No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Monday, July 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಈ ವಿಶ್ವ ಸಂತ ಜೋಳಿಗೆ ಹಿಡಿದು ಓಡಾಡಿದ್ದು ಮುಂದಿನ ಪೀಳಿಗೆಗಾಗಿ

ಗುರು ಮಾತ್ರವಲ್ಲ ತಾಯಿಯನ್ನೂ ಕಳೆದುಕೊಂಡಿದ್ದೇವೆ

kalpa News by kalpa News
January 2, 2020
in Special Articles
0
ಈ ವಿಶ್ವ ಸಂತ ಜೋಳಿಗೆ ಹಿಡಿದು ಓಡಾಡಿದ್ದು ಮುಂದಿನ ಪೀಳಿಗೆಗಾಗಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಬದುಕಿನುದ್ದಕ್ಕೂ ಬಯಸಿದ್ದು ಕೇವಲ ಮಾನವ ಕಲ್ಯಾಣವನ್ನು…ಸ್ವಾರ್ಥ ಎಂಬ ಶಬ್ದವಿಲ್ಲದ ಕೋಶವನ್ನೋದಿದವರು ಮಾತ್ರ ದೊಡ್ಡವರಾಗುವರೇನೋ ಎಂದೆನಿಸುತ್ತದೆ.

ತಾಯಿ ಮಾತ್ರ ಹೆತ್ತು ತಾಯಿಯ ಸ್ಥಾನವನು ತುಂಬುವಳು. ತಂದೆಯೂ ಆಗಿ ಹೊರಬಲ್ಲಳು. ಗುರುವೂ ಆಗಿ ತಿದ್ದಿ ಮುನ್ನಡೆಸುವಳು. ಗೆಳತಿಯೂ ಆಗಿ ಮನಸನು ಹಂಚಿಕೊಳ್ಳುವಳು. ಬಂಧುವೂ ಆಗಿ ಕೈಚಾಚಬಲ್ಲಳು. ಬಳಗವೂ ಎನಿಸಿ ಹೆಗಲು ಕೊಡಬಲ್ಲಳು. ಶ್ರೀವಿಶ್ವೇಶತೀರ್ಥಶ್ರೀಪಾದರು ನಮಗೆ ಅಕ್ಷರಶಃ ಈ ಬಗೆಯ ತಾಯಿಯಾಗಿದ್ದಾರೆ.

ತಾಯಿ ಇಷ್ಟ ಆಗುವುದೇ ತ್ಯಾಗದಿಂದ. ಆ ತ್ಯಾಗ ನಮಗೆ ತಿಳಿದಿರುವುದಿಲ್ಲ ಅಷ್ಟೆ. ಮಗುವಾಗಿದ್ದಾಗ ರೆಚ್ಚೆ ಹಿಡಿದು ನಿದ್ದೆಡಿಸಿರುತ್ತೇವೆ. ಬೇಡವೆಂದುದನ್ನೇ ಮಾಡಿ ತಾಳ್ಮೆಯನ್ನು ತಾಳೆ ಹಿಡಿದಿರುತ್ತೇವೆ. ಅವಳಿಗೆ ನೂರಾರು ಜವಾಬ್ದಾರಿಗಳಿರುವುದನ್ನು ತೋರಗೊಡದೆ ನಮಗೆ ಪ್ರಪಂಚವಾಗಿರುತ್ತಾಳೆ. ಕಷ್ಟಗಳ ಹೊಟ್ಟೆಯಲ್ಲೇ ಹೊತ್ತು ನಮ್ಮನ್ನು ಅವುಚಿಕೊಂಡೆ ಅತ್ತಿದ್ದಾಳೆ. ಕೇಳಿದರೆ ನಕ್ಕುಬಿಟ್ಟಿದ್ದಾಳೆ. ತಣ್ಣೀರಿನ ಬಟ್ಟೆ ಏಕೆಂದಾಗ ಹೊಟ್ಟೆ ನೋವೆಂದಿದ್ದಾಳೆ. ಆದರೆ ನಮಗೆಂದೂ ಆ ಬಟ್ಟೆಯನ್ನು ಕಟ್ಟಿ ನೋವು ಗುಣಪಡಿಸಲಿಲ್ಲ. ನಾವು ಏಕೆ ಹಾಗೆ ಎಂದು ಎಂದೂ ಕೇಳಲಿಲ್ಲ. ಕೇಳುವ ಬುದ್ಧಿ ಬಂದಿದ್ದಾಗ ಇದೆಲ್ಲವೂ ಮರೆತುಹೋಗಿತ್ತು. ಈಗ ನೆನಪಾಗುತ್ತಿದೆ… ಕೇಳಲಾಗುತ್ತಿಲ್ಲ..

