No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Thursday, April 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ವಿಶ್ವಕಂಡ ಬಹುದೊಡ್ಡ ಶಿವಶರಣೆ ಅಕ್ಕಮಹಾದೇವಿ ಜೀವನ ಮೌಲ್ಯ ಆದರ್ಶವಾಗಲಿ | ಡಾ.ಸೋಮಶೇಖರ್

ಶಿಕಾರಿಪುರ | ಮೈತ್ರಾದೇವಿ ಯಡಿಯೂರಪ್ಪ ದತ್ತಿ ಕಾರ್ಯಕ್ರಮ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 5, 2025
in Small Bytes, ಶಿಕಾರಿಪುರ
0
ವಿಶ್ವಕಂಡ ಬಹುದೊಡ್ಡ ಶಿವಶರಣೆ ಅಕ್ಕಮಹಾದೇವಿ ಜೀವನ ಮೌಲ್ಯ ಆದರ್ಶವಾಗಲಿ | ಡಾ.ಸೋಮಶೇಖರ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  |

ವಿಶ್ವ ಕಂಡ ಬಹುದೊಡ್ಡ ಶಿವಶರಣೆ ಬದುಕಿನ ಮೌಲ್ಯಗಳನ್ನು ಜೀವನದಲ್ಲಿ ಆದರ್ಶವಾಗಿಟ್ಟುಕೊಂಡು ಸಾಗಿದ ಮಹಾನ್ ಚಿಂತಕಿ ಅಕ್ಕಮಹಾದೇವಿ #Akkamahadevi ಅವರ ಜೀವನ ಮೌಲ್ಯಗಳು ಎಲ್ಲರಿಗೂ ಆದರ್ಶವಾಗಲಿ ಎಂದು ನಿವೃತ್ತ ಐಎಎಸ್ ಅಧಿಕಾರಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಬೆಂಗಳೂರು ಅಧ್ಯಕ್ಷರಾದ ಡಾ.ಸಿ. ಸೋಮಶೇಖರ್ ಕರೆ ನೀಡಿದರು.

ಮೈಸೂರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಶಿಕಾರಿಪುರ #Shikaripura ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಶಿಕಾರಿಪುರ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಕುಮದ್ವತಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಶರಣೆ ಮೈತ್ರಾದೇವಿ ಬಿ.ಎಸ್. ಯಡಿಯೂರಪ್ಪ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Also Read>> ಮಾರ್ಚ್ 6 | ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಜೆಡಿಎಸ್ ಬೃಹತ್ ಪ್ರತಿಭಟನೆ

