No Result
View All Result
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ
English Articles

Ramachandrapura Seer Hails PM Narendra Modi’s Leadership

by ಕಲ್ಪ ನ್ಯೂಸ್
June 10, 2026
0

Kalpa Media House  |  Honavar/Sagara  | Jagadguru Shankaracharya Sri Raghaveshwara Bharathi Mahaswamiji of Ramachandrapura Math has extended his congratulations to...

Read moreDetails
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

June 9, 2026
ಸಾಗರ | ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು ಕಚ್ಚಿ ಸಾವು

18-Month-Old Girl Dies After Falling Into Water Tank in Bagalkot

June 9, 2026
2025–26ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಗಳಿಸಿದ ಒಟ್ಟು ಆದಾಯವೆಷ್ಟು ಗೊತ್ತಾ?

ILCAD 2026 Observed in Mysuru Division; SWR Promotes Level Crossing Safety

June 9, 2026
ಬೆಂಗಳೂರು–ತುಮಕೂರು ರೈಲು ಮಾರ್ಗದ ವಿದ್ಯುತ್ ವ್ಯವಸ್ಥೆ ಮೇಲ್ದರ್ಜೆಗೆ | ₹162.57 ಕೋಟಿ ಅನುಮೋದನೆ

Indian Railways Sanctions ₹162.57 Crore Upgrade for Bengaluru–Tumakuru Rail Section

June 9, 2026
  • Advertise With Us
  • Grievances
  • About Us
  • Contact Us
Thursday, June 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ‘ಬೆಂಗಳೂರಿಗೆ ಶರಾವತಿ ಬೇಡ’ ಪತ್ರ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 23, 2019
in Special Articles
0
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ‘ಬೆಂಗಳೂರಿಗೆ ಶರಾವತಿ ಬೇಡ’ ಪತ್ರ
Share on FacebookShare on TwitterShare on WhatsApp

ಶರಾವತಿ ನೀರನ್ನು ರಾಜಧಾನಿ ಬೆಂಗಳೂರಿಗೆ ಕೊಂಡೊಯ್ಯುವ ಚಿಂತನೆ ನಡೆಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮಲೆನಾಡಿನಾದ್ಯಂತ ತೀವ್ರ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗಿದೆ.

ಯಾವುದೇ ಕಾರಣಕ್ಕೂ ಮಲೆನಾಡಿನಿಂದ ಶರಾವತಿ ನದಿ ನೀರನ್ನು ಕೊಂಡೊಯ್ಯಲು ಬಿಡುವುದಿಲ್ಲ ಎಂದು ಮಲೆನಾಡಿಗರು ರಾಜ್ಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಈ ಕುರಿತಂತೆ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವೈರಲ್ ಆಗಿದೆ. ಆ ಪತ್ರದ ಯಥಾವತ್ ಈ ಕೆಳಗಿನಂತಿದೆ.

ಬೆಂಗಳೂರಿಗೆ ಶರಾವತಿ ಬೇಡ…

ಬೆಂಗಳೂರು ಬೆಳವಣಿಗೆಗೆ ಕಡಿವಾಣ ಹಾಕಿ, ಸಾಗರ, ಶಿರಸಿ ಶಿವಮೊಗ್ಗ ಅಭಿವೃದ್ಧಿ ಪಡಿಸಿ.

ಸಮುದ್ರಮಟ್ಟದಿಂದ ಲಿಂಗನಮಕ್ಕಿ ಎತ್ತರ ಪೂರ್ಣ ತುಂಬಿದಾಗ 1819 ಅಡಿ. ಹಾಗಾಗಿ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರನ್ನು ಒಯ್ಯುವುದಾದರೆ ಕನಿಷ್ಠ 1650 ಅಡಿಗಳ ಮಟ್ಟದಿಂದ ಅಥವಾ ಕಾರ್ಗಲ್ ಡ್ಯಾಮಿನಿಂದ ಪೈಪ್ ಲೈನ್ ಅಳವಡಿಸಬೇಕು. ಸಮುದ್ರಮಟ್ಟದಿಂದ ಬೆಂಗಳೂರಿನ ಸರಾಸರಿ ಎತ್ತರ 3000 ಅಡಿಯಾದರೆ, ಬೆಂಗಳೂರಿನ ಅತ್ಯಂತ ಎತ್ತರದ ದೊಡ್ಡಬೆಟ್ಟಹಳ್ಳಿ ಇರುವುದು 3150 ಅಡಿಯಷ್ಟು ಎತ್ತರದಲ್ಲಿ. ಅಂದರೆ ಬೆಂಗಳೂರಿಗೆ ನೀರೊಯ್ಯಲು ಶರಾವತಿಯಿಂದ ಹೆಚ್ಚುಕಡಿಮೆ ಅದನ್ನು 1500 ಅಡಿ ಎತ್ತಬೇಕು. ಕೇವಲ ಅಷ್ಟು ಎತ್ತರಕ್ಕೆ ಎತ್ತುವುದಷ್ಟೇ ಅಲ್ಲ ಅದನ್ನು 400 ಕಿಲೋಮೀಟರ್ ದೂರಕ್ಕೆ ತಳ್ಳಬೇಕು.

