ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶುಕ್ರವಾರ ಸಂಜೆ ತುಂಗಾ ಚಾನಲ್’ನಲ್ಲಿ ಈಜಲು ತೆರಳಿದ್ದ ಪಾಲಿಕೆ ಸದಸ್ಯೆ ಆರತಿ ಪ್ರಕಾಶ್ ಅವರ ಪುತ್ರನ ಮೃತದೇಹ ಇಂದು ಪತ್ತೆಯಾಗಿದೆ.
ಗೆಳೆಯರ ಜೊತೆ ಈಜಲು ಹೋದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಕೊಚ್ಚಿಹೋಗಿದ್ದ ಯುವಕ ಪ್ರತೀಶ್ ಮೃತದೇಹ ಪತ್ತೆಯಾಗಿದೆ.
ಶಿವಮೊಗ್ಗ ರಾಮಿನಕೊಪ್ಪ ಸಮೀಪದ ಹಾಯ್ ಹೊಳೆ ತುಂಗಾ ಎಡದಂಡೆ ನಾಲೆ ಬಳಿ ಈ ಘಟನೆ ನಡೆದಿದೆ. ಜನುಮ ದಿನದ ಸಂಭ್ರಮದಲ್ಲಿದ್ದ ಪ್ರಕಾಶ್ ಅವರ ಪುತ್ರ ಪ್ರತೀಶ್ ಕಾಲು ಜಾರಿಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದರು.
ತನ್ನ ಮೂವರು ಸ್ನೇಹಿತರೊಂದಿಗೆ ಹೋಗಿದ್ದಾಗ ಕಾಲು ಜಾರಿ ಬಿದ್ದಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ನಿನ್ನೆ ರಾತ್ರಿಯಿಡೀ 24 ವರ್ಷದ ಪ್ರತೀಶ್’ಗಾಗಿ ಹುಡುಕಾಟ ನಡೆದಿತ್ತು. ಚಿನ್ನ ಬೆಳ್ಳಿ ವ್ಯಾಪಾರ ಹಾಗೂ ತಯಾರಿಕೆಯಲ್ಲಿ ತಂದೆಯೊಂದಿಗೆ ಮಗ್ನರಾಗಿದ್ದ ಪ್ರತೀಶ್ ನೀರಿನಲ್ಲಿ ಕೊಚ್ಚಿಹೋಗಿದ್ದು ಅವರ ಹುಡುಕಾಟದ ಕಾರ್ಯದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕದಳ ಮತ್ತು ಸಾಹಸ ಸಂಸ್ಕೃತಿ ಅಕಾಡಮಿ ಮುಂದಾಗಿತ್ತು. ಇದರ ನಡುವೆ ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಸೇರಿ ಮೃತದೇಹ ಪತ್ತೆ ಹಚ್ಚುವಲ್ಲಿ ಪ್ರಮುಖಪಾತ್ರ ವಹಿಸಿದ್ದರು.
ನಿನ್ನೆಯಿಂದ ಸ್ಥಳದಲ್ಲಿದ್ದ ತುಂಗಾನಗರ ಪಿಎಸ್ಐ ತಿರುಮಲೇಶ್ ಹಾಗೂ ಸಿಬ್ಬಂದಿಗಳು ಹಾಗೂ ಹಿರಿಯ ಅಧಿಕಾರಿಗಳು ಸಹ ನೆರವಾಗಿದ್ದರು.
ಈ ಸಂದರ್ಭದಲ್ಲಿ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಪ್ರಮುಖರಾದ ಡಿ.ಎಸ್. ಅರುಣ್, ಚನ್ನಬಸಪ್ಪ (ಚೆನ್ನಿ) ಐಡಿಯಲ್ ಗೋಪಿ, ಅ.ನಾ. ವಿಜಯೇಂದ್ರರಾವ್ ಸೇರಿದಂತೆ ಹಲವರಿದ್ದರು.
Get In Touch With Us info@kalpa.news Whatsapp: 9481252093
Discussion about this post