No Result
View All Result
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್
English Articles

LinkedIn shares Bengaluru’s Top Companies for career growth in 2026

by ಕಲ್ಪ ನ್ಯೂಸ್
May 20, 2026
0

Kalpa Media House  |  India | LinkedIn, the world's largest professional network, today unveiled its 2026 Top Companies list for...

Read moreDetails
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
Ashwini Vaishnaw Flags Off Bengaluru–Mumbai Express; Announces Vande Bharat Sleeper Soon

Ashwini Vaishnaw Flags Off Bengaluru–Mumbai Express; Announces Vande Bharat Sleeper Soon

May 18, 2026
  • Advertise With Us
  • Grievances
  • About Us
  • Contact Us
Thursday, May 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ದಕ್ಷ

ಬುಲೆಟ್ ಸವಾರಿ-22: ಗಂಗಾರಾಮ್ ಕಟ್ಟಡ ಕುಸಿದಾಗ-2

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 3, 2018
in ದಕ್ಷ
0
Share on FacebookShare on TwitterShare on WhatsApp

‘ಕಟ್ಟಡ ಕುಸಿದು ನೂರಕ್ಕೂ ಹೆಚ್ಚು ಜನರ ಸಾವು’ ಎಂದು ಸಂಜೆ ಪತ್ರಿಕೆಯೊಂದು ಮೊದಲ ದಿನವೇ ದಪ್ಪ ಹೆಡ್ಡಿಂಗ್‌ನಲ್ಲಿ ಸುದ್ದಿ ಪ್ರಕಟಿಸಿತ್ತು. ‘ಮಾಧ್ಯಮಗಳು ಬಾಯಿಗೆ ಬಂದಂತೆ ಹೆಡ್ಡಿಂಗ್ ಹಾಕುತ್ತಿವೆ. ದುರಂತವನ್ನು ವೈಭವೀಕರಿಸುತ್ತಿವೆ. ಇಷ್ಟೊಂದು ಜನ ಸಾಯಲು ಸಾಧ್ಯವೇ ಇಲ್ಲ’ ಎಂದು ನಾವೆಲ್ಲ ಅಂದು ಗೇಲಿ ಮಾಡಿದ್ದೆವು. ಆದರೆ, 34 ದಿನಗಳ ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಸತ್ತವರ ಒಟ್ಟು ಸಂಖ್ಯೆ 123 ತಲುಪಿತ್ತು! ಸುಮಾರು 120 ಮಂದಿ ಗಾಯಗೊಂಡಿದ್ದರು.

ಕಟ್ಟಡ ಕುಸಿತಕ್ಕೆ ಹಲವಾರು ಕಾರಣಗಳು ಕೇಳಿ ಬಂದವು. ದೇವಸ್ಥಾನದ ಮುಂದಿನ ಕಲ್ಯಾಣಿಯಲ್ಲಿ ಮಣ್ಣು ತುಂಬಿ ಪಿಲ್ಲರ್ ಎಬ್ಬಿಸಿದ್ದರಿಂದ ಕಟ್ಟಡ ದುರ್ಬಲವಾಗಿತ್ತು. ಜತೆಗೆ ಪಾಲಿಕೆಯ ನಕ್ಷೆಗೆ ವಿರುದ್ಧವಾಗಿ ಏಳು ಮಹಡಿಗಳನ್ನು ಕಟ್ಟಲಾಗಿತ್ತು. ಕಟ್ಟಡ ನಿರ್ಮಾಣ ಸಂಪೂರ್ಣ ಕಳಪೆಯಾಗಿತ್ತು. ಸಾಲದೆಂಬಂತೆ ಮಹಡಿಯ ಮೇಲ್ಭಾಗ ಪೂರ್ತಾ ಟ್ಯಾಂಕ್ ಕಟ್ಟಿ ನೀರು ತುಂಬಿಸಲಾಗಿತ್ತು. ಹಾಗಾಗಿ ಕಟ್ಟಡ ಕುಸಿದು ಬಿತ್ತು ಎಂಬ ಆರೋಪ ಕೇಳಿ ಬಂದವು. ಕಾರಣ ಏನೇ ಇದ್ದರೂ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದು ಬೆಂಗಳೂರು ಕಂಡ ಮಹಾ ದುರಂತ.

