ಕಲ್ಪ ಮೀಡಿಯಾ ಹೌಸ್ | ಮೈಸೂರು |
ಆರೋಗ್ಯ ಪಾಲನೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು (Mysuru) ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಹೇಳಿದರು.
ನಗರದ ಟಿ.ಕೆ. ಬಡಾವಣೆಯ ರಾಯರ ಮಠದ ಸಾಮಾಜಿಕ ಸೇವಾ ಕಾರ್ಯಕ್ರಮದ ಅಂಗವಾಗಿ ಕಲ್ಪವೃಕ್ಷ ಪ್ರಾರ್ಥನಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Also Read>> Shivamogga | ಪ್ರಧಾನ್ ರಾಜೀನಾಮೆ ಬಗ್ಗೆ ಈಶ್ವರಪ್ಪ ಹೇಳಿದ್ದೇನು?
ರಾಘವೇಂದ್ರ ಸ್ವಾಮಿಗಳು ಎಲ್ಲಾ ಸಮುದಾಯಗಳಿಂದಲೂ ಪೂಜಿತರು. ಅವರ ಕೃಪೆಯಿಂದ ಅನೇಕರಿಗೆ ಅನುಗ್ರಹವಾಗಿದೆ. ಅವರ ಸನ್ನಿಧಾನದಲ್ಲಿ ಆರೋಗ್ಯ ಭಾಗ್ಯವನ್ನು ನೀಡುವ ಉಚಿತ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ರಾಘವೇಂದ್ರ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಹಾಗೂ ಹಿರಿಯ ವಕೀಲ ಕೆ.ಆರ್. ಶಿವಶಂಕರ್ ಮಾತನಾಡಿ, ಸೇವಾ ಮನೋಭಾವದಿಂದ ನಡೆಯುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಬಹಳ ಉಪಯುಕ್ತವಾಗುತ್ತವೆ ಎಂದರು. ಪ್ರತಿವರ್ಷವೂ ರಾಯರ ಮಠದಲ್ಲಿ ಆರೋಗ್ಯ ಸಂಬಂಧಿ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ನೂರಾರು ಜನರ ಆರೋಗ್ಯ ಸುಧಾರಣೆಗೆ ಇದು ಸಹಕಾರಿಯಾಗಿದೆ ಎಂದು ಹೇಳಿದರು.
ಡಿ.ಆರ್.ಎಂ. ಆಸ್ಪತ್ರೆಯ ತಜ್ಞರಾದ ಡಾ. ಜೆ.ಎನ್. ಮಂಜುನಾಥ್, ಡಾ. ಸಹನಾ, ಮಠದ ಸೇವಾ ಟ್ರಸ್ಟ್ ಅಧ್ಯಕ್ಷ ಜಯರಾಂ, ಟ್ರಸ್ಟಿಗಳಾದ ವೇಣುಗೋಪಾಲ್, ರಾಜಾರಾಂ, ಎಚ್.ಎನ್. ಚಂದ್ರಶೇಖರ್, ನಾಗರಾಜ್, ಮುಕುಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ 12 ಮಂದಿ ತಜ್ಞ ವೈದ್ಯರು ಅತ್ಯಾಧುನಿಕ ಸಾಧನಗಳ ಸಹಾಯದಿಂದ ನೂರಾರು ಜನರಿಗೆ ತಪಾಸಣೆ ನಡೆಸಿ, ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್, ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಕರ್ನಾಟಕ ವಿಪ್ರ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಹೃದಯ ತಪಾಸಣೆ, ಕೀಲು ಹಾಗೂ ಮಂಡಿ ನೋವಿನ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
Mysuru | Free Health Check-up Camp Inaugurated
District Brahmin Association President D.T. Prakash emphasised that everyone should give priority to maintaining good health.
He was speaking after inaugurating a free health check-up camp for heart screening, joint, and knee pain, organised for the public on Sunday at Kalpavruksha Prayer Hall in Rayara Matha, located in T.K. Layout. The camp was held under the joint aegis of Sri Guru Raghavendra Seva Trust, District Brahmin Association, and Karnataka Vipra Advocates Association as part of a social service initiative.
He said that Raghavendra Swamiji is revered by people of all communities and has blessed many devotees. Organising such a free health camp in his divine presence to promote good health is commendable.
Speaking on the occasion, K.R. Shivashankar, Executive President of Raghavendra Seva Trust and a senior advocate, said that programmes conducted with a spirit of service greatly benefit society. He noted that health-related activities are organised every year at Rayara Matha, contributing to the well-being of hundreds of people.
Specialists from DRM Hospital, including Dr. J.N. Manjunath and Dr. Sahana, along with Seva Trust President Jayaram, trustees Venugopal, Rajaram, H.N. Chandrashekar, Nagaraj, Mukunda, and others were present.
As many as 12 expert doctors conducted check-ups for hundreds of people using advanced equipment and provided necessary advice and guidance.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