ವಿಶ್ವ ಕಂಡ ಬಹುದೊಡ್ಡ ಶಿವಶರಣೆ ಬದುಕಿನ ಮೌಲ್ಯಗಳನ್ನು ಜೀವನದಲ್ಲಿ ಆದರ್ಶವಾಗಿಟ್ಟುಕೊಂಡು ಸಾಗಿದ ಮಹಾನ್ ಚಿಂತಕಿ ಅಕ್ಕಮಹಾದೇವಿ. 12ನೇ ಶತಮಾನದಲ್ಲಿ ಪುರುಷ ಸಮಾಜದ ಅಸಮಾನತೆಯ ವಿರುದ್ಧ ಜನಮಾನಸದಲ್ಲಿ ಆಂದೋಲನವನ್ನು ನಡೆಸಿದ ಅಕ್ಕ ಬದುಕಿದ ಜೀವನವೇ ಒಂದು ಮಹಾನ್ ಪವಾಡ ಎಂದು ಆಶಿಸಿದರು.
ಜೀವನದಲ್ಲಿ ದೈಹಿಕ ತೃಷೆಗಾಗಿ ವ್ಯಾಮೋಹಗೊಳ್ಳದೇ, ಜೀವನದ ಮೌಲ್ಯಗಳೊಂದಿಗೆ ಆದರ್ಶಗಳನ್ನು ಇಟ್ಟುಕೊಂಡು ಬೆಳೆದವರು ಅಕ್ಕ. ಪ್ರಕೃತಿಯೊಂದಿಗೆ ಅನುಸಂಧಾನವನ್ನು ಮಾಡಿಕೊಳ್ಳುತ್ತಾ, ತನ್ನ ವಚನದ ಮೂಲಕ ಅತ್ಯಂತ ಕೆಳಮಟ್ಟದ ಜನರ ಹೃದಯವನ್ನು ಮುಟ್ಟುವ ಕೆಲಸ ಮಾಡಿದಳು. ಸ್ಥಿತ ಸಂವೇದನೆಯನ್ನು ಮೊಟ್ಟಮೊದಲು 12ನೇ ಶತಮಾನದಲ್ಲಿ ಹುಟ್ಟು ಹಾಕಿದರೂ 21ನೇ ಶತಮಾನದಲ್ಲಿಂದು ಹೆಮ್ಮರವಾಗಿ ಬೆಳವಣಿಗೆಯಾಗಲು ನಾಂದಿ ಹಾಡಿದವರೇ ಅಕ್ಕಮಹಾದೇವಿ. ತನ್ನ ದೇಹದಿಂದ ಇತರರಿಗೆ ನೋವಾದೀತು ಎಂದು ತನ್ನ ದೇಹವನ್ನು ಕೇಶದಿಂದ ಮುಚ್ಚಿಕೊಳ್ಳುತ್ತಾ ಅನುಭವ ಮಂಟಪದತ್ತ ಸಾಗಿದ ಮಹಾನ್ ತ್ಯಾಗಿ ಐಹಿಕ ಸುಖ-ಬೋಗದಿಂದ ಮುಕ್ತಿಯಾಗಿ, ಚನ್ನಮಲ್ಲಿಕಾರ್ಜುನನೇ ಎನ್ನ ಪತಿ, ದೈವ ಎಂದು ಸಾರುತ್ತಾ ಕೊನೆಗೂ ಅದರಂತೆ ಬದುಕಿದ ವೈರಾಗಿ. ಅಕ್ಕ ಈ ಜಗತ್ತಿಗೆ ಒಂದು ಅಚ್ಚರಿ, ಅದ್ಭುತ, ಆದರ್ಶಗಳನ್ನು ಇಟ್ಟುಕೊಂಡು ನಡೆ-ನುಡಿಗಳಲ್ಲಿ ತಾನೇ ಮುಳುಗಿ ನಡೆದುಕೊಂಡವರು. ನಡೆ-ನುಡಿ, ತನು-ಮನ, ಭಾವ-ಮತಗಳಿಂದ ದೂರವಿದ್ದು ಪಂಚೇಅದ್ರೀಯಗಳ ನಿಗ್ರಹದೊಂದಿಗೆ ಶರಣ ಸತಿ ಲಿಂಗ ಪತಿ’ ಎಂಬ ಮಾತುಗಳಿಗೆ ಸಾಕ್ಷಿಯಾಗಿ ಬದುಕಿ ತೋರಿಸಿದ ಮಹಾನ್ ಚಿಂತಕಿ ಎಂದರು.