ಗಂಗಾರಾಮ್ ಬಿಲ್ಡಿಂಗ್ ಹೊಂದಿಕೊಂಡಂತಿದ್ದ ಕಪಾಲಿ ಥಿಯೇಟರ್‌ನಲ್ಲಿ ಆಗ ಡಾ. ರಾಜ್‌ಕುಮಾರ್ ಅಭಿನಯದ ‘ಭಕ್ತ ಪ್ರಹ್ಲಾದ’ ಸಿನಿಮಾ ಪ್ರದರ್ಶನಗೊಳ್ಳುತ್ತಿತ್ತು. ಕಾಕತಾಳೀಯವೆಂದರೆ, ಪ್ರಹ್ಲಾದ ತೋರಿಸಿದ ಕಂಬವನ್ನು ಹಿರಣ್ಯಕಶ್ಯಪ ಗದೆಯಿಂದ ಹೊಡೆದು ಬೀಳಿಸುತ್ತಿದ್ದಂತೆ ಇತ್ತ ಇಡೀ ಕಟ್ಟಡ ಧರೆಗುರುಳಿತ್ತು! ಹೊರಗೆ ಹಾಹಾಕಾರ ನಡೆಯುತ್ತಿದ್ದರೂ ಒಳಗೆ ಸಿನಿಮಾ ನೋಡುತ್ತಿದ್ದವರು ಪೌರಾಣಿಕ ಕತೆಯ ಗುಂಗಿನಲ್ಲಿ ಮುಳುಗಿದ್ದರು. ಕಟ್ಟಡ ಕುಸಿತದಿಂದಾಗಿ ಕಪಾಲಿ ಚಿತ್ರಮಂದಿರದ ಗೋಡೆಗೂ ಹಾನಿಯಾಗಿತ್ತು. ಸಂಭವನೀಯ ಅಪಾಯ ತಡೆಯಲು ನಾವು ಸಿನಿಮಾ ನೋಡುತ್ತಿದ್ದವರನ್ನು ಹೊರಗೆ ಕಳಿಸಬೇಕಿತ್ತು. ಒಮ್ಮೆಲೇ ಕುಸಿತದ ಸುದ್ದಿ ತಿಳಿಸಿದರೆ ಥಿಯೇಟರ್‌ನೊಳಗೆ ಕಾಲ್ತುಳಿತ ಉಂಟಾಗುವ ಸಂಭವ ಇತ್ತು. ಹಾಗಾಗಿ ನಾವು ಉಪಾಯವಾಗಿ ಸಿನಿಮಾ ಪ್ರೇಕ್ಷಕರನ್ನು ಹೊರಗೆ ಕಳಿಸಿದೆವು.

ಪರಿಹಾರ ಕಾರ್ಯದ ಆ 34 ದಿನಗಳು ಭಯಾನಕವಾಗಿದ್ದವು. ನಮಗೆಲ್ಲ ಆ ಕಟ್ಟಡ ಬಳಿಯ ಲಾಡ್‌ಜ್ವೊಂದರಲ್ಲಿ ರೂಮ್ ಮಾಡಿಕೊಡಲಾಗಿತ್ತು. ಅವಶೇಷಗಳೊಳಗಿದ್ದ ಶವಗಳು ಕೊಳೆತು ವಾಸನೆ ಬರಲಾರಂಭಿಸಿತ್ತು. ದುರ್ವಾಸನೆ ತಡೆಯಲಾರದೆ ನಾವು ನೀಲಗಿರಿ ಎಣ್ಣೆ ಅದ್ದಿದ ಬಟ್ಟೆಯನ್ನು ಮೂಗಿಗೆ ಕಟ್ಟಿಕೊಂಡು ಡ್ಯೂಟಿ ಮಾಡುತ್ತಿದ್ದೆವು. ಏಳು ಮಹಡಿಯ ಬಿಲ್ಡಿಂಗ್ ಬಿದ್ದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಸಾವಿರಾರು ಜನ ಕುತೂಹಲದಿಂದ ಸ್ಥಳಕ್ಕೆ ಓಡಿ ಬಂದಿದ್ದರು.

