ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮುಂಬರುವ ಓಣಂ ಹಬ್ಬದ (Onam Festival) ಹಿನ್ನೆಲೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ದಕ್ಷಿಣ ರೈಲ್ವೆ (Southern Railway) ಎರ್ನಾಕುಳಂ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು ನಡುವೆ ವಿಶೇಷ ವಾರಂತ್ಯ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ಘೋಷಿಸಿದೆ.
ಈ ಸೇವೆ ಎರಡೂ ದಿಕ್ಕುಗಳಲ್ಲಿ ತಲಾ 5 ಪ್ರಯಾಣಗಳನ್ನು ನಡೆಸಲಿದೆ.
ರೈಲು ಸಂಖ್ಯೆ 06147 ಎರ್ನಾಕುಳಂ–SMVT ಬೆಂಗಳೂರು ವಾರಂತ್ಯ ವಿಶೇಷ ಎಕ್ಸ್ಪ್ರೆಸ್ ಪ್ರತಿ ಭಾನುವಾರ ರಾತ್ರಿ 11:10ಕ್ಕೆ 09.08.2026ರಿಂದ 06.09.2026ರವರೆಗೆ ಎರ್ನಾಕುಳಂನಿಂದ ಹೊರಟು, ಮುಂದಿನ ದಿನ ಮಧ್ಯಾಹ್ನ 12:45ಕ್ಕೆ SMVT ಬೆಂಗಳೂರು ತಲುಪಲಿದೆ.
ಹಿಂತಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 06148 SMVT ಬೆಂಗಳೂರು–ಎರ್ನಾಕುಳಂ ವಾರಂತ್ಯ ವಿಶೇಷ ಎಕ್ಸ್ಪ್ರೆಸ್ ಪ್ರತಿ ಸೋಮವಾರ ಸಂಜೆ 4:00ಕ್ಕೆ 10.08.2026ರಿಂದ 07.09.2026ರವರೆಗೆ SMVT ಬೆಂಗಳೂರಿನಿಂದ ಹೊರಟು, ಮುಂದಿನ ದಿನ ಬೆಳಗ್ಗೆ 5:45ಕ್ಕೆ ಎರ್ನಾಕುಳಂ ತಲುಪಲಿದೆ.
Also read: ಸ್ತ್ರೀ ಸಂವೇದನೆಗೆ ಅಂತರಾಳದ ಕಾಳಜಿ ಅಗತ್ಯ: ನಾಗರಾಜ ಅಭಿಪ್ರಾಯ
ಮಾರ್ಗ ಮಧ್ಯೆ ಈ ವಿಶೇಷ ರೈಲುಗಳು ಅಲುವಾ, ತ್ರಿಶೂರು, ಪಳಕ್ಕಾಡ್ ಜಂಕ್ಷನ್, ಪೊಡನೂರು ಜಂಕ್ಷನ್, ತಿರುಪ್ಪೂರು, ಇರೋಡ್ ಜಂಕ್ಷನ್, ಸೇಲಂ ಜಂಕ್ಷನ್, ಕುಪ್ಪಂ, ಬಂಗಾರಪೇಟೆ ಜಂಕ್ಷನ್ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತವೆ.
ಈ ವಿಶೇಷ ರೈಲುಗಳು ಒಟ್ಟು 22 ಎಲ್ಎಚ್ಬಿ (LHB) ಬೋಗಿಗಳನ್ನು ಹೊಂದಿದ್ದು, 2 ಎಸಿ ಟು ಟಿಯರ್ ಕೋಚ್ಗಳು, 3 ಎಸಿ ತ್ರಿ ಟಿಯರ್ ಕೋಚ್ಗಳು, 7 ಎಸಿ ತ್ರಿ ಟಿಯರ್ ಎಕಾನಮಿ ಕೋಚ್ಗಳು, 4 ಸ್ಲೀಪರ್ ಕ್ಲಾಸ್ ಬೋಗಿಗಳು, 4 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು ಹಾಗೂ 2 ಲಗೇಜ್-ಕಮ್-ಬ್ರೇಕ್/ಜನರೇಟರ್ ವ್ಯಾನ್ಗಳನ್ನು ಒಳಗೊಂಡಿರುತ್ತವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