ತಂದೆ ಮೆಚ್ಚೆನಿಸುವುದು ಬೇಕೆನಿಸಿದ್ದನ್ನು ಕೇಳುವ ಮುನ್ನವೇ ತಂದುಕೊಡುವ ನಮ್ಮ ಗೋಡೆಗಳ ನಡುವಿನ ಪ್ರಪಂಚದ ಹೀರೋ. ತನ್ನ ಆಸೆಗಳ ಬಚ್ಚಿಟ್ಟು ಹೊರೆ ಎಂದುಕೊಳ್ಳದೆ ಹೊರುವ ಶಕ್ತಿ. ತಿಳಿಯದೆ ಬಂದೊದಗಿದ ಹಲವು ಆಪತ್ತುಗಳ ಪರಿಹರಿಸಿ ನಮ್ಮ ನಗುವೊಂದನ್ನೆ ಪ್ರಶಸ್ತಿಯಾಗಿ ಸ್ವೀಕರಿಸಿ ಹೆಮ್ಮೆ ಪಡುವ ಹೋರಾಟಗಾರ. ಬೆಳೆದಿರುವೆವು ಎಂದುಕೊಂಡು ಪ್ರಶ್ನಿಸಿದಾಗಲು ಹೆಗಲಿಗೆ ಕೈಹಾಕಿ ಮಾತಾಡಿಸುವಾಗ ಕೈಕೊಡವಿದ್ದನ್ನೂ ಹದವಾಗಿ ಸ್ವೀಕರಿಸುವ ಪ್ರಬುದ್ಧ. ಹೆತ್ತವರ ನಗು ನಾವು ಹೆತ್ತವರೆನಿಸುವವರೆಗು ಅರಿವಾಗುವುದೆ ಇಲ್ಲ. ಈಗ ಅರಿವಾಗುತ್ತಿದೆ… ಬಿಡಿಸಲಾಗುತ್ತಿಲ್ಲ..

ಬೆಳೆದಂತೆ ನಮ್ಮ ಬದುಕನ್ನು ಆವರಿಸಿಕೊಳ್ಳುವುದು ಗುರು. ಅವರ ವಿದ್ಯೆಯ ಭಾರ, ಅವರ ನಡೆಯ ದೊಡ್ಡತನ, ಅವರ ಆತ್ಮವಿಶ್ವಾಸದ ಸಿರಿವಂತಿಕೆ, ಹೇಳಿಕೊಡುವ ಕಲೆಗಾರಿಕೆ ಇವೆಲ್ಲ ಸೇರಿಕೊಂಡ ಗುರು ಆವರಿಸಿಕೊಳ್ಳದೆ ಇರುವುದಾದರೂ ಹೇಗೆ??

ತನ್ನ ಮಕ್ಕಳಿಗಿಂತಲು ಹೆಚ್ಚು ಪ್ರೀತಿಸಬಲ್ಲ ಶಕ್ತಿ ಇರುವುದಾದರೆ ಅದು ಗುರುವಿಗೆ ಮಾತ್ರ. ಶಿಕ್ಷೆಯಿಂದ ಶಿಕ್ಷಣ ನೀಡಿ, ಮತ್ತೆ ಹೆತ್ತು, ಶಿಷ್ಯನ ಅದಟನ್ನು ಅಳೆದು, ಗುರುತಿಸಿ ತಕ್ಕುದಾದಷ್ಟೆ ಬಡಿಸುವ ತಾಕತ್ತೇ ಗುರು. ಜೀವನಾನುಭವಗಳ ಹೊಸೆದು ಸಿಪ್ಪೆ ಸುಲಿದಂತೆ ಪಠ್ಯದಾಚೆಗಿನ ಹೊಚ್ಚ ಅಚ್ಚ ಬದುಕನ್ನು ಬಣ್ಣತುಂಬಿ ಕಟ್ಟಿಕೊಡುವ ನಿಸ್ಸೀಮ. ಜಂಜಡಗಳೆಲ್ಲ ಇಲ್ಲಿ ವಿಶ್ರಾಮ.

ಮೊದಲು ಮಾನವೀಯತೆಯಿಂದ ಒಡಗೂಡಿದ ಭಾರತೀಯತೆ. ನಂತರ ಧರ್ಮ, ಭಾಷೆ, ವೃತ್ತಿ, ಪ್ರಾಂತ್ಯ, ಸಂಸ್ಕೃತಿಗಳ ಗಡಿಯೆಂದು ಬೋಧಿಸಿದಾತನೆ ನಿಜವಾದ ಗುರು. ಗಿಣಿ ಕುಕ್ಕಿದ ಹಣ್ಣೆಂಬಂತೆ ಬರಬಹುದಾದ ಸಂಶಯಗಳ ತಾವೇ ಬಿಚ್ಚಿ ಸರಳ ಉತ್ತರ ನೀಡುತ್ತಿರುತ್ತಾರೆ. ಆಗ ಬೇರೆಡೆಗೆ ಜಾರಿದ ಬಗೆ ಗಮನಿಸಲಿಲ್ಲ. ಈಗ ಸಂದೇಹಿಸುತ್ತಿದೆ. ಯಾವುದು ಕಳಿತ ಹಣ್ಣು??? ಗುರುತು ಹತ್ತುತ್ತಿಲ್ಲ….

ಗೆಳೆಯ ನೋ ಗೆಳತಿ ಯೋ ಇರುವಾಗ ಬದುಕು ಹಸನೆನಿಸುತ್ತದೆ. ತಪ್ಪುಗಳ ತಪ್ಪಿಸಿ, ಸರಿದಾರಿ ತೋರುವ ಸರದಾರ. ಕೊರತೆಗಳ ಗುಟ್ಟು ಮುಚ್ಚಿಟ್ಟು ಪ್ರತಿಭೆಗಳ ಬಿಚ್ಚಿಡುವ ಹರಿಕಾರ. ಆಪತ್ತುಗಳ ಬಿರುಕನ್ನು ಸಂಬಂಧಗಳ ಹರುಕನ್ನು ಹೊಲಿವ ನೇಕಾರ. ತಪ್ಪದೆ, ಸರಿಹೊತ್ತಿಗೆ ಕೈಚಾಚಿ ಬದುಕಿಸುವ ಜೊತೆಗಾರ. ಆಗಲೆ ನೇಹಿಗತನಕ್ಕೊಂದು ಬೆಲೆ. ಅಂತಹ ಕೆಳೆತನ ಜೊತೆಗಿದ್ದರೂ ಕೆಡುಕು ಬಗೆವವರನ್ನೆ ಒಪ್ಪಿಕೊಳ್ಳತ್ತದೆ. ತಪ್ಪುಗಳ ಬೆಂಬಲಿಸುವುದನೆ ಮನ ಹಚ್ಚಿಕೊಳ್ಳುತ್ತದೆ.

ಎಲ್ಲೋ ಅಂಟಿಕೊಂಡಿದೆ ಎಂದು ತಿಳಿಯುತ್ತಿದೆ ಬಿಡಿಸಲಾಗುತ್ತಿಲ್ಲ… ಬಂಧಗಳಿಂದ ಬಿಡಿಸಿ ಹೊರತರುವ ಬಂಧು ಎಲ್ಲರೂ ಒಂದಾಗಿರಲು ಒತ್ತಾಯಿಸುತ್ತಿರುತ್ತಾನೆ. ಮನೆಯೊಳಗಣ ಹುಳಕು ಹೊರಬೀಳದಂತೆ ಎಚ್ಚರವಹಿಸುತ್ತಾನೆ. ಎಡವಿದ್ದನ್ನು ಅಲ್ಲಲ್ಲಿಯೆ ತೋರಗೊಟ್ಟು ಹಿರಿಯನೆನಿಸಿ ತಾನು ನಡೆದ ದಾರಿಯನು ಹಾಸಿಹೋಗುತ್ತಾನೆ. ಸಣ್ಣತನ ಅಧಿಕಾರ ಕುಹಕ ಹೊಟ್ಟೆಕಿಚ್ಚುಗಳಿಂದ ಕೌಟುಂಬಿಕ ಸಾಮರಸ್ಯ ಕೆಡದಂತೆ ತಡೆಯಲು ತಾನೆ ಏಟು ತಿನ್ನುತ್ತಾ ಗೋಡೆಯಾಗುತ್ತಾನೆ. ಇದೆ ತಡೆಯೆಂದು ಭಾವಿಸಿ ಗೋಡೆಯನ್ನು ಕೆಡವಿದ್ದೇವೆ. ಕೆಡುಕು ಗುಟುರು ಹಾಕಿಕೊಂಡು ಓಡೋಡಿ ನಮ್ಮತ್ತ ಬರುತ್ತಲಿದೆ. ಅಡಗಿಕೊಳ್ಳಲು ಗೋಡೆ ಇಲ್ಲ..

