ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ಸಂಗೀತ ನಾಟಕ ಅಕಾಡೆಮಿ ವತಿಯಿಂದ ‘ವಂದೇ ಮಾತರಂ’ ರಚನೆಯ 150ನೇ ವರ್ಷದ ಸ್ಮರಣಾರ್ಥ ಹಾಗೂ ಮಹಾಕವಿ ಕಾಳಿದಾಸ ಜಯಂತಿಯ ಅಂಗವಾಗಿ ದೇಶಾದ್ಯಂತ (National Theatre Festival) ‘ರಾಷ್ಟ್ರೀಯ ರಂಗ ಮಹೋತ್ಸವ’ವನ್ನು (Yakshagana) ಆಚರಿಸಲಾಯಿತು.
ಈ ಮಹೋತ್ಸವದ ಅಂಗವಾಗಿ ಭಾರತದೆಲ್ಲೆಡೆ 150ಕ್ಕೂ ಹೆಚ್ಚು ವೇದಿಕೆಗಳಲ್ಲಿ, 150ಕ್ಕೂ ಅಧಿಕ ರಂಗ ತಂಡಗಳು ಹಾಗೂ 39ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಕಲಾವಿದರ ಭಾಗವಹಿಸುವಿಕೆಯಿಂದ ನಾಟಕ ಪ್ರದರ್ಶನಗಳು ನಡೆದವು. ಈ ಮೂಲಕ ಭಾರತೀಯ ರಂಗ ಪರಂಪರೆಯ ವೈವಿಧ್ಯತೆ ಅನಾವರಣಗೊಂಡಿತು.
ಈ ಪ್ರಯುಕ್ತ ಬೆಂಗಳೂರಿನ ಎನ್.ಆರ್. ಕಾಲೋನಿಯ ಸಿ. ಅಶ್ವತ್ಥ್ ಕಲಾಮಂದಿರದಲ್ಲಿ ಯಕ್ಷಕಲಾ ಅಕಾಡೆಮಿ (ರಿ.) ವತಿಯಿಂದ ‘ರಾಣಿ ಕಿತ್ತೂರು ಚೆನ್ನಮ್ಮ’ ಯಕ್ಷಗಾನ ಪ್ರಸಂಗವನ್ನು ಸಂಜೆ 6 ಗಂಟೆಗೆ ಪ್ರದರ್ಶಿಸಲಾಯಿತು. ಹಿರಿಯ ಯಕ್ಷಕವಿ ಡಿ.ಎಸ್. ಶ್ರೀಧರ್ ಅವರ ರಚನೆಯ ಈ ಪ್ರಸಂಗವನ್ನು ಯುವ ನಿರ್ದೇಶಕಿ ಚಿತ್ರಕಲಾ ಕೆ. ತುಂಗ ಅವರ ಸಮರ್ಥ ನಿರ್ದೇಶನದಲ್ಲಿ ಯಶಸ್ವಿಯಾಗಿ ರಂಗಕ್ಕೆ ತರಲಾಯಿತು.
ಇತಿಹಾಸ ಆಧಾರಿತ ಕಥಾನಕ
ಪ್ರಸಂಗವು ಕಿತ್ತೂರಿನ ಅರಸ ಮಲ್ಲಸರ್ಜ ದೇಶಾಯಿಯ ಕಥೆಯಿಂದ ಆರಂಭಗೊಳ್ಳುತ್ತದೆ. ಬೇಟೆಯ ಸಂದರ್ಭದಲ್ಲಿ ಮಲ್ಲಸರ್ಜರನ್ನು ಭೇಟಿ ಮಾಡುವ ಚೆನ್ನಮ್ಮ, ಅವರನ್ನು ಕಾಕತಿಗೆ ಆಹ್ವಾನಿಸಿ, ನಂತರ ತಂದೆ ಧೂಳಪ್ಪ ದೇಶಾಯಿಗೆ ಪರಿಚಯಿಸುತ್ತಾಳೆ. ಮಗಳ ಇಚ್ಛೆಗೆ ಸಮ್ಮತಿಸಿದ ಧೂಳಪ್ಪ ದೇಶಾಯಿ ಮಲ್ಲಸರ್ಜರೊಂದಿಗೆ ವಿವಾಹಕ್ಕೆ ಒಪ್ಪುತ್ತಾರೆ.
