No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
  • Advertise With Us
  • Grievances
  • About Us
  • Contact Us
Friday, August 14, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಎಬಿಬಿ ಇನ್ನೋವೇಶನ್ ಸೆಂಟರ್‌’ನಲ್ಲಿ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮ

ಇಂಡಸ್ಟ್ರಿಯಲ್ ಎಐ ಅನ್ನು ಚುರುಕುಗೊಳಿಸಲು 37 ದೇಶಗಳ 1,000ಕ್ಕೂ ಹೆಚ್ಚು ಆವಿಷ್ಕಾರಕರು ಭಾಗಿ

kalpa News by kalpa News
July 4, 2026
in Special Articles
0
ABB Innovation Center (AIC) brings together 1,000+ innovators from 37 countries to accelerate industrial AI
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ಬೆಂಗಳೂರು |

  • ಇಂದಿನ ಜಗತ್ತಿನ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ಮುಂಚೂಣಿಯ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಡೊಮೈನ್ ಮತ್ತು ಅಪ್ಲಿಕೇಶನ್ ಜ್ಞಾನದೊಂದಿಗೆ ಒಟ್ಟುಗೂಡಿಸುತ್ತಿರುವ ವಿಶಿಷ್ಟ ಕಾರ್ಯಕ್ರಮ ಎಬಿಬಿ ಆಕ್ಸಿಲರೇಟರ್.
  • ಈ ಮಹತ್ವದ ಯೋಜನೆಗಾಗಿ ಎಬಿಬಿ ಹಾಗೂ ಅದರ ಪಾಲುದಾರ ಸಂಸ್ಥೆಗಳ 1000ಕ್ಕೂ ಹೆಚ್ಚು ತಂತ್ರಜ್ಞರು, 25ಕ್ಕೂ ಹೆಚ್ಚು ಪ್ರಮುಖ ಉದ್ಯಮ ಮತ್ತು ಶೈಕ್ಷಣಿಕ ಚಿಂತಕರು, 80 ಸ್ಟಾರ್ಟ್ ಅಪ್ ಗಳು ಹಾಗೂ 350ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಒಟ್ಟಾಗಿ ಕೈಜೋಡಿಸಿವೆ.

ಬೆಂಗಳೂರಿನ ಎಬಿಬಿ ಇನ್ನೋವೇಶನ್ ಸೆಂಟರ್ (ಎಐಸಿ) ಆವರಣದಲ್ಲಿ ಐದು ದಿನಗಳ ಕಾಲ ನಡೆದ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮದ ಆರನೇ ಆವೃತ್ತಿಯು ಯಶಸ್ವಿಯಾಗಿ ಸಮಾರೋಪಗೊಂಡಿದೆ. ಈ ಕಾರ್ಯಕ್ರಮದಲ್ಲಿ 37 ದೇಶಗಳ 1,000ಕ್ಕೂ ಹೆಚ್ಚು ಆವಿಷ್ಕಾರಕರು ಭಾಗಿಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜಗತ್ತಿನ ಅತ್ಯುತ್ತಮ ಪ್ರತಿಭೆಗಳ ನಡುವಿನ ಸಹಯೋಗವು ಹೇಗೆ ಹೊಸ ಉತ್ಪನ್ನಗಳು ಮತ್ತು ಪರಿಹಾರಗಳ ಅಭಿವೃದ್ಧಿಯನ್ನು ಚುರುಕುಗೊಳಿಸುತ್ತದೆ ಎಂಬುದನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ಕೈಗಾರಿಕಾ ರೂಪಾಂತರಕ್ಕೆ ಅಗತ್ಯವಿರುವ ಭವಿಷ್ಯದ ಸನ್ನದ್ಧ ಪ್ರತಿಭೆಗಳನ್ನು ಬಲಪಡಿಸುವತ್ತಲೂ ಈ ಕಾರ್ಯಕ್ರಮವು ಬೆಳಕು ಚೆಲ್ಲಿದ್ದು, ಜಗತ್ತನ್ನು ಹೆಚ್ಚು ಸುರಕ್ಷಿತ, ಹೆಚ್ಚು ಉತ್ಪಾದಕ ಮತ್ತು ಹೆಚ್ಚು ಸುಸ್ಥಿರವಾಗಿಸುವ ನಿಟ್ಟಿನಲ್ಲಿ ಉದ್ಯಮಗಳು ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿರುವ ಪ್ರಸಕ್ತ ಸಮಯದಲ್ಲಿ ಈ ಸಮಾವೇಶ ನಡೆದಿರುವುದು ಗಮನಾರ್ಹವಾಗಿದೆ.

ಈ ಕುರಿತು ಮಾತನಾಡಿದ ಎಬಿಬಿ ಇನ್ನೋವೇಶನ್ ಸೆಂಟರ್‌ ನ (ಎಐಸಿ) ಪೂರ್ಣಾವಧಿ ನಿರ್ದೇಶಕರಾದ ಜಿಎನ್‌ವಿ ಸುಬ್ಬಾರಾವ್ ಅವರು, “ಎಬಿಬಿ ಆಕ್ಸಿಲರೇಟರ್ ಎಂಬುದು ಜಾಗತಿಕ ಮಟ್ಟದ ಆವಿಷ್ಕಾರ ಕಾರ್ಯಕ್ರಮವಾಗಿದ್ದು, ಇಲ್ಲಿ ಕಲ್ಪನೆಗಳನ್ನು ನಮ್ಮ ಗ್ರಾಹಕರಿಗೆ ಉಪಯುಕ್ತವಾಗುವಂತಹ ಉತ್ತಮ ಪರಿಹಾರಗಳನ್ನಾಗಿ ಪರಿವರ್ತಿಸಲಾಗುತ್ತದೆ. ಇಲ್ಲಿ ಅಭಿವೃದ್ಧಿಪಡಿಸಲಾದ ಆವಿಷ್ಕಾರಗಳು ಕೇವಲ ಪ್ರಯೋಗಗಳಾಗಿ ಉಳಿಯದೆ, ಕೈಗಾರಿಕೆಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುವ ಅಭಿವೃದ್ಧಿಗೊಳಿಸಬಹುದಾದ ಉತ್ಪನ್ನಗಳು ಮತ್ತು ಪರಿಹಾರಗಳಾಗಿ ಮೂಡಿಬರುತ್ತವೆ. ಅತ್ಯಾಧುನಿಕ ಆರ್ ಅಂಡ್ ಡಿ, ಡೊಮೇನ್ ಮತ್ತು ಅಪ್ಲಿಕೇಶನ್ ಇಂಜಿನಿಯರಿಂಗ್ ಸಾಮರ್ಥ್ಯ ಹಾಗೂ ಡಿಜಿಟಲ್ ಮತ್ತು ಎಐ ತಂತ್ರಜ್ಞಾನಗಳನ್ನು ಒಟ್ಟುಗೂಡಿಸುವ ಮೂಲಕ, ನಾವು ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತಿದ್ದೇವೆ. ಇದರೊಂದಿಗೆ ಭವಿಷ್ಯವನ್ನು ರೂಪಿಸುವ ಸಾಮರ್ಥ್ಯಗಳನ್ನು ನಾವು ನಿರ್ಮಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಎಬಿಬಿ ಇನ್ನೋವೇಶನ್ ಸೆಂಟರ್, ಸಂಸ್ಥೆಯ ಜಾಗತಿಕ ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಅತಿ ದೊಡ್ಡ ಕೇಂದ್ರಗಳಲ್ಲಿ ಒಂದಾಗಿದೆ. ಇದು ಆರ್ ಅಂಡ್ ಡಿ, ಇಂಜಿನಿಯರಿಂಗ್, ಡಿಜಿಟಲ್ ತಂತ್ರಜ್ಞಾನ ಹಾಗೂ ಜಾಗತಿಕ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿರುವ ಸುಮಾರು 4,000 ತಂತ್ರಜ್ಞರ ನೆಲೆಯಾಗಿದೆ. ಉತ್ಕೃಷ್ಟ ಡೊಮೈನ್ ಪರಿಣತಿಯನ್ನು ಎಐ, ಕ್ಲೌಡ್ ಮತ್ತು ಡಿಜಿಟಲ್ ಸಾಮರ್ಥ್ಯಗಳೊಂದಿಗೆ ಒಟ್ಟುಗೂಡಿಸುವ ಮೂಲಕ, ಎಐಸಿ ಮುಂದಿನ ಪೀಳಿಗೆಯ ಕೈಗಾರಿಕಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಉತ್ಪನ್ನಗಳ ಹೊಸತನವನ್ನು ಚುರುಕುಗೊಳಿಸುವುದರ ಜೊತೆಗೆ ಸ್ವಾಯತ್ತ ಕಾರ್ಯಾಚರಣೆಯ ಕಡೆಗೆ ಸಾಗುತ್ತಿರುವ ಗ್ರಾಹಕರಿಗೆ ಅಗತ್ಯ ಬೆಂಬಲವನ್ನು ನೀಡುತ್ತಿದೆ.
JNNCE Shivamoggaಈ ಕುರಿತು ಮಾತನಾಡಿದ ಎಬಿಬಿ ಆಟೊಮೇಷನ್ ವಿಭಾಗದ ಗ್ಲೋಬಲ್ ಚೀಫ್ ಡಿಜಿಟಲ್ ಆಫೀಸರ್ ರಾಜೇಶ್ ರಾಮಚಂದ್ರನ್ ಅವರು, “ಎಬಿಬಿಯಲ್ಲಿ ನಾವು ಈ ಆಕ್ಸಿಲರೇಟರ್ ಅನ್ನು ಕೈಗಾರಿಕಾ ವಲಯದಲ್ಲಿ ಪರಿಣಾಮ ಬೀರುವ ಒಂದು ಶಕ್ತಿಶಾಲಿ ವೇದಿಕೆಯಾಗಿ ನೋಡುತ್ತೇವೆ. ಎಬಿಬಿ ತಜ್ಞರು, ಪಾಲುದಾರರು, ನವೋದ್ಯಮಗಳು, ಶೈಕ್ಷಣಿಕ ವಲಯ ಹಾಗೂ ಚಿಂತಕರನ್ನು ಒಂದೇ ಸೂರಿನಡಿ ತರುವ ಮೂಲಕ, ನಾವು ಕೈಗಾರಿಕಾ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಅಭಿವೃದ್ಧಿಪಡಿಸಬಹುದಾದ ಪರಿಹಾರಗಳ ಚಿಂತನೆ ಮತ್ತು ಅಭಿವೃದ್ಧಿಯನ್ನು ಚುರುಕುಗೊಳಿಸುತ್ತಿದ್ದೇವೆ. ಇದು ಭವಿಷ್ಯದ ಹೆಚ್ಚು ಸ್ವಾಯತ್ತ, ದಕ್ಷ ಮತ್ತು ಸುಸ್ಥಿರ ಕಾರ್ಯಾಚರಣೆಗಳನ್ನು ರೂಪಿಸಲು ನೆರವಾಗಲಿದೆ” ಎಂದು ತಿಳಿಸಿದ್ದಾರೆ.