ತಾಯಿಯಂತಿದ್ದ ತಮ್ಮ ಗುರು ಪೇಜಾವರ ಶ್ರೀಗಳೊಂದಿಗೆ ಕೃಷ್ಣರಾಜ ಕುತ್ಪಾಡಿ

ಸಮಾಜ ಬಳಗದಿಂದಲೆ ಗಟ್ಟಿಗೊಳ್ಳುತ್ತದೆ. ಎಲ್ಲರ ಕಲ್ಯಾಣದ ನೊಗ ಹೊರುವ ಬಳಗ ಬದುಕನು ಬೆಳಗುತ್ತದೆ. ಎಲ್ಲರೂ ತಮ್ಮ ಪಕ್ಕದಲ್ಲಿದ್ದವರನು ಎತ್ತಿದರೆ ಸಮಾಜದ ಕೊರೆ ಮರೆಯಾಗುತ್ತದೆ. ನೀರಿನಲ್ಲಿ ಕುಳಿ ಉಳಿಯದಂತೆ. ನಮ್ಮ ಬಳಗವೆಂದರೆ ಸಾಮಾಜಿಕ-ಧಾರ್ಮಿಕ ಕಳಕಳಿಯಿಂದ ಸಾಂಸ್ಕೃತಿಕ-ಚಾರಿತ್ರಿಕ ಬಳುವಳಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಮಹತ್ತರ ಹೊಣೆ ಹೊತ್ತಿರುವ ಮೇಲ್ಮಾಳಿಗೆ. ಕೊಳಗಗಳಲಿ ಅಳೆಸಿಕೊಂಡರೂ ಹಳ್ಳವಿದ್ದಲ್ಲಿಗೆ ಹರಿಯಗೊಡುವ ಜೋಳಿಗೆ… ಸೋರುತಿಹುದು ಮನೆಯ ಮಾಳಿಗೆ…ಜಾರುತಿಹುದು ಹೆಗಲ ಜೋಳಿಗೆ…

ಎಲ್ಲ ಬಗೆಯ ಸಂಬಂಧಗಳನ್ನೂ ಒಟ್ಟಿಗೆ ನಿಭಾಯಿಸಬಲ್ಲ ನಮ್ಮೆಲ್ಲರ ತಾಯಿ ಈ ಹೊತ್ತು ನಮ್ಮೊಂದಿಗಿಲ್ಲ… ಯಾವ ದೃಷ್ಟಿಯಿಂದ ಗಮನಿಸಿದರೂ ಯಾವ ಹಿನ್ನೆಲೆಯಿಂದ ಬಂದವನಾದರೂ ಈ ತಾಯಿಯಲ್ಲಿ ಕಲಿಯುವಂತದ್ದು ತುಂಬ ಇದೆ. ಎಲ್ಲಬಗೆಯ ಶಾಸ್ತ್ರಗಳಲ್ಲಿಯೂ ಎತ್ತಿದ ಕೈ. ವಿದ್ಯಾ-ಪ್ರೇಮಿ. ಸೂಕ್ಷ್ಮ-ಗ್ರಾಹಿ. ಅಗಾಧವಾದ ನೆನಪಿನ ಮುದ್ದೆ. ನಿರಂತರ ಪಾಠ-ಪ್ರವಚನಗಳಲ್ಲಿ ತೊಡಗಿಸಿಕೊಂಡು ಕ್ಷಣವನ್ನೂ ವ್ಯರ್ಥಗೊಳಿಸದ ಕ್ರಿಯಾಶೀಲ. ಭಕ್ತಾನುಕಂಪಿ. ಶಿಷ್ಯ-ವತ್ಸಲ. ಕಠಿಣ ವಿಷಯಗಳನು ಸರಳೀಕರಿಸುವ ವಾಕ್ಪಟು. ಸಾರಗ್ರಾಹಿ. ಸಂಸ್ಕೃತ ಕನ್ನಡ ಎರಡರಲ್ಲೂ ಅಸೀಮ ಬರೆಹಗಾರ. ಎಲ್ಲ ಬಗೆಯ ಜನರನ್ನು ನಿಭಾಯಿಸುವ, ಸಮಾನವಾಗಿ ಪ್ರೀತಿಸುವ ಮಾನವತಾ-ವಾದಿ. ಕಲಾ-ಪೋಷಕ. ಕವಿ-ಹೃದಯಿ. ರಸಾಸ್ವಾದಕ. ಪ್ರಾಣೋಪಾಸಕ. ತಪಸ್ವೀ. ಕೃಷ್ಣ-ಪೂಜಾ-ಸೇವಕ. ಅನುಷ್ಠಾನ-ಶೀಲ. ತುಳಿತಕ್ಕೊಳಗಾದವರ ದನಿ. ಪರಿಸರ ಪ್ರಿಯ. ದೀನರಾದ ನಾನಾ-ಜನರ ಶುಶ್ರೂಷಕ. ಮುಗ್ಧ-ಶುದ್ಧ-ಹೃದಯಿ. ರಾಜ-ಗುರು. ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ, ನಕ್ಸಲರ ಮನವೊಲಿಸಿದ ಸಮಾಜ-ಸುಧಾರಕ. ಧಾರ್ಮಿಕ ಮುಖಂಡ. ಇಂಥವರನು ಕಳೆದುಕೊಂಡು ಮಾನವ ಸಮಾಜ ಬರಿದಾಗಿದೆ.