ತನು, ಮನ, ಭಾವ ಧ್ವನಿ, ಶೃತಿ ಶುದ್ಧಿಯಾಗಿ ಬದುಕಿದ ಅಕ್ಕ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ, ಪ್ರಪಂಚಕ್ಕೆ ಒಂದು ಹೆಣ್ಣಿಗಿರುವ ಸಮಾನ ಅವಕಾಶಗಳನ್ನು ಪ್ರಚುರಪಡಿಸಿದ ಮಹಾನ್ ಚಿಂತಕಿ. ತನ್ನ ಬದುಕನ್ನೇ ಒಂದು ದಾರಿದೀಪಯಾಗಿಸಿಕೊಂಡು ಬೆಳೆದು ಸಮಾಜಕ್ಕೆ ಆದರ್ಶ ಜೀವನಕ್ಕೆ ಮುನ್ನುಡಿ ಬರೆದವರು ಅಕ್ಕ ನಮ್ಮ ಶಿಕಾರಿಪುರದವಳು ಎಂದು ಹೇಳುವುದೇ ನಮಗೆ ಗರ್ವ, ಶಿಕಾರಿಪುರ ಇಂತಹ ಅನೇಕ ವಚನಕಾರರನ್ನು ಜಗತ್ತಿಗೆ ನೀಡಿ ಅನೇಕರ ಜೀವನಾದರ್ಶಗಳಿಗೆ ಮುನ್ನುಡಿ ಬರೆದದ್ದು ನಮ್ಮ ಶಿಕಾರಿಪುರದವರು, ಜೀವನದಲ್ಲಿ ಗಳಿಸಿದ ಸಂಪಾದನೆಯಲ್ಲಿ ಒಂದು ಭಾಗವನ್ನು ಸಮಾಜಕ್ಕೆ ನೀಡುವ ಮನೋಭಾವವನ್ನು ರೂಢಿಸಿಕೊಳ್ಳೋಣ ನಾವು ಮುಂದಿನ ದಿನಗಳಲ್ಲಿ ಇಂತಹ ಚಿಂತನೆಗಳತ್ತ ಆಲೋಚನೆ ಮಾಡೋಣ ಎಂದು ಆಶಿಸಿದರು.
ಬೆಂಗಳೂರು ದಿಶಾ ಸಮಿತಿ ಸದಸ್ಯರಾದ ಕೆ.ಎಸ್. ಗುರುಮೂರ್ತಿ, ಶಿಕಾರಿಪುರ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಪ್ರತಿನಿಧಿಗಳೂ ಆದ ಡಾ. ಜಿ.ಎಸ್. ಶಿವಕುಮಾರ್, ಮೈಸೂರು ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಗಳಾದ ಸೋಮಶೇಖರ್ ಘಾಂಜಿ ಉಪಸ್ಥಿತರಿದ್ದರು.

Also Read>> ಮಾರ್ಷಲ್ ಆರ್ಟ್ಸ್ | ಪ್ರಣತಿಗೆ ರಾಷ್ಟ್ರಮಟ್ಟದ ಅತಿ ಕಿರಿಯ ವಯಸ್ಸಿನ ಪದಕ ವಿಜೇತೆ ಹೆಗ್ಗಳಿಕೆ

ಶಿವಮೊಗ್ಗ ವಚನ ಮಂಟಪ ಸಂಚಾಲಕರಾದ ಬಸವನಗೌಡ ಮಾಳಗಿ ಅವರು ದತ್ತಿ ದಾನಿಗಳ ಪರಿಚಯ ಮಾಡಿಕೊಟ್ಟರು. ಶರಣ ಸಾಹಿತ್ಯ ಪರಿಷತ್ ಶಿವಮೊಗ್ಗ ಅಧ್ಯಕ್ಷರಾದ ಎಚ್.ಎನ್. ಮಹಾರುದ್ರ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಷ್ಮಾ ದೀಕ್ಷಿತ್ ಮತ್ತು ತಂಡದವರಿAದ ವಚನ ನೃತ್ಯವನ್ನು ಏರ್ಪಡಿಸಲಾಗಿತ್ತು. ಪ್ರಶಿP್ಷÀಣಾರ್ಥಿಗಳಾದ ಎಸ್. ಕಲ್ಪನಾ, ರಕ್ಷಿತಾರು ಅಕ್ಕನ ವಚನಗಳನ್ನು ಹಾಡುವುದರೊಂದಿಗೆ ತಾತ್ಪರ್ಯವನ್ನು ಅರ್ಥೈಸಿದರು.