ರಾಮನಗರ, ಚನ್ನಪಟ್ಟಣ ಮುಂತಾದ ದೂರದ ಊರುಗಳಿಂದಲೂ ನೂರಾರು ಜನ ವಿಶೇಷ ವಾಹನ ಮಾಡಿಕೊಂಡು ಆ ಸ್ಥಳಕ್ಕೆ ಬರತೊಡಗಿದರು. ಅದೊಂದು ಪ್ರೇಕ್ಷಣೀಯ ಸ್ಥಳವೆಂಬಂತೆ ತಿಂಗಳುಗಟ್ಟಲೆ ಜನಸಾಗರ ಹರಿದು ಬಂತು. ಹೀಗೆ ಬಂದವರನ್ನು ನಿಯಂತ್ರಿಸುವುದೇ ನಮಗೆ ಸಾಹಸದ ಕೆಲಸವಾಗಿತ್ತು. ಜನರನ್ನು ಸಾಲಾಗಿನಿಲ್ಲಿಸಿ ಗರ್ಭಗುಡಿಯಲ್ಲಿನ ದೇವರ ದರ್ಶನದಂತೆ ಕಟ್ಟಡ ತೋರಿಸಿ ಮುಂದಕ್ಕೆ ಕಳಿಸುತ್ತಿದ್ದೆವು! ಗಂಡನ ಫೋಟೊ ಹಿಡಿದು, ಆತ ಜೀವಂತವಾಗಿ ಮರುಳುತ್ತಾನೋ ಶವವಾಗಿ ಸಿಗುತ್ತಾನೋ ಎಂಬ ಆತಂಕದಲ್ಲಿ ಪುಟ್ಟ ಮಕ್ಕಳ ಜತೆ ರಸ್ತೆ ಪಕ್ಕ ಅಳುಮೋರೆ ಹಾಕಿಕೊಂಡು ಕೂತ ಮಹಿಳೆಯರ ದೃಶ್ಯ ಕರುಳು ಹಿಂಡುತ್ತಿತ್ತು.

ಕುಟುಕು ಜೀವನ ಹಿಡಿದುಕೊಂಡು ಅವಶೇಷಗಳಡಿ ಸಿಲುಕಿದ್ದವರು ದಿನ ಕಳೆದಂತೆ ಒಬ್ಬೊಬ್ಬರೇ ಹೆಣವಾದರು. ಹೀಗೆ ಸಿಲುಕಿಕೊಂಡವರಲ್ಲಿ ಗಂಗಾರಾಮ್ ಬಿಲ್ಡಿಂಗ್ ಮಾಲೀಕರ ಮಗನೂ ಇದ್ದ. ಆತ ಬೇಸ್ಮೆಂಟ್‌ನಲ್ಲಿದ್ದ ತನ್ನ ಕಚೇರಿಯಲ್ಲಿ ಕೂತಾಗ ಈ ದುರ್ಘಟನೆ ನಡೆದಿತ್ತು. ಕಟ್ಟಡ ಧರೆಗುರುಳಿದರೂ ಆತನ ಕಚೇರಿಯ ಲ್ಯಾಂಡ್‌ಲೈನ್ ಚಾಲನೆಯಲ್ಲಿತ್ತು. ಅದರ ಮೂಲಕ ಆತ ತನ್ನ ಕುಟುಂಬ ಮತ್ತು ಪೊಲೀಸ್ ಅಧಿಕಾರಿಗಳ ಜತೆ ಐದಾರು ದಿನ ಧೈರ್ಯವಾಗಿ ಮಾತನಾಡಿದ್ದ. ತನ್ನನ್ನು ಆದಷ್ಟು ಬೇಗ ಹೊರಗೆ ತೆಗೆಯುತ್ತಾರೆ ಎಂಬ ನಂಬಿಕೆ ಆತನಿಗಿತ್ತು. ಕಚೇರಿಯಲ್ಲಿದ್ದ ಚೂರುಪಾರು ಆಹಾರ ತಿಂದು ದಿನ ಕಳೆಯುತ್ತಿದ್ದ. ಆದರೆ ಹತ್ತು-ಹದಿನೈದು ದಿನ ಕಳೆದರೂ ಆತನನ್ನು ರಕ್ಷಿಸಲು ಸಾಧ್ಯವಾಗದೇ ಹೋಯಿತು. ಹಾಗಾಗಿ ಆತ ಉಪವಾಸ ಬಿದ್ದು ಕರುಣಾಜನಕವಾಗಿ ಪ್ರಾಣಬಿಟ್ಟ.

ಭಾರದ ತೊಲೆಗಳನ್ನು ಮೈಲಕ್ಕೆತ್ತಲು ಸಾಧ್ಯವಾಗದೇ ಹೋಗಿದ್ದರಿಂದ ಅನಿವಾರ್ಯವಾಗಿ ಕೆಲವರ ಕೈ, ಕಾಲುಗಳನ್ನು ಕತ್ತರಿಸಿ ಜೀವಂತವಾಗಿ ಹೊರ ತೆಗೆಯಲಾಯಿತು. ವೈಯಾಲಿಕಾವಲ್ ಕಾರ್ಮಿಕರಿಬ್ಬರು ಅನ್ನ, ನೀರಿಲ್ಲದೆ ಸುಮಾರು 15 ದಿನಗಳ ಕಾಲ ಅವಶೇಷಗಳಡಿಯಲ್ಲಿ ಜೀವಂತವಾಗಿದ್ದ ಪವಾಡವೂ ನಡೆಯಿತು. ಪ್ರಜ್ಞೆ ಕಳೆದುಕೊಂಡಿದ್ದ ಅವರಿಬ್ಬರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಬದುಕಿಸಲಾಯಿತು. ಬಾಯಾರಿಕೆ ತಡೆಯಲಾರದೆ ಒಬ್ಬರ ಮೂತ್ರವನ್ನು ಮತ್ತೊಬ್ಬರು ಕುಡಿಯುವ ಮೂಲಕ ಅವರಿಬ್ಬರು ಜೀವ ಉಳಿಸಿಕೊಂಡಿದ್ದರು! ಗಂಗಾರಾಮ್ ಕಟ್ಟಡ ಕುಸಿತವು ಬೆಂಗಳೂರಿನ ಇತಿಹಾಸದಲ್ಲೊಂದು ಕರಾಳ ಅಧ್ಯಾಯ.