ಆದರೂ…… ನಮ್ಮ ತಾಯಿ..
ಕೊಟ್ಟು ಹೋದ ನುಡಿಸಿರಿ ಬೆಳಕು ಎದೆಯಲ್ಲಿ ಹರಳಾಗಿದೆ.
ಬಿಟ್ಟು ಹೋದ ಗುರಿಹೊತ್ತ ದಾರಿ ನಡೆದಾಡಿ ಹದವಾಗಿದೆ.
ನೆಟ್ಟು ಹೋದ ಆಲದ ಮರ ಎಲ್ಲ ಜೀವಿಗಳಿಗು ನೆರಳಾಗಿದೆ.
ಇಟ್ಟುಹೋದ ನಮ್ಮ ಮೇಲಿನ ಭರವಸೆ ನಡೆಸಿ ಕೊಡುವ ಸಮಯ ಬಂದಿದೆ..

ಇಂತಿ ನಿಮ್ಮ ಮಗು
ಭಾರತೀಯ


Get in Touch With Us info@kalpa.news Whatsapp: 9481252093

Tags: GuruHumanityKannada News WebsiteKrishnaraja KuthpadiLord KrishnaMotherPejawar seerPejawara SwamijiSpecial ArticleSri Vishvesha Teertha Swamijiಉಡುಪಿ ಶ್ರೀಕೃಷ್ಣಕೃಷ್ಣರಾಜ ಕುತ್ಪಾಡಿಪೇಜಾವರ ಶ್ರೀಮಾನವೀಯತೆಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ
Share214Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮಹಾಪ್ರಳಯ ಕಾಲದ ಕಾಲಗಣನೆ: ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವ ಆ ಕಾಲ ಯಾವುದು ಗೊತ್ತಾ?

Next Post

ಸೌಂದರ್ಯದ ಖನಿ, ಅಭಿನಯದ ಗಣಿ, ಸಾಧನೆಯೇ ಉಸಿರಾದ ನಮ್ಮ ಈ ಕಲಾವಿದೆ ಶಿಲ್ಪಾ ಶೆಟ್ಟಿ

kalpa News

kalpa News

Next Post
ಸೌಂದರ್ಯದ ಖನಿ, ಅಭಿನಯದ ಗಣಿ, ಸಾಧನೆಯೇ ಉಸಿರಾದ ನಮ್ಮ ಈ ಕಲಾವಿದೆ ಶಿಲ್ಪಾ ಶೆಟ್ಟಿ

ಸೌಂದರ್ಯದ ಖನಿ, ಅಭಿನಯದ ಗಣಿ, ಸಾಧನೆಯೇ ಉಸಿರಾದ ನಮ್ಮ ಈ ಕಲಾವಿದೆ ಶಿಲ್ಪಾ ಶೆಟ್ಟಿ

Leave a Reply Cancel reply

Your email address will not be published. Required fields are marked *

No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL