ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಮೇ 31ರವರೆಗೂ ಕೊರೋನಾ ವೈರಸ್ ಲಾಕ್ ಡೌನ್ ಅನ್ನು ಕೇಂದ್ರ ಸರ್ಕಾರ ವಿಸ್ತರಣೆ ಮಾಡಿರುವ ಬೆನ್ನಲ್ಲೇ, ನಾಳೆಯಿಂದ ರಾಜ್ಯದಲ್ಲಿ ಕೆಎಸ್’ಆರ್’ಟಿಸಿ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದು, ನಾಳೆಯಿಂದಲೇ ರಾಜ್ಯದಲ್ಲಿ ಸರ್ಕಾರಿ ಬಸ್ ಸಂಚಾರಕ್ಕೆ ಅನುಮತಿ ನೀಡಿದ್ದು, ಒಂದು ಬಸ್’ನಲ್ಲಿ ಗರಿಷ್ಠ 30 ಜನಕ್ಕೆ ಮಾತ್ರ ಅವಕಾಶವಿದ್ದು, ಎಲ್ಲ ಪ್ರಯಾಣಿಕರೂ ಮಾಸ್ಕ್ ಧರಿಸುವುದು ಕಡ್ಡಾಯ. ತಪ್ಪಿದರೆ ಸಾರಿಗೆ ಅಧಿಕಾರಿಗಳು ದಂಡ ಹಾಕುತ್ತಾರೆ ಎಂದಿದ್ದಾರೆ.
ನಾಳೆಯಿಂದ ರಾಜ್ಯದಲ್ಲಿ ಏನಿರುತ್ತದೆ?
ಬಿಎಂಟಿಸಿ, ಕೆಎಸ್’ಆರ್’ಟಿಸಿ, ಈಶಾನ್ಯ, ನೈರುತ್ಯದಲ್ಲಿ ಸಂಚಾರ
ನಾಳೆ ಬೆಳಿಗ್ಗೆಯಿಂದಲೇ ಬಸ್ ಸಂಚಾರ
ಖಾಸಗಿ ಬಸ್’ಗಳ ಸಂಚಾರಕ್ಕೂ ಅವಕಾಶ
ಆಟೋ, ಟ್ಯಾಕ್ಸಿಯಲ್ಲಿ ಡ್ರೈವರ್ ಬಿಟ್ಟು ಇಬ್ಬರಿಗೆ ಅವಕಾಶ
ಮ್ಯಾಕ್ಸಿ ಕ್ಯಾಬ್’ಗಳಲ್ಲಿ ಡ್ರೈವರ್ ಬಿಟ್ಟು ಮೂರು ಜನರಿಗೆ ಅವಕಾಶ
ಟ್ರೈನ್ ಗಳು ನಮ್ಮ ರಾಜ್ಯದಲ್ಲಿ ಮಾತ್ರ ಸಂಚಾರ
ಪಾರ್ಕ್ಗಳಲ್ಲಿ ಬೆಳಿಗ್ಗೆ ಏಳರಿಂದ ಸಂಜೆ ಒಂಬತ್ತು ಗಂಟೆವರೆಗೆ ಓಡಾಟ
ಸಲೂನ್ ಶಾಪ್ ಓಪನ್ ಮಾಡಬಹುದು
ಹೊಟೇಲ್’ಗಳು ಓಪನ್, ಆದರೆ ಪಾರ್ಸಲ್ ಮಾತ್ರ
ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿ ತೆರೆಯೋದಕ್ಕೆ ಷರತ್ತುಬದ್ದ ಅನುಮತಿ
ಷರತ್ತುಬದ್ಧವಾಗಿ ಮದುವೆ ಮಾಡಿಕೊಳ್ಳಬಹುದು
ಏನಿರುವುದಿಲ್ಲ?
ಮಾಲ್, ಸಿನಿಮಾ ಥಿಯೇಟರ್
ಹೊರ ರಾಜ್ಯಗಳಿಂದ ರೈಲು ಸಂಚಾರ ಇಲ್ಲ
ನಮ್ಮ ಮೆಟ್ರೋ ಸಂಚಾರಕ್ಕೆ ನಿರ್ಭಂಧ ಮುಂದುವರಿಕೆ
ಇತರೆ ಮುಖ್ಯಾಂಶಗಳು:
ಹೊರ ರಾಜ್ಯಗಳಿಂದ ಬರೋರಿಗೆ ಹಂತ ಹಂತವಾಗಿ ಬಸ್ ವ್ಯವಸ್ಥೆ
ಸಾಮೂಹಿಕ ಕ್ವಾರಂಟೈನ್ ಮಾಡಲು ತೀರ್ಮಾನ
ಬೇರೆ ರಾಜ್ಯಗಳಿಂದ ಜನ ಬರೋದಕ್ಕೆ ಅವಕಾಶ
ಅನಿವಾರ್ಯ ಕಾರಣಗಳಿದರೆ ಮಾತ್ರ ಅವಕಾಶ
ಪ್ರತೀ ಭಾನುವಾರ ಕಂಪ್ಲೀಟ್ ಲಾಕ್ ಡೌನ್ ಇರುತ್ತೆ
ಎಲ್ಲಿ ಹೆಚ್ಚಾಗಿ ಸೋಂಕಿತರು ಇರುತ್ತಾರೋ ಆ ಪ್ರದೇಶ ಕಂಟೈನ್ಮೆಂಟ್ ಝೋನ್ ಆಗಿ ಪರಿಗಣನೆ
ಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆ ಇಲ್ಲ
ಕ್ರೀಡೆಗೆ ಅವಕಾಶ, ಆದ್ರೆ ಜಿಮ್ ಓಪನ್ ಇಲ್ಲ
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post