ಮುಂದೆ ರುದ್ರಮ್ಮಳ ಸಹಕಾರದಿಂದ ಚೆನ್ನಮ್ಮ ಅರಮನೆ ಜೀವನಕ್ಕೆ ಪ್ರವೇಶಿಸಿ, ಶಿವಲಿಂಗ ರುದ್ರಸರ್ಜನ ಜವಾಬ್ದಾರಿಯನ್ನು ಹೊರುತ್ತಾಳೆ. ಮರಾಠ ದೊರೆ ಬಾಜೀರಾಯನ ಕುತಂತ್ರದಿಂದ ಮಲ್ಲಸರ್ಜರು ನಿಧನರಾಗುತ್ತಾ, ನಂತರ ಶಿವಲಿಂಗ ರುದ್ರಸರ್ಜನ ಪಟ್ಟಾಭಿಷೇಕ ನಡೆಯುತ್ತದೆ. ಆದರೆ ಯುವರಾಜನ ಅಕಾಲಿಕ ನಿಧನದ ನಂತರ ಬ್ರಿಟಿಷರ ದತ್ತುಪತ್ರ ನೀತಿಗೆ ವಿರೋಧವಾಗಿ ಚೆನ್ನಮ್ಮ ತನ್ನ ದತ್ತು ಪುತ್ರನನ್ನು ಉತ್ತರಾಧಿಕಾರಿಯಾಗಿ ಘೋಷಿಸುತ್ತಾಳೆ.
ಬ್ರಿಟಿಷರ ವಿರುದ್ಧ ಹೋರಾಟ
ಈ ಬೆಳವಣಿಗೆಗೆ ಅಸಮಾಧಾನಗೊಂಡ ದ್ರೋಹಿಗಳು ಮಲ್ಲಪ್ಪ ಶೆಟ್ಟಿ ಹಾಗೂ ವೆಂಕಟರಾಯ ಬ್ರಿಟಿಷ್ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಾರೆ. ಕಿತ್ತೂರಿನ ಮೇಲೆ ದಾಳಿ ನಡೆಸಿದ ಥ್ಯಾಕರೆಯನ್ನು ಚೆನ್ನಮ್ಮಳ ಸೇನಾನಿ ಬಾಳಪ್ಪ ಸಂಹರಿಸುತ್ತಾನೆ. ಬಳಿಕ ಬ್ರಿಟಿಷ್ ಅಧಿಕಾರಿ ಚಾಪ್ಲಿನ್ ಹೆಚ್ಚಿನ ಸೈನ್ಯದೊಂದಿಗೆ ದಾಳಿ ನಡೆಸಿ, ದ್ರೋಹಿಗಳ ಸಹಾಯದಿಂದ ಚೆನ್ನಮ್ಮಳನ್ನು ವಂಚನೆಯ ಮೂಲಕ ಬಂಧಿಸುತ್ತಾನೆ.
ಇದಾದ ನಂತರ ಸಂಗೊಳ್ಳಿ ರಾಯಣ್ಣ ಚೆನ್ನಮ್ಮಳ ಆಶೀರ್ವಾದ ಪಡೆದು ಯುವಕರನ್ನು ಸಂಘಟಿಸಿ, ಛತ್ರಪತಿ ಶಿವಾಜಿಯವರ ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಹೋರಾಟ ಮುಂದುವರಿಸುತ್ತಾನೆ. ಆದರೆ ಮೋಸದ ಮೂಲಕ ಬಂಧಿತನಾದ ರಾಯಣ್ಣನ ಸುದ್ದಿ ತಿಳಿದ ಚೆನ್ನಮ್ಮ ತೀವ್ರ ದುಃಖದಿಂದ ಕೊನೆಯುಸಿರೆಳೆಯುತ್ತಾಳೆ. ಅಲ್ಲಿಗೆ ಪ್ರಸಂಗ ಅಂತ್ಯಗೊಳ್ಳುತ್ತದೆ.
ಕಲಾವಿದರ ಮೆಚ್ಚುಗೆಗೆ ಪಾತ್ರವಾದ ಅಭಿನಯ
ಚೆನ್ನಮ್ಮಳ ಪಾತ್ರದಲ್ಲಿ ಅಭಿನಯಿಸಿದ ಕುಮಾರಿ ಪೂಜಾ ಆಚಾರ್ಯ ತಮ್ಮ ಭಾವಪೂರ್ಣ ಅಭಿನಯ ಹಾಗೂ ಸ್ವರದ ಏರಿಳಿತಗಳಿಂದ ಪ್ರೇಕ್ಷಕರ ಮನಗೆದ್ದರು. ರಾಘವೇಂದ್ರ ಐತಾಳ್ ಮಲ್ಲಸರ್ಜ ಪಾತ್ರಕ್ಕೆ ಸಮರ್ಪಕ ನ್ಯಾಯ ಒದಗಿಸಿದರೆ, ಅಭಿನವ ತುಂಗ ಸಂಗೊಳ್ಳಿ ರಾಯಣ್ಣನಾಗಿ ಚುರುಕಿನ ನೃತ್ಯ ಮತ್ತು ರಂಗ ಸಾನ್ನಿಧ್ಯದಿಂದ ಗಮನ ಸೆಳೆದರು.
ಪ್ರದರ್ಶನದ ಅಂತ್ಯದಲ್ಲಿ ಹದಿನಾರು ಕಲಾವಿದರು ‘ವಂದೇ ಮಾತರಂ’ ಗೀತೆಗೆ ನೀಡಿದ ಸಮೂಹ ಅಭಿನಯ ಪ್ರಮುಖ ಆಕರ್ಷಣೆಯಾಯಿತು. ರಾಷ್ಟ್ರಭಕ್ತಿ, ಇತಿಹಾಸ ಮತ್ತು ಯಕ್ಷಗಾನದ ಸೊಗಡನ್ನು ಒಟ್ಟುಗೂಡಿಸಿದ ಈ ಪ್ರದರ್ಶನವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ರಾಷ್ಟ್ರೀಯ ಮಟ್ಟದ ಈ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದ ಸಂಗೀತ ನಾಟಕ ಅಕಾಡೆಮಿ ಹಾಗೂ ಪ್ರದರ್ಶನವನ್ನು ಸಮರ್ಥವಾಗಿ ರೂಪಿಸಿದ ಯಕ್ಷಕಲಾ ಅಕಾಡೆಮಿ (ರಿ.) ಅಭಿನಂದನಾರ್ಹವಾಗಿವೆ.
‘Kittur Rani Chennamma’ Yakshagana Staged at National Ranga Mahotsava
Bengaluru: The autonomous body of the Ministry of Culture, Government of India, the Sangeet Natak Akademi, organised the ‘National Ranga Mahotsava’ across the country on July 15 to commemorate the 150th anniversary of ‘Vande Mataram’ and to mark the birth anniversary of Mahakavi Kalidasa.
As part of this grand festival, theatre performances were held across more than 150 venues nationwide, featuring over 150 theatre groups and nearly 4,000 artists performing in more than 39 Indian languages, showcasing the diversity of India’s theatrical traditions.
On this occasion, the Yakshakala Academy (R) presented the Yakshagana performance ‘Rani Kittur Chennamma’ at 6 PM at C. Ashwath Kalamandira in N.R. Colony, Bengaluru. Written by senior Yakshagana poet D.S. Sridhar, the production was successfully brought to stage under the able direction of young director Chitkala K. Tunga.
Historical Narrative
The play begins with the story of Kittur ruler Mallasarja Desai. During a hunting expedition, Chennamma meets Mallasarja and invites him to her hometown Kakati. She later introduces him to her father Dhulappa Desai and expresses her wish to marry him. With her father’s approval, the marriage takes place following the advice of minister Gurusiddappa.
Rudramma (Rudramba), the co-wife with a broad heart, welcomes Chennamma into the palace and entrusts her with the responsibility of raising her son Shivalinga Rudrasarja. Later, due to a conspiracy by Maratha ruler Bajirao, Mallasarja dies. Chennamma then crowns Shivalinga Rudrasarja as the ruler, but he passes away prematurely due to illness.
Defying the British policy that denied adopted sons the right to rule, Chennamma declares her adopted son as the heir. However, traitors Mallappa Shetty and Venkataraya inform the British collector Thackeray. When Thackeray attacks Kittur, Chennamma’s loyal commander Balappa kills him.
Enraged by this, British officer Chaplin attacks with a larger force and, with the help of traitors, deceitfully captures Chennamma.
Struggle Against the British
Meanwhile, Sangolli Rayanna, after receiving Chennamma’s blessings, mobilises youth and continues the resistance against the British using guerrilla warfare inspired by Chhatrapati Shivaji. However, he is eventually betrayed and captured while bathing, with the help of his relative Lakkappa.
On hearing this, Chennamma, realising that the hope of Kittur’s freedom was fading, breathes her last in deep sorrow, bringing the play to an end.
Appreciated Performances
Kumari Pooja Acharya, who portrayed Chennamma, impressed the audience with her powerful performance, expressive dialogue delivery, and voice modulation. Raghavendra Aithal did justice to the role of Mallasarja, while Abhinav Tunga, as Sangolli Rayanna, stood out with his energetic dance and strong stage presence.
The group performance by sixteen artists to the song ‘Vande Mataram’ at the end became a major highlight of the show. Blending patriotism, history, and the essence of Yakshagana, the performance received wide appreciation from the audience.
The Sangeet Natak Akademi for organising this national-level festival and the Yakshakala Academy (R) for presenting the production were widely appreciated.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