ಗಂಗಾರಾಮ್ ಕಟ್ಟಡ ಕುಸಿತವನ್ನು ನೆನಪಿಸಿದರೆ ಈಗಲೂ ಬೆಂಗಳೂರಿಗರ ಮುಖದಲ್ಲಿ ದುಃಖದ ಛಾಯೆ ಆವರಿಸುತ್ತದೆ. 123 ಜನರನ್ನು ಬಲಿ ತೆಗೆದುಕೊಂಡ ಆ ಕಟ್ಟಡದ ಅವಶೇಷಗಳನ್ನು ಪೂರ್ತಾ ತೆರವುಗೊಳಿಸಲು 34 ದಿನಗಳು ಬೇಕಾದವು. ಎಲ್ಲರಿಗಿಂತ ಮೊದಲು ಆ ಘಟನಾ ಸ್ಥಳ ತಲುಪಿದ್ದ ನಾನು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದ್ದೆ.

Tags: Bangalore PoliceBullet SavariDakshaGangaram Building CollapseKalpa NewsTiger BB Ashok Kumar
Share196Tweet123Send
Previous Post

ಇದೊಂದು ಜಗತ್ತು: ಅಂಟಾರ್ಟಿಕ್ ಟ್ರೀಟಿಯ ವಿಧಿಗಳು

Next Post

ಇದೊಂದು ಜಗತ್ತು: ಫ್ರಂಡಿಯನ್ ಅಂಟಾರ್ಟಿಕ್ ಪ್ರೋಗ್ರಾಮ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಇದೊಂದು ಜಗತ್ತು: ಫ್ರಂಡಿಯನ್ ಅಂಟಾರ್ಟಿಕ್ ಪ್ರೋಗ್ರಾಮ್

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

2026ರಲ್ಲಿ ವೃತ್ತಿಜೀವನದ ಬೆಳವಣಿಗೆಗೆ ನೆರವಾಗುವ ಬೆಂಗಳೂರಿನ ಪ್ರಮುಖ 10 ಕಂಪನಿಗಳ ಪಟ್ಟಿ ಪ್ರಕಟಿಸಿದ ಲಿಂಕ್ಡ್‌ ಇನ್

May 20, 2026
“ಮೆಲೋಡಿ” ಮೀಮ್ ಪರಿಣಾಮ: ದಲಾಲ್ ಸ್ಟ್ರೀಟ್‌ನಲ್ಲಿ ಅಚ್ಚರಿ ಷೇರು ಏರಿಕೆ

“ಮೆಲೋಡಿ” ಮೀಮ್ ಪರಿಣಾಮ: ದಲಾಲ್ ಸ್ಟ್ರೀಟ್‌ನಲ್ಲಿ ಅಚ್ಚರಿ ಷೇರು ಏರಿಕೆ

May 20, 2026
GE Aerospace to Invest ₹100 Crore in Pune Facility, Boosting India Manufacturing

ಪುಣೆಯ 100 ಕೋಟಿ ಹೂಡಿಕೆಯೊಂದಿಗೆ ಭಾರತದಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ವೇಗಗೊಳಿಸಲು ಮುಂದಾಗಿರುವ GE ಏರೋಸ್ಪೇಸ್

May 20, 2026
ಅಕ್ರಮ ಮರಳು ಸಾಗಣೆ ವಿರುದ್ಧ ದಾಳಿ : 150 ಟನ್‌ಗೂ ಅಧಿಕ ಮರಳು ಜಪ್ತಿ

ಅಕ್ರಮ ಮರಳು ಸಾಗಣೆ ವಿರುದ್ಧ ದಾಳಿ : 150 ಟನ್‌ಗೂ ಅಧಿಕ ಮರಳು ಜಪ್ತಿ

May 20, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL