ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಳೆದ 20 ವರ್ಷಗಳಿಂದ ಹಲವಾರು ಬ್ಯಾಂಕಿನವರಿಗೆ ಈ ಭಾಗದ ಕೈಗಾರಿಕೆಗೆ ಹಾಗೂ ಕೆಲಸ ಮಾಡುವಂತಹ ಕಾರ್ಮಿಕರಿಗೆ ಸಹಾಯ ಆಗುವಂತೆ ಶಾಖೆಯನ್ನು ಪ್ರಾರಂಭ ಮಾಡಲು ಹಲವಾರು ಬಾರಿ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಆದರೆ ಕೆನರಾ ಬ್ಯಾಂಕ್ ನಮ್ಮ ಮನವಿಯನ್ನು ಪುರಸ್ಕರಿಸಿ ಶಾಖೆಯನ್ನು ಪ್ರಾರಂಭ ಮಾಡಿರುವುದು ಅತ್ಯಂತ ಸಂತಸ ತಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್ ರುದ್ರೇಗೌಡ ಹೇಳಿದರು.
ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೆನರಾ ಬ್ಯಾಂಕಿನ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಕೈಗಾರಿಕೆಗಳಿಗೆ ಆರ್ಥಿಕವಾಗಿ ಬಲ ತುಂಬುವಂತಹ ಕೆಲಸ ಕೆನರಾ ಬ್ಯಾಂಕಿನಿಂದ ಆಗಿರುವುದು ಬಹಳ ಒಳ್ಳೆಯ ಸಂಗತಿ ಎಂದರು.
ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇರುವಂತಹ ಎಲ್ಲಾ ಕೈಗಾರಿಕೆಗಳು ಬಹಳ ಅಚ್ಚುಕಟ್ಟಿನಿಂದ ನಡೆಯುತ್ತಿದೆ. ಯಾವ ಕೈಗಾರಿಕೆಯು ರೋಗ ಗ್ರಸ್ತವಾಗಿಲ್ಲ ಹಿಂದಿನ ದಿನಗಳಲ್ಲಿ ಬ್ಯಾಂಕುಗಳು ಕೇವಲ ವರ್ಕಿಂಗ್ ಕ್ಯಾಪಿಟಲ್ ಮಾತ್ರ ನೀಡುತ್ತಿದ್ದವು ಟರ್ಮ್ ಲೋನ್ ಅನ್ನೋ ನೀಡುತ್ತಿರಲಿಲ್ಲ. ನಂತರ ದಿನಗಳಲ್ಲಿ ಎಲ್ಲ ರೀತಿಯ ಆರ್ಥಿಕ ಸೌಲಭ್ಯವನ್ನು ಬ್ಯಾಂಕ್ ನಿಡುತ್ತಿರುವುದು ಕೈಗಾರಿಕೆಗಳಿಗೆ ಬಹಳ ಸಹಾಯವಾಗುತ್ತಿದೆ. ಈ ಕೈಗಾರಿಕಾ ಪ್ರದೇಶದಲ್ಲಿ ಶಾಖೆ ಪ್ರಾರಂಭ ಮಾಡಿರುವುದು 15000 ರಿಂದ 16,000 ಕಾರ್ಮಿಕರಿಗೆ ಬಹಳ ಸಹಾಯವಾಗುತ್ತಿರುವುದು ಸಂತಸದ ವಿಚಾರ ಎಂದರು.
Also read: ಪ್ರಕೃತಿ ಸತ್ಯಗಳನ್ನು ಸಾಹಿತ್ಯದ ಪರಿಭಾಷೆಯಲ್ಲಿ ತೆರೆದು ತೋರಿಸಿದವರು ಪೂರ್ಣಚಂದ್ರ ತೇಜಸ್ವಿ
ನಂತರ ಬ್ಯಾಂಕಿನ ಜನರಲ್ ಮ್ಯಾನೇಜರ್ ರಾಮ ನಾಯಕ್ ಮಾತನಾಡಿ, ಕೋವಿಡ್ ನಂತರದಲ್ಲಿ ಕರ್ನಾಟಕದಲ್ಲಿ ನೂತನ ಶಾಖೆ ಪ್ರಾರಂಭವಾಗುತ್ತಿರುವುದು ಇದು ಮೊದಲನೇ ಶಾಖೆ. ಬಹಳ ದಿನಗಳ ಪ್ರಯತ್ನದ ನಂತರ ಕನಸು ನನಸಾಗಿದೆ. ಕೈಗಾರಿಕಾ ಪ್ರದೇಶದ ಕಾರ್ಮಿಕರು ಬ್ಯಾಂಕಿಗೆ ಹೋಗಲು ಸುಮಾರು 10 ಕಿ.ಮೀ ಪ್ರಯಾಣ ಮಾಡಬೇಕಿತ್ತು. ಆದರೆ ನೂತನ ಶಾಖೆ ಪ್ರಾರಂಭ ಮಾಡಿರುವುದು ಅವರಿಗೆ ಸಹಾಯವಾಗಲಿದೆ. ಕೈಗಾರಿಕೆಗಳಿಗೆ ತ್ವರಿತ ರೀತಿಯಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುವುದು ಬ್ಯಾಂಕಿನ ಎಲ್ಲಾ ಸೌಲಭ್ಯಗಳನ್ನು ಈ ಭಾಗದ ಜನರು ಬಳಸಿಕೊಳ್ಳಲು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕೆನರಾ ವಿದ್ಯಾ ಜ್ಯೋತಿ ಸ್ಕೀಮಿನ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ನೀಡಲಾಯಿತು. ಬ್ಯಾಂಕಿನ ರೀಜನಲ್ ಹೆಡ್ ಸಂದೀಪ್ ರಾವ್, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಸಂಘದ ಅಧ್ಯಕ್ಷ ರಮೇಶ ಹೆಗಡೆ, ಹಿರಿಯ ಉದ್ಯಮಿ ನಂಜುಂಡ ಶೆಟ್ರು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ್ ಹಾಗೂ ಉದ್ಯಮಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post