಟಿನಿಂದ ಗೆದ್ದರೂ ಗೆಲುವೇ. ಗೆಲ್ಲುವುದಷ್ಟೇ ಮುಖ್ಯವಲ್ಲ. ಗತ್ತಿನಿಂದ ಗೆಲ್ಲಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post