ಮೈಸೂರು: ಉಪ್ಪರ ಸಂಘದ ವಸತಿ ನಿಲಯದ ಊಟದ ವೆಚ್ಚಕ್ಕಾಗಿ 15 ಲಕ್ಷ ರೂ. ಅನುದಾನವನ್ನು ಸರ್ಕಾರದಿಂದ ಕೊಡಸಲು ಪ್ರಯತ್ನ ಮಾಡುತ್ತೇನೆ. ಅದು ಆಗದಿದ್ದಲ್ಲಿ ನಾನೇ ಸ್ವತಃ ಕೊಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಭರವಸೆ ನೀಡಿದರು.
ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರ ಸಂಘದ ಬೃಹತ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಿನ್ನೆ ಉದ್ಘಾಟಿಸಿ ಅವರು ಮಾತನಾಡಿದರು.ಓದುವುದು ಕಷ್ಟ, ರಾಜಕಾರಣ ಮಾಡುವುದು ಸುಲಭ. ಮಠಗಳಿಗೆ ಹಣ ಕೊಟ್ಟಿದ್ದಕ್ಕೆ ಸರ್ಕಾರ ಮಾಡುವ ಕೆಲಸವನ್ನು ಶ್ರೀಮಠಗಳಿಗೆ ಮಾಡುತ್ತಿವೆ. ಮನವಿ ಕೊಟ್ಟ ಮೇಲೆ ಅದನ್ನು ಮಾಡಿಸಿಕೊಳ್ಳಬೇಕು. ಉನ್ನತ ವ್ಯಾಸಂಗಕ್ಕೆ ತೊಂದರೆಯಾದರೆ ನೀವು ಸ್ವಾಮೀಜಿಗಳ ಹತ್ತಿರ ಬನ್ನಿ. ಅವರೊಂದಿಗೆ ನಾನು ಇದ್ದೇನೆ, ಯಾವತ್ತೂ ಇರುತ್ತೇನೆ ಎಂದು ಭರವಸೆ ನೀಡಿದರು.
ಈ ಸಮಾರಂಭದಲ್ಲಿ ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ, ಅಯ್ಯನ ಸರಗೂರು ಮಠದ ಶ್ರೀ ಚಿನ್ನಸ್ವಾಮೀಜಿ ಮತ್ತು ನೌಕರರ ಸಂಘದ ಪದಾಧಿಕಾರಿಗಳು ಮತ್ತು ಹಿರಿಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು.
Discussion about this post