ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪೌರ ಕಾರ್ಮಿಕರ ದಸರಾ #Shivamogga Dasara ಆಯೋಜನೆ ಮಾಡಲಾಗಿದೆ. ಇದು ಅತ್ಯಂತ ಸಂತೋಷದ ಸಂಗತಿ ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಸಂಘದ ಅಧ್ಯಕ್ಷರು ಎ.ಅಮೃತ್ ರಾಜ್ ಹೇಳಿದರು.
ಮಂಗಳವಾರ ನಗರದ ಕುವೆಂಪು ರಂಗಮಂದಿರದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ಪೌರಕಾರ್ಮಿಕರ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Also read: ಹೆಚ್ಎಂಟಿ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ: ಕೇಂದ್ರ ಸಚಿವ ಕುಮಾರಸ್ವಾಮಿ
ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಮಾತನಾಡಿ, ಮೊಟ್ಟ ಮೊದಲ ಪೌರ ಕಾರ್ಮಿಕರ ದಸರಾ ಮಾಡಲಾಗಿದೆ. ಪೌರ ಕಾರ್ಮಿಕರ ದಸರಾವನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸಾವಿರಕ್ಕಿಂತ ಹೆಚ್ಚು ಪೌರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವೊಂದು ಕಾರ್ಯಕ್ರಮಗಳು ಇನ್ನು ಬಾಕಿ ಇದ್ದು, ಗೃಹ ಭಾಗ್ಯ, ಸಮುದಾಯ ಭವನವನ್ನು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಪೌರ ಕಾರ್ಮಿಕರ ದಸರಾ ರಾಜ್ಯಕ್ಕೆ ವಿಸ್ತಾರವಾಗಿದೆ. ಯಾವುದೇ ಹಬ್ಬ ಹರಿದಿನಗಳು ಬರಲಿ ಪೌರ ಕಾರ್ಮಿಕರು ಇಲ್ಲದೆ ಆಗುವುದಿಲ್ಲ. ಯಾವುದೇ ಕಾರ್ಯಕ್ರಮ ಯಶಸ್ವಿಯಾವಾಗಲೂ ಪೌರ ಕಾರ್ಮಿಕರು ಕಾರಣ. ಅವರ ಸೇವೆ ಅತ್ಯಂತ ಪ್ರಮುಖ. ಜನರ ಆರೋಗ್ಯ ಕಾಪಾಡುವ ವೈದ್ಯರು ಪೌರ ಕಾರ್ಮಿಕರು. ಪೌರ ಕಾರ್ಮಿಕರ ಉಪಯೋಗಕ್ಕೆ ಇಟ್ಟನಂತಹ ಒಂದು ವರ್ಷದ ಸಂಪೂರ್ಣ ಹಣವನ್ನು ನೆರೆ ಪರಿಹಾರಕ್ಕೆ ಕೊಟ್ಟಂತಹವರು ಪೌರ ಕಾರ್ಮಿಕರು ಎಂದ ಅವರು, ನಮ್ಮದೇ ಆದ ಧಾರ್ಮಿಕ ಪರಂಪರೆ, ಸಾಂಸ್ಕೃತಿ ಮೇಲೆ ಇರುವಂತಹ ದೇಶ ಇದು. ಹಬ್ಬದಲ್ಲಿ ಸಂತೋಷ, ಸಡಗರ ಸಂಭ್ರಮ ಇದೆ ಎಂದರು.

ಕಾರ್ಯಕ್ರಮದಲ್ಲಿ ಸಾಯಿ ಶಂಕರ್ ಮಾತನಾಡಿದರು. ವೇಣುಗೋಪಾಲ್ ಸ್ವಾಗತಿಸಿದರು. ವೇದಿಕೆಯಲ್ಲಿ ಪಾಲಿಕೆಯ ಅಮೋಘ, ಸಾಯಿ ಶಂಕರ್, ನರಸಿಂಹ, ಗಂಗಾಧರ್, ಹರೀಶ್, ಶ್ರೀಧರ್, ಮಂಜಣ್ಣ, ಸುನೀಲ್, ವಸಂತ್, ಶೈಲಜಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      







 
	    	






 Loading ...
 Loading ... 
							



 
                
Discussion about this post