ಡಿ. ಪ್ರೇಕ್ಷಾ ಹಾಗೂ ತಂಡದವರು ವಚನ ಗಾಯನದ ಪ್ರಾರ್ಥನೆ ಮಾಡಿದರು. ಶರಣ ಸಾಹಿತ್ಯ ಪರಿಷತ್ ಶಿಕಾರಿಪುರ ಅಧ್ಯಕ್ಷ ಎಂ.ಕೆ. ಶಶಿಧರ ಸ್ವಾಮಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಸುಭಾಷ್ ಚಂದ್ರ ಸ್ಥಾನಿಕ್ ವಂದನಾರ್ಪಣೆ ಮಾಡಿದರು. ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆರ್. ಕೋಟೋಜಿರಾವ್ ನಿರೂಪಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

http://kalpa.news/wp-content/uploads/2025/02/Kumadvati-College-Shikaripura-2025-Video.mp4
http://kalpa.news/wp-content/uploads/2024/04/VID-20240426-WA0008.mp4

 

Tags: Kannada News Websitekumadvathi pu college shikaripuraLatest News KannadaLocal NewsMalnad NewsShikaripuraShimogaShivamoggaShivamogga Newsಅಕ್ಕಮಹಾದೇವಿಕುಮದ್ವತಿ ಶಿಕ್ಷಣ ಮಹಾವಿದ್ಯಾಲಯಶರಣ ಸಾಹಿತ್ಯ ಪರಿಷತ್ತುಶಿಕಾರಿಪುರ
Share196Tweet123Send
Previous Post

ಮಾರ್ಚ್ 6 | ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಜೆಡಿಎಸ್ ಬೃಹತ್ ಪ್ರತಿಭಟನೆ

Next Post

ಶಿವಮೊಗ್ಗ | ಮಾರ್ಚ್ 7 | ಬ್ರಾಹ್ಮಿನ್ ಆರ್ಗನೈಸೇಷನ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಉದ್ಘಾಟನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಿವಮೊಗ್ಗ | ಮಾರ್ಚ್ 7 | ಬ್ರಾಹ್ಮಿನ್ ಆರ್ಗನೈಸೇಷನ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಉದ್ಘಾಟನೆ

ಶಿವಮೊಗ್ಗ | ಮಾರ್ಚ್ 7 | ಬ್ರಾಹ್ಮಿನ್ ಆರ್ಗನೈಸೇಷನ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಉದ್ಘಾಟನೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
 ಶಿಕಾರಿಪುರ | ಕುಮದ್ವತಿ ಪ್ರೌಢಶಾಲೆಗೆ ಶೇ.100ರಷ್ಟು ಫಲಿತಾಂಶ

 ಶಿಕಾರಿಪುರ | ಕುಮದ್ವತಿ ಪ್ರೌಢಶಾಲೆಗೆ ಶೇ.100ರಷ್ಟು ಫಲಿತಾಂಶ

April 23, 2026
SSLC Result | ಶೇ. 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ: ಸಚಿವ ಮಧು ಬಂಗಾರಪ್ಪ

SSLC Result | ಶೇ. 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ: ಸಚಿವ ಮಧು ಬಂಗಾರಪ್ಪ

April 23, 2026
An enjoyable concert by an upcoming talent

An enjoyable concert by an upcoming talent

April 23, 2026
ತೀರ್ಥಹಳ್ಳಿ | ವೃದ್ಧೆ ಕೈ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ 18 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ

ತೀರ್ಥಹಳ್ಳಿ | ವೃದ್ಧೆ ಕೈ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ 18 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ

April 23, 2026
ಮೈಸೂರು | ಭಕ್ತಿ ಭಾವದ ಕ್ಷೇತ್ರ-ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರ | 23ರಿಂದ 8ನೇ ವಾರ್ಷಿಕೋತ್ಸವ ಸಂಭ್ರಮ

ಮೈಸೂರು | ಭಕ್ತಿ ಭಾವದ ಕ್ಷೇತ್ರ-ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರ | 23ರಿಂದ 8ನೇ ವಾರ್ಷಿಕೋತ್ಸವ ಸಂಭ್ರಮ

April 22, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL