ಶಿವಮೊಗ್ಗ: ಸ್ಯಾಂಡಲ್’ವುಡ್ ಪ್ರಖ್ಯಾತ ನಿರ್ದೇಶಕ ಕೆ. ಮಹೇಶ್ ಸುಖಧರೆ ಅವರ ನಿರ್ದೇಶನದಲ್ಲಿ ಮೂಢಿಬರಲಿರುವ ಪೌರಾಣಿಕ ಧಾರಾವಾಹಿಗೆ ನಟ ನಟಿಯರ ಆಡಿಶನ್ ನಡೆಯಲಿದ್ದು, ಮಲೆನಾಡಿನ ಆಸಕ್ತರು ಪಾಲ್ಗೊಳ್ಳಬಹುದಾಗಿದೆ.
ಕನ್ನಡ ಕಿರುತೆರೆ ಇತಿಹಾಸದಲ್ಲೇ ಜಗತ್ತಿನ ಮಹಾಕಾವ್ಯಗಳಲ್ಲೊಂದಾದ ಶ್ರೀ ಮಲೆ ಮಹದೇಶ್ವರ ಚರಿತ್ರೆಯನ್ನು ಧಾರಾವಾಹಿಯಾಗಿ ರೂಪಿಸುತ್ತಿರುವ ಕೀರ್ತಿ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಕೆ. ಮಹೇಶ್ ಸುಖಧರೆಯವರದು.
ಹಿರಿತೆರೆ ಕಿರುತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಇವರು ಪ್ರಸ್ತುತ ವಿಜಯನಗರ ಸಾಮ್ರಾಜ್ಯದ ನಾಯಕ ಶ್ರೀ ಕೃಷ್ಣದೇವರಾಯ ಹಾಗೂ ತೆನಾಲಿರಾಮನ ಕುರಿತು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿ ನಿರ್ಮಿಸುತ್ತಿದ್ದಾರೆ. ಇದಕ್ಕಾಗಿ ಪ್ರತಿಭಾವಂತ ನಟ ನಟಿಯರು ಬೇಕಾಗಿದ್ದಾರೆ.
ಈ ಕೆಳಕಂಡ ಪಾತ್ರಗಳಿಗೆ ಕಲಾವಿದರು ಸಂಪರ್ಕಿಸಬಹುದು
ತೆನಾಲಿ ರಾಮ: 20-25 ವಯಸ್ಸು
ರಾಮನ ಹೆಂಡತಿ: 18-24 ವಯಸ್ಸು
ರಾಮನ ತಾಯಿ: 40-50 ವಯಸ್ಸು
ರಾಮನ ಗೆಳೆಯ: 10-14 ವಯಸ್ಸು
ಕೃಷ್ಣ ದೇವರಾಯ: 25-30 ವಯಸ್ಸು
ತಾತಾಚಾರ್ಯ: 35-45 ವಯಸ್ಸು
ಕೃಷ್ಣ ದೇವರಾಯನ ರಾಣಿಯರು: 20-25 ವಯಸ್ಸು
ಹಾಗೂ ಇನ್ನೂ ಹಲವಾರು ಪಾತ್ರಗಳಿಗೆ ಪುರುಷರು ಹಾಗು ಮಹಿಳಾ ಪಾತ್ರಧಾರಿಗಳು ಬೇಕಾಗಿದ್ದಾರೆ. ಆಸಕ್ತಿ ಇರುವವರು ಇದೇ ಬರುವ ಭಾನುವಾರ ದಿನಾಂಕ ಮಾರ್ಚ್ 24ರಂದು ಶಿವಮೊಗ್ಗದ ಕಲಾತರಂಗ ಪರ್ಫಾರ್ಮಿಂಗ್ ಆರ್ಟ್ಸ್ ಗ್ಯಾಲರಿ, ಅಶೋಕ ಆರ್ಕೇಡ್, ಎರಡನೇ ಮಹಡಿ, ಗೋಪಾಳ ಮುಖ್ಯ ರಸ್ತೆ, ಶಿವಮೊಗ್ಗ ಇಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ಒಳಗಾಗಿ ತಮ್ಮ ಭಾವಚಿತ್ರದೊಡನೆ (ಪೋಸ್ಟ್ ಕಾರ್ಡ್ ಸೈಜ್) ಭೇಟಿ ನೀಡಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9538313322 8277601801
ರೇಣುಕಪ್ಪ: 9845907703
ಧನುಷ್: 9901203608
Discussion about this post