ಈಗ ಶರಾವತಿಯ ಟರ್ಬೈನುಗಳು ಡಿಸೈನ್ ಆಗಿರುವ ಗ್ರಾಸ್ ಹೆಡ್ (ಎತ್ತರದ ಅಂತರ) ಸುಮಾರು 1525 ಅಡಿ. ಈ ಹೆಡ್ ಬಳಸಿಕೊಂಡು ಅಲ್ಲಿ ಒಂದು ಮೆಗಾವಾಟ್ ಉತ್ಪಾದಿಸಲು ಸರಿಸುಮಾರು 10 ಕ್ಯೂಸೆಕ್ಸ್ ನೀರು ಬೇಕು.

ಅಂದರೆ ಬೆಂಗಳೂರಿಗೆ ಒಯ್ಯಲು ಕೇವಲ ನೀರೆತ್ತುವುದಕ್ಕೇ ಶರಾವತಿಯಲ್ಲಿ ಉತ್ಪಾದನೆಯಾಗುವಷ್ಟೇ ಪ್ರಮಾಣದ ವಿದ್ಯುಚ್ಛಕ್ತಿ ಬೇಕು. ಇನ್ನು ಅದನ್ನು 400 ಕಿಲೋಮೀಟರ್ ತಳ್ಳಲು?

ಜೊತೆಗೆ ಎಂತಹ ಗುಣಮಟ್ಟದ ಯಾವುದೇ ಪಂಪ್ ನೂರಕ್ಕೆ ನೂರರಷ್ಟು ಕಾರ್ಯಕ್ಷಮತೆ ಹೊಂದಿರುವುದು ಸಾಧ್ಯವಿಲ್ಲ. ಹಾಗಾಗಿ ಅದರಲ್ಲಿ ವ್ಯರ್ಥವಾಗುವ ವಿದ್ಯುತ್ ಪ್ರಮಾಣವನ್ನೂ ಲೆಕ್ಕಹಾಕಬೇಕು.

ಈ ಲೆಕ್ಕಾಚಾರದಲ್ಲಿ ಶರಾವತಿಯಿಂದ ಬೆಂಗಳೂರಿಗೆ ಪ್ರತಿ ಕ್ಯೂಸೆಕ್ಸ್ ನೀರೊಯ್ಯಲು ಅದೇ ನೀರಿನಿಂದ ಶರಾವತಿಯಲ್ಲಿ ಉತ್ಪಾದನೆಯಾಗುವ ಪ್ರಮಾಣದ ಒಂದೂವರೆ ಪಟ್ಟು ವಿದ್ಯುತ್ ( ಕನಿಷ್ಠ ಅಂದಾಜು) ಬೇಕಾಗುತ್ತದೆ. 

ಇನ್ನು ಇದರಲ್ಲಿ ನೀರು ಮತ್ತು ವಿದ್ಯುತ್ ಸೋರಿಕೆಯ ಲೆಕ್ಕ ಸೇರಿಸಿಲ್ಲ.  ಇಷ್ಟೆಲ್ಲ ದ್ರಾವಿಡ ಪ್ರಾಣಾಯಾಮದ ಮೂಲಕ ಬೆಂಗಳೂರಿಗೆ ನೀರೊಯ್ಯುವ ಬದಲು ಬೆಂಗಳೂರನ್ನೇ ಯಾಕೆ ಸಾಗರ, ಶಿರಸಿ, ಶಿವಮೊಗ್ಗಗಳಿಗೆ ತರಬಾರದು?

ಏನು ಬೆಂಗಳೂರನ್ನೇ ಸ್ಥಳಾಂತರಿಸುವುದೇ? ಇದೆಂತಹ ಹುಚ್ಚು ಪ್ರಶ್ನೆ ಎನ್ನಬಹುದು. ಆದರೆ ಇದು ಹುಚ್ಚೂ ಅಲ್ಲ, ಮಳ್ಳೂ ಅಲ್ಲ. ಇಡೀ ಕರ್ನಾಟಕದಲ್ಲಿ , ತಮಿಳು ಮತ್ತು ತೆಲುಗರಿಗೆ ಹತ್ತಿರವಾದ ಬೆಂಗಳೂರೊಂದನ್ನೇ ಬೆಳೆಸುವ ಬದಲು ಕನ್ನಡ ನಾಡಿನ ಒಡಲೊಳಗೆ ಹುದುಗಿರುವ ಶಿವಮೊಗ್ಗ ಸಾಗರ ಶಿರಸಿಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಗೆ ಯಾಕೆ ಒಳಪಡಿಸಬಾರದು. ಶಿವಮೊಗ್ಗೆ ಮತ್ತು ಕಾರವಾರಗಳಲ್ಲಿ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಿ ಬೆಂಗಳೂರಿನ ಐ ಟಿ ಇಂಡಸ್ಟ್ರಿಗಳನ್ನು ಶಿವಮೊಗ್ಗ ಶಿರಸಿ ಸಾಗರಗಳಿಗೆ ಶಿಫ್ಟ್ ಮಾಡಿಸಬಾರದು?

ಇದರಿಂದ ಇನ್ನೊಂದು ಅನುಕೂಲವೂ ಉಂಟು. ಹೇಗೂ ಬೆಂಗಳೂರಿನಲ್ಲಿ ಮಲೆನಾಡಿನ ಈ ಪ್ರಾಂತ್ಯಗಳಿಂದ ಮನೆಗೊಬ್ಬರು, ಇಬ್ಬರು ದುಡಿಮೆಯಲ್ಲಿ ಇದ್ದೇ ಇದ್ದಾರೆ. ಅವರು ಮಲೆನಾಡಿನ ತೋಟ ಗದ್ದೆಗಳ ಅಂಚಿನಲ್ಲಿರುವ ಒಂಟಿ ಹಳ್ಳಿಗಳಲ್ಲಿ ವೃದ್ಧ ತಂದೆತಾಯಿಗಳನ್ನು ಬಿಟ್ಟು ಬೆಂಗಳೂರಿನಲ್ಲಿ ಪರಿತಪಿಸುವ ಬದಲು ತಮ್ಮೂರಿನಲ್ಲೇ ಇದ್ದು, ನೌಕರಿಗಳನ್ನೂ ಮಾಡಿಕೊಂಡು, ತಂದೆತಾಯಿಯರನ್ನೂ ನೋಡಿಕೊಂಡು , ತೋಟ ಗದ್ದೆಗಳನ್ನೂ ಅಭಿವೃದ್ಧಿ ಪಡಿಸಿಕೊಂಡು ನೆಮ್ಮದಿಯ ಬದುಕನ್ನು ಬಾಳುವಂತಾಗುತ್ತದೆ. ಬೆಂಗಳೂರಿನ ಜನಸಂಖ್ಯೆಯೂ ತಗ್ಗಿ, ಟ್ರಾಫಿಕ್ ಜಾಮ್, ನೀರಡಿಕೆ, ಕಸದ ಸಮಸ್ಯೆ, ಪರಿಸರ ಮಾಲಿನ್ಯಗಳೂ ನಿಯಂತ್ರಣಕ್ಕೆ ಸಿಕ್ಕೀತಲ್ಲವೇ? ಪ್ರತಿವಾರ ಬೆಂಗಳೂರಿನಿಂದ ಸಾಗರ, ಶಿವಮೊಗ್ಗ ಶಿರಸಿಗಳಿಗೆ ಪ್ರಯಾಣಮಾಡುವವರ ಸಂಖ್ಯೆಯೂ ತಗ್ಗಿ ಉಳಿದವರಿಗೂ ಸುಖವಾಗುವುದಲ್ಲವೇ?

ಈಗ ಎಲ್ಲೆಡೆಯೂ ಇಂಟರ್ನೆಟ್ ಸೌಲಭ್ಯ ಇರುವುದರಿಂದ ಮಲೆನಾಡಿನ ಮಕ್ಕಳು ಮನೆಯಿಂದಲೇ ( ವರ್ಕ್ ಫ್ರಮ್ ಹೋಮ್) ಸೌಲಭ್ಯದಿಂದ ಹಳ್ಳಿಗಳಿಂದಲೇ ಕೆಲಸ ಮಾಡಬಹುದಲ್ಲವೇ? ಇದಾಗಬೇಕೆಂದರೆ ಎಲ್ಲ ಮೂಲಸೌಕರ್ಯಗಳನ್ನೂ ತಾನೊಂದೇ ನುಂಗುವ ಬೆಂಗಳೂರಿನ ಬೆಳವಣಿಗೆಗೆ ತಡೆಯೊಡ್ಡಬೇಕು.‌ ಅಲ್ಲಿಂದ ಕೈಗಾರಿಕೆಗಳನ್ನು ವಿಕೇಂದ್ರೀಕರಣಕ್ಕೊಳಪಡಿಸಿ, ಅದನ್ನು ಕೇವಲ ಸಾಗರ ಶಿವಮೊಗ್ಗವಷ್ಟೇ ಅಲ್ಲ ಶಿರಸಿ, ಕಾರವಾರ, ಚಿಕ್ಕಮಗಳೂರಿಗೆ ವರ್ಗಾಯಿಸಿ. ಆ ಊರುಗಳ ಮೂಲಸೌಕರ್ಯಗಳಿಗೆ ಒತ್ತು ಕೊಡಿ. ಇದರಿಂದ ಎನರ್ಜಿ ಉಳಿಯುತ್ತದೆ. ಪರಿಸರ ಉಳಿಯುತ್ತದೆ. ಎಷ್ಟೋ ವೃದ್ಧರ ಬದುಕು ಉಳಿಯುತ್ತದೆ.

Tags: BENGALURUKannada NewsLatterMalnad NewsSharavati RiverShivamoggaSocial mediaಬೆಂಗಳೂರುಮಲೆನಾಡುವಿದ್ಯುಚ್ಛಕ್ತಿಶರಾವತಿ ನದಿಶಿವಮೊಗ್ಗಸೋಷಿಯಲ್ ಮೀಡಿಯಾ
Share196Tweet123Send
Previous Post

ಯಕ್ಷಲೋಕದ ಉದಯೋನ್ಮುಖ ಕೀರ್ತಿ ಕಿರೀಟ ಸೀತಾನದಿ ತಟದ ಈ ಕಿರಾಡಿ ಪ್ರಕಾಶ್ ಮೊಗವೀರ

Next Post

ಗೋವು ಕಳವು ಪ್ರಕರಣ: ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸ್ಥಳ ಪರಿಶೀಲನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಗೋವು ಕಳವು ಪ್ರಕರಣ: ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸ್ಥಳ ಪರಿಶೀಲನೆ

ಗೋವು ಕಳವು ಪ್ರಕರಣ: ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸ್ಥಳ ಪರಿಶೀಲನೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿಕಾರಿಪುರ ಮನೆಕಳ್ಳತನ ಪ್ರಕರಣ ಭೇದ: ಆರೋಪಿಯ ಬಂಧನ, ಚಿನ್ನ–ನಗದು ವಶ

ಶಿಕಾರಿಪುರ ಮನೆಕಳ್ಳತನ ಪ್ರಕರಣ ಭೇದ: ಆರೋಪಿಯ ಬಂಧನ, ಚಿನ್ನ–ನಗದು ವಶ

June 11, 2026
ಜೂನ್ 14ರಂದು ಜೆಎನ್‌ಎನ್‌ಸಿಇನಲ್ಲಿ ಸಿಇಟಿ/ಕಾಮೆಡ್-ಕೆ ಸೀಟು ಆಯ್ಕೆ ಸಂವಾದ

ಜೂನ್ 14ರಂದು ಜೆಎನ್‌ಎನ್‌ಸಿಇನಲ್ಲಿ ಸಿಇಟಿ/ಕಾಮೆಡ್-ಕೆ ಸೀಟು ಆಯ್ಕೆ ಸಂವಾದ

June 11, 2026
ಯುವಜನತೆ ಜಾಗೃತರಾದರೆ ಮಾತ್ರ ನಶೆಮುಕ್ತ ಸಮಾಜ ಸಾಧ್ಯ

ಯುವಜನತೆ ಜಾಗೃತರಾದರೆ ಮಾತ್ರ ನಶೆಮುಕ್ತ ಸಮಾಜ ಸಾಧ್ಯ

June 11, 2026
ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ | ಡಿಸಿ ಆದೇಶ | ಪರ್ಯಾಯ ಮಾರ್ಗ ಇಲ್ಲಿದೆ?

ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ | ಡಿಸಿ ಆದೇಶ | ಪರ್ಯಾಯ ಮಾರ್ಗ ಇಲ್ಲಿದೆ?

June 11, 2026
ಹುಬ್ಬಳ್ಳಿ ರೈಲು ಮ್ಯೂಸಿಯಂನಲ್ಲಿ ಡಿಜಿಟಲ್ QR ಪಾವತಿ ಸೌಲಭ್ಯ ಆರಂಭ

ಹುಬ್ಬಳ್ಳಿ ರೈಲು ಮ್ಯೂಸಿಯಂನಲ್ಲಿ ಡಿಜಿಟಲ್ QR ಪಾವತಿ ಸೌಲಭ್ಯ ಆರಂಭ

June 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL