ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ನಗರದ ಈಜುಕೊಳ ಬಡಾವಣೆಯ ಸುಧೀಂದ್ರನಗರದ 6ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ‘ಕಲಿಯುಗದ ಕಾಮಧೇನು’ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವನ್ನು ಆ.19ರಿಂದ ಸೆಪ್ಟೆಂಬರ್ 1ರವರೆಗೆ ಆಯೋಜಿಸಲಾಗಿದೆ.
ಆಗಸ್ಟ್ 19: ಶ್ರೀಮನ್ಮಾಧವತೀರ್ಥ ಮಠಾಧೀಶರಾದ ಶ್ರೀ 1008 ಶ್ರೀ ವಿದ್ಯಾವಲ್ಲಭಮಾಧವತೀರ್ಥ ಶ್ರೀ ಪಾದಂಗಳವರಿಂದ ಸಮಾರಂಭದ ಉದ್ಘಾಟನೆ ಮತ್ತು ಅನುಗ್ರಹ ಸಂದೇಶ.
ಭಜನಾ ಕಾರ್ಯಕ್ರಮ : ಪ್ರತಿದಿನ ಸಂಜೆ 5-30ಕ್ಕೆ ವಿವಿಧ ಭಜನಾ ಮಂಡಲಿಗಳ ಸದಸ್ಯರಿಂದ “ಹರಿ ಭಜನೆ”
ಸಾಂಸ್ಕೃತಿಕ ಕಾರ್ಯಕ್ರಮಗಳು (ಪ್ರತಿದಿನ ಸಂಜೆ 6-30ಕ್ಕೆ) ಆಗಸ್ಟ್ 20-ಕೆ.ಪಿ. ಶಿಶಿರ್ ಮತ್ತು ಸಂಗಡಿಗರಿಂದ “ಹರಿದಾಸ ವರ್ಷಿಣಿ”.
- ಆಗಸ್ಟ್ 21: ಪ್ರಾಣೇಶ್ ಪಿ. ಭಾರಧ್ವಾಜ್ ಮತ್ತು ಸಂಗಡಿಗರಿಂದ “ಹರಿದಾಸ ವೈಭವ”,
- ಆಗಸ್ಟ್ 22: ಡಾ. ಮಾಲಿನಿ ರವಿಶಂಕರ್ ಶಿಷ್ಯೆಯರಾದ ಕು. ಶ್ರೇಯಾ ಮತ್ತು ಕು. ಮಂದಾರ ಇವರಿಂದ “ಭರತನಾಟ್ಯ ಪ್ರದರ್ಶನ”.
- ಆಗಸ್ಟ್ 23: ಮಾನಸಾ ಕುಲಕರ್ಣಿ, ಶ್ರೀಮತಿ ಸುಮಲತಾ ಮಂಜುನಾಥ್ ಮತ್ತು ಸಂಗಡಿಗರಿಂದ “ಹರಿದಾಸ ಮಂಜರಿ”.
- ಆಗಸ್ಟ್ 24: ಕು. ನಿರೀಕ್ಷ ಎಂ. ರಾವ್ ಮತ್ತು ಸಂಗಡಿಗರಿಂದ “ಹರಿದಾಸ ಝೇಂಕಾರ”.
- ಆಗಸ್ಟ್ 25: ಕು. ಸ್ಫೂರ್ತಿ ಗುರುಪ್ರಸಾದ್ ಮತ್ತು ಸಂಗಡಿಗರಿಂದ “ವೀಣಾ ವಾದನ).
- ಆಗಸ್ಟ್ 26: ಸುಶ್ರುತ್ ರಾವ್ ಮತ್ತು ಸಂಗಡಿಗರಿಂದ “ಹರಿದಾಸ ನಮನ”.

ಧಾರ್ಮಿಕ ಪ್ರವಚನ ಕಾರ್ಯಕ್ರಮ
- ಆಗಸ್ಟ್ 27: ವೇಣುಗೋಪಾಲಾಚಾರ್ ಅಗ್ನಿಹೋತ್ರಿ
- ಆಗಸ್ಟ್ 28: ವೆಂಕಟನರಸಿಂಹಾಚಾರ್
- ಆಗಸ್ಟ್ 29: ಮರುತಾಚಾರ್ ,
- ಆಗಸ್ಟ್ 29: ಮಾಳಗಿ ಆನಂದತೀರ್ಥಾಚಾರ್,
- ಆಗಸ್ಟ್ 30: ಶ್ರೀ ದ್ವೈಪಾಯನಾಚಾರ್,
- ಆಗಸ್ಟ್ 31: ಶ್ರೀಕಲ್ಯಾ ಶ್ರೀಕಾಂತಾಚಾರ್ ಇವರುಗಳು ಪ್ರವಚನ ನೀಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









