ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂತೋಷ್ ಪಾಟೀಲ್ ಪ್ರಕರಣದಲ್ಲಿ ನಾನು ರಾಜೀನಾಮೆ ಕೊಟ್ಟಿದ್ದೆ. ಆದರೆ ಇದೀಗ ಸಚಿನ್ ಪಾಂಚಾಳ್ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ #Priyank Kharge ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ಆಗ್ರಹಿಸಿದರು.
ಈ ಕುರಿತಂತೆ ಮಾತನಾಡಿದ ಅವರು, ನಾನು ರಾಜೀನಾಮೆ ಕೊಡುವಾಗ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ #Basavaraja Bommai ಕೂಡಾ ಬೇಡ ತಡೀರಿ ಅಂದಿದ್ದರು. ಈಗ ಬಿಜೆಪಿಯವ್ರು ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಸೌಂಡ್ ಮಾಡಬೇಕಿತ್ತು. ಅವರು ಸೌಂಡ್ ಮಾಡಿದ್ರೂ ಮಾಧ್ಯಮದವರು ಯಾಕೆ ಸರಿಯಾಗಿ ತೋರಿಸ್ಲಿಲ್ವೋ ಗೊತ್ತಿಲ್ಲ. ರಾಜಕೀಯ ಪಕ್ಷವಾಗಿ ಬಿಜೆಪಿ ಹೋರಾಟ ಮಾಡಿದೆ. ನಾನು ಬಿಜೆಪಿಯನ್ನು ಸಮರ್ಥನೆ ಮಾಡುತ್ತಿಲ್ಲ, ಅವರ ಹೋರಾಟ ಅವ್ರು ಮಾದ್ದಾರೆ. ಆದ್ರೆ ಪ್ರಿಯಾಂಕ್ ಖರ್ಗೆ ಉತ್ತರ ಏನು ಕೊಟ್ರು? ಎಂದು ಪ್ರಶ್ನಿಸಿದರು.
Also read: ಆದಾಯ ಕೊಡುವ ಬಿದಿರು ಯಾವ ವಾಣಿಜ್ಯ ಬೆಳೆಗೂ ಕಡಿಮೆಯಿಲ್ಲ: ಡಾ.ಮಹೇಶ್ವರಪ್ಪ
ಕಾಂಗ್ರೆಸ್’ಗೆ ನೈತಿಕತೆ ಇಲ್ಲ, ನೈತಿಕತೆ ಇದ್ದರೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆದುಕೊಳ್ಳಿ. ನಿರ್ದೋಷಿಯಾಗಿ ಹೊರ ಬಂದರೆ ಒಂದು ನಿಮಿಷವೂ ಕಾಯದೇ ವಾಪಸ್ ಮಂತ್ರಿ ಮಾಡಲಿ ಎಂದು ಸವಾಲು ಹಾಕಿದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಡೆತ್ ನೋಟ್ ಟೈಪ್ ಮಾಡಲಾಗಿತ್ತು, ಆತನ ಸಹಿಯೂ ಇರಲಿಲ್ಲ. ಇಲ್ಲಿ ಸಚಿನ್ ಡೆತ್ ನೋಟಿನಲ್ಲಿ ಅವನದ್ದೇ ಕೈಬರಹ ಅಂತ ಎಫ್’ಎಸ್’ಎಲ್ ವರದಿ ಬಂದಿದೆ. ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಲೇಬೇಕು, ಇವತ್ತೋ, ನಾಳೆಯೋ ಕೊಡಬೇಕು. ನಾನು ಸಂತೋಷ್ ಪಾಟೀಲ್ ಪ್ರಕರಣದಲ್ಲಿ ರಾಜೀನಾಮೆ ಕೊಟ್ಟಿದ್ದಕ್ಕೆ ನನ್ನನ್ನು ಎಲ್ಲರೂ ಮೆಚ್ಚುತ್ತಿದ್ದಾರೆ. ಹೀಗೆ ಪ್ರಿಯಾಂಕ್ ಖರ್ಗೆಯೂ ರಾಜೀನಾಮೆ ಕೊಟ್ರೆ ಜನ ಮೆಚ್ಚುತ್ತಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post