ಆಷಾಢ ಶುಕ್ಲ ಹುಣ್ಣಿಮೆ ಕೇತು ಗ್ರಹಣ. ಉತ್ತರಾಷಾಡ ನಕ್ಷತ್ರದಲ್ಲಿ ಚಂದ್ರ ಕೇತು ಗ್ರಹಣ. ಕುಜನ ಜತೆಗೆ ಚಂದ್ರ.
- ಗ್ರಹಣ ಲಗ್ನ: ಮೇಷ 7°
- ಸ್ಪರ್ಷ-11.55 pm
- ಸಮ್ಮೀಲನ-1.02 am
- ಮದ್ಯ: 1.44 am
- ಉನ್ಮೀಲನ: 2.44 am
- ಮೋಕ್ಷ; 3.50 am
- ಗ್ರಹಣ ಕಾಲದ ಕುಜ, ಚಂದ್ರ, ಕೇತುಗ್ರಹಗಳ ಸ್ಥಿತಿಗಳು
- ಕುಜ 9°, ಕೇತು 11°, ಚಂದ್ರ 9°
- 110 ನಿಮಿಷಗಳ ಗ್ರಹಣ
- 11.55 am ನಂತರ ಭೋಜನ ನಿಷಿದ್ಧ
ರವಿಯಿಂದ 80°ಯಲ್ಲಿ ಭೂಕಂಪ ಲಗ್ನ ಕನ್ಯಾ. ಅದರದ್ದೇ ತ್ರಿಕೋಣ ರಾಶಿ ಮಕರದಲ್ಲಿ ಗ್ರಹಣ. ಮಕರ, ವೃಷಭ, ಕನ್ಯಾ ರಾಶಿ ಭೂಕಂಪನ ಲಗ್ನ. ಕಂಪನಗಳಾಗುತ್ತಿರುವುದು ಪ್ರಕೃತಿ. ಆದರೆ ಗ್ರಹಣದ ಫಲದಿಂದ ಇದು ವಿಪರೀತವಾದರೆ ಅಪಾಯ.
ಗ್ರಹಣ ಫಲ:
ಮಕರ, ವೃಷಭ, ಸಿಂಹ, ಧನುಸ್ಸು ರಾಶಿಗೂ, ಉತ್ತರಾಷಾಢಾ, ಶ್ರವಣ, ಧನಿಷ್ಟ, ಪೂರ್ವಾಷಾಢ, ರೋಹಿಣಿ, ಹಸ್ತ, ಕೃತ್ತಿಕಾ, ಉತ್ತರಾ ನಕ್ಷತ್ರದವರಿಗೂ ಅರಿಷ್ಟವಿದೆ. ಒಂದು ಲೆಕ್ಕದಲ್ಲಿ ನೋಡಿದರೆ, ಒಂದು ಮನೆಯಲ್ಲಿ ಒಬ್ಬರಿಗೆ ಅನಿಷ್ಟವಾದರೂ ಅರಿಷ್ಟ ಇಲ್ಲದವರಿಗೂ ಅನಿಷ್ಟವೇ ಆಗುತ್ತದೆ. ಅದಕ್ಕಾಗಿ ಗ್ರಹಣ ಕಾಲದಲ್ಲಿ ವ್ರತ, ಉಪವಾಸವನ್ನು ಪ್ರತಿಯೊಬ್ಬರೂ ಮಾಡಲೇಬೇಕು.
ಹೇಗೆ ಇದರ ಅನಿಷ್ಟ ಫಲ?
ಯಾರ ಜಾತಕದಲ್ಲಿ ಯಾವ ರೂಪದಲ್ಲಿ ಅವರವರು ದುಃಖಿತ ಅಥವಾ ಉದ್ವೇಗಕ್ಕೆ ಹೋಗುತ್ತಾರೋ, ಅವರ ಈ ಗುಣಗಳು ಮತ್ತಷ್ಟು ಉದ್ರೇಕಗೊಂಡು ದೇಹಕ್ಕೆ, ಮನಸ್ಸಿಗೆ ಹಾನಿ ಮಾಡಬಹುದು. ಹಠ ಸ್ವಭಾವ, ತನ್ನಿಚ್ಚೆ ಇರುವವರ ಗುಣ ಇನ್ನಷ್ಟು highlight ಆಗುತ್ತದೆ. ಆದರೆ ಏನಾಗಬಹುದು ಎಂದು ಕೇಳಬೇಕಾಗಿಲ್ಲ. ಏನೂ ಆಗಬಹುದು. ಇದರ ನಿಯಂತ್ರಣಕ್ಕಾಗಿ ವ್ರತ ನಿಯಮಗಳ ಪಾಲನೆ ಅಗತ್ಯ.
ಎಚ್ಡಿಕೆ ಸರ್ಕಾರಕ್ಕೆ ಅಪಾಯವಿದೆಯೇ?
ಸರಕಾರಕ್ಕೆ ಏನಾದರೂ ಅಪಾಯ ಇದೆಯೇ? ಇಲ್ಲ ಎನ್ನಲಾಗದು. ಮೊದಲೇ ಸಮ್ಮಿಶ್ರ ಎಣ್ಣೆ ಶೀಗೆ ಸರಕಾರ. ದಿನ ದಿನವೂ ಅಸಮಧಾನ ಏಳುತ್ತಿದೆ. ಇದುವೇ highlight ಆದರೆ ಸಾಕಲ್ಲವೇ.
ಪೆಟ್ರೋಲ್ ಬ್ಯಾರಲ್ ಪಕ್ಕದಲ್ಲಿ ಪಟಾಕಿ ಸಿಡಿಸಿದರೆ ಏನಾದೀತೋ ಅದೇ ರೀತಿ ಸಮ್ಮಿಶ್ರ ಸರಕಾರವೂ ಒಡೆದು ಪಥನವಾಗುತ್ತದೆ. ಪಥನ ಮಾತ್ರವಲ್ಲ ಸಂಘಟನೆಯೂ ಚೂರಾಗುವ ಸಾಧ್ಯತೆಗಳಿವೆ. ಇದಲ್ಲ ನಡೆದೇ ತೀರುತ್ತದೆ ಎಂದು ಹೇಳುವುದಿಲ್ಲ. ವ್ರತ ನಿಯಮಗಳ ಮೂಲಕ ಅವರವರ ಭಾವನೆಗಳನ್ನು ನಿಯಂತ್ರಣ ಮಾಡಿಕೊಳ್ಳದಿದ್ದಲ್ಲಿ ನಿಶ್ಚಿತವಾಗಿಯೂ ಪಥನವೂ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯೂ ಬರುವ ಸಾಧ್ಯತೆಗಳಿವೆ. ಯಾಕೆಂದರೆ ಇದು ಖಗ್ರಾಸವೂ, ದೀರ್ಘ ಗ್ರಹಣವೂ ಆಗಿರುತ್ತದೆ.
ಪ್ರಕೃತಿಗೆ ಏನಾಗಬಹುದು?
ಇಲ್ಲಿಯೂ ಗ್ರಹಣದ ಪ್ರಭಾವ ಇರಲೇಬೇಕು. ನಿಯಂತ್ರಣ ಕಳೆದುಕೊಂಡಾಗ ಅಪಾಯವೇ ಆಗುತ್ತದೆ. ಭೂ ಕಂಪನ, ಪ್ರವಾಹ, ಅತಿವೃಷ್ಟಿ, ಚಂಡ ಮಾರುತ, ವಾಹನಾಪಘಾತಗಳು ಸಂಭವಿಸಬಹುದು. ಇದನ್ನೆಲ್ಲ ನಿಯಂತ್ರಿಸಲಾಗದು. ಬೇಕಾದ ರಕ್ಷಣಾ ವ್ಯವಸ್ಥೆ ಮಾಡಿಕೊಳ್ಳಬಹುದಷ್ಟೆ.
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post