ಹಿಂದಿನ ಆವೃತ್ತಿಗಳ ಯಶಸ್ಸಿನ ಆಧಾರದ ಮೇಲೆ, ಎಬಿಬಿ ಆಕ್ಸಿಲರೇಟರ್ ಇಂದು ಸಂಸ್ಥೆಯ ಪ್ರಮುಖ ಆವಿಷ್ಕಾರ ವೇದಿಕೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಕಳೆದ ಎರಡು ವರ್ಷಗಳಲ್ಲಿ, ಇದು 2,000 ಕ್ಕೂ ಹೆಚ್ಚು ಪಾಲ್ಗೊಳ್ಳುವವರನ್ನು ಆಕರ್ಷಿಸಿದೆ ಮತ್ತು ಎಐ, ಆಟೊಮೇಷನ್, ಕ್ಲೌಡ್ ಹಾಗೂ ಡಿಜಿಟಲ್ ತಂತ್ರಜ್ಞಾನಗಳಾದ್ಯಂತ ಸುಮಾರು 700 ಅಂಗೀಕೃತ ಬಳಕೆಯ ಪ್ರಕರಣಗಳನ್ನು ಸೃಷ್ಟಿಸಿದೆ.

ಎಬಿಬಿ ಆಕ್ಸಿಲರೇಟರ್‌ ನ ಈ ಸಾಧನೆಯು ಜಾಗತಿಕ ಮಟ್ಟದಲ್ಲೂ ಮನ್ನಣೆ ಗಳಿಸಿದೆ. 2025 ರಲ್ಲಿ, ಈ ಕಾರ್ಯಕ್ರಮವು ಮೂರು ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇದರಲ್ಲಿ ಈವೆಂಟ್ ಅವಾರ್ಡ್ – ಹ್ಯಾಕಥಾನ್ ವಿಭಾಗದಲ್ಲಿ ಗೋಲ್ಡ್ ಸ್ಟೀವಿ® ಪ್ರಶಸ್ತಿ, ಜಾಗತಿಕ ಸಹಯೋಗದ ಸಾಧನೆಗಾಗಿ ಬ್ರಾಂಜ್ ಸ್ಟೀವಿ® ಪ್ರಶಸ್ತಿ ಮತ್ತು ಸರ್ವಿಸ್ ಹಾಗೂ ಸೊಲ್ಯೂಷನ್ ವಿಭಾಗದಲ್ಲಿ ಅಂತರರಾಷ್ಟ್ರೀಯ ಆವಿಷ್ಕಾರ ಪ್ರಶಸ್ತಿ ಸೇರಿವೆ. ಭೌಗೋಳಿಕ ಗಡಿಗಳನ್ನು ಮೀರಿ ಪ್ರತಿಭೆ, ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಒಟ್ಟುಗೂಡಿಸಿ, ಸಹಯೋಗದ ಮೂಲಕ ಸಂಕೀರ್ಣ ವ್ಯವಹಾರದ ಸವಾಲುಗಳನ್ನು ಯಶಸ್ವಿಯಾಗಿ ಪರಿಹರಿಸಿದ್ದಕ್ಕಾಗಿ ಈ ಗೌರವಗಳನ್ನು ನೀಡಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.newsKalahamsa Infotech private limited

Tags: ABB Accelerator ProgramABB Innovation CenterBENGALURUKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaಬೆಂಗಳೂರು
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

HERO MOTOCORP ANNOUNCES RS 3200+ CRORE INVESTMENT IN ANDHRA PRADESH

Next Post

‘Sparkle Like No Other’ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ ವಜ್ರ ಮಾರುಕಟ್ಟೆಗೆ

kalpa News

kalpa News

Next Post
‘Sparkle Like No Other’ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ ವಜ್ರ ಮಾರುಕಟ್ಟೆಗೆ

'Sparkle Like No Other' ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ ವಜ್ರ ಮಾರುಕಟ್ಟೆಗೆ

Leave a Reply Cancel reply

Your email address will not be published. Required fields are marked *